Skip to product information
1 of 2

Cheemanahalli Rameshababu

ಮಂಪರು

ಮಂಪರು

Publisher -

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 208

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನಮ್ಮ ಮೇಲಿನ ಕಣ್ಣಾವಲುಗಳು ನಮಗೆ ಯಾವತ್ತೂ ರುಚಿಸುವುದಿಲ್ಲವೆಂಬುದು ಎಂಥಾ ಪರಮ ಸತ್ಯ. ಅವರವರ ಕೆಲಸ ಅವರವರು ಅಚ್ಚುಕಟ್ಟಾಗಿ ಮಾಡಿಕೊಂಡು ಹೋದರೆ ಎಲ್ಲವೂ ಸಲೀಸು. ಅಂತಹ ದೊಡ್ಡ ಫಿಲಾಸಫಿಯೇನೂ ಅಲ್ಲ. ಅಥವಾ ಹೌದು. ಆಗ ಈ ಮನುಷ್ಯ ಸಹಜ ಮಾನಸಿಕ ರೋಗರುಜಿನಗಳ್ಯಾವುವೂ ಹತ್ತಿರ ಸುಳಿಯಲಾರವು. ಈ ವ್ಯಂಗ್ಯ, ಅಸೂಯೆ, ಉಡಾಫೆ, ಕುತಂತ್ರ, ಹೇರಿಕೆ, ದಬ್ಬಾಳಿಕೆ, ಯಾವಾಗಲೂ ಕಹಳೆ ಊದುತ್ತಲೇ ಇರುವ ಯುದ್ಧ ಮನೋಭೂಮಿಕೆ... ಅಸಲಿಗೆ ಇವೆಲ್ಲವುಗಳಿಂದ ಮನುಷ್ಯನಾದವನೊಬ್ಬ ಬಿಡುಗಡೆ ಹೊಂದುವುದು ಅಷ್ಟೊಂದು ಸರಳವೆ. ಪ್ರತಿಯೊಬ್ಬ ಮನುಷ್ಯನೂ ತನ್ನ ವ್ಯಕ್ತಿತ್ವಕ್ಕನುಸಾರವಾಗಿ ಸಹಜ ಫಿಲಾಸಫಿಯೊಂದಕ್ಕೆ ಜೋತು ಬಿದ್ದಿರುವುದಿಲ್ಲವೆ. ಗೋಡೆಯ ಮೊಳೆಗೆ ನೇತು ಹಾಕಿರುವ ಅಂಗಿಯ ಹಾಗೆ. ಗೋಡೆಯೊಂದು ನಮ್ಮ ಮನೋಭೂಮಿಕೆಯಾದರೆ ಮೊಳೆಯನ್ನು ನಾವೇ ಹೊಡೆದುಕೊಂಡಿರುತ್ತೇವೆ. ಅಲ್ಲಿ ಅಂಗಿಯೊಂದು ಫಿಲಾಸಫಿ. ಅಂಗಿಯಲ್ಲದಿದ್ದರೆ ಮತ್ತೊಂದು.

ಮೊಳೆ ಹೊಡೆದುಕೊಳ್ಳುವಾಗಿನ ನೋವಿಗೆ ಅದರ ಸಾಂದ್ರತೆಗೆ ಕುಗ್ಗಿ ಹೋಗಿರುವುದರ ಗಮನಿಕೆಯು ಮತ್ತೊಬ್ಬರಿಗೆ ಬರದಿರಲೆಂದು ಕೈಗೆ ಸಿಕ್ಕಿದ್ದನ್ನು ಮನಸ್ಸಿಗೆ ದಕ್ಕಿದ್ದೆಂದು ನಂಬಿ ನೇತುಹಾಕುತ್ತೇವೆ. ಅಸಲಿಗೆ ನಾವು ಮೊಳೆ ಹೊಡೆದುಕೊಳ್ಳುವುದೇ ನಮ್ಮ ಹಣೆಗಳಿಗೆ. ಅದರಾಚೆಗಿನ ಸಕಲವೆಲ್ಲವೂ ನಮ್ಮ ನಮ್ಮ ನಂಬಿಕೆಗಳಷ್ಟೆ. ಇಲ್ಲಿ ಯಾರಿಗಿರುವುದಿಲ್ಲ ಈ ಇಂತಾ ರೋಗರುಜಿನಗಳು. ತಾನೂ ಅದರಿಂದ ಹೊರತಾಗಿಲ್ಲವಲ್ಲ. ಎಲ್ಲ ಬಗೆಯ ರಾಗದ್ವೇಷಗಳು ತನ್ನೊಳಗೂ ಇದಾವಲ್ಲ. ರಾಜೀವ, ರತ್ನಾಕರ, ಬಚ್ಚರೆಡ್ಡಿ, ಅಮ್ಮ, ನಮಿತ, ಅಲ್ಲಾಬಕ್ಷಿ ಕಡೆಗೆ ಆ ಪಾರ್ಕಿನ ಆಜುಬಾಜಿನಲ್ಲಿ ಅಡ್ಡಾಡುವ ಹುಚ್ಚನೆಂಬ ಸಂತ... ಎಲ್ಲವೂ ತನ್ನ ನಡವಳಿಕೆಯ ಸೂಚಕಗಳೇನೋ ಎಂದು ಅವಳಿಗೆ ಅನಿಸತೊಡಗಿತು. ತನ್ನ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಗುಣಗಳೇನೋ ಎಂದು ಅನಿಸತೊಡಗಿತು. ನೀರೆಲ್ಲಾ ಖಾಲಿಯಾದ ಕೆರೆಯೊಂದರ ಏರಿಯ ಬುಡದ ತಗ್ಗುಗಳಲ್ಲಿ ಉಳಿದ ಒಂದಿಷ್ಟು ಮಡ್ಡಿನೀರಿನಲ್ಲಿ ಬದುಕಿಗಾಗಿ ಪುಟಪುಟನೆ ನೆಗೆದು ಒದ್ದಾಡುತ್ತವಲ್ಲ ಮೀನುಗಳು. ಹಾಗೆ ಅವರೆಲ್ಲರೂ ತನ್ನ ಮನಸ್ಸಿನೊಳಗೆ ಒದ್ದಾಡುತ್ತಿದ್ದಾರೇನೋ ಎಂದನಿಸತೊಡಗಿತು.

(ಒಳಪುಟಗಳಿಂದ)

View full details