Skip to product information
1 of 2

Srinivasa Murthy N. S.

ಮಾಳೇನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥ ದೇವಾಲಯ

ಮಾಳೇನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥ ದೇವಾಲಯ

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 46

Type - Paperback

ಪರಿಚಯ
ಶ್ರೀ ಶ್ರೀನಿವಾಸ ಮೂರ್ತಿ ಎನ್ ಎಸ್ ರವರು ಪ್ರಸಿದ್ದ ಗಣಿತ ಲೇಖಕರಾಗಿದ್ದ ಶ್ರೀ ಸೀತಾರಾಮ ರಾವ್ ಎನ್ ಎಸ್ ಅವರ ಪುತ್ರರಾಗಿದ್ದು  ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿಶ್ವವಿಧ್ಯಾನಿಲಯದಲ್ಲಿ ಎಂ ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು.
  
ನಂತರ ನಾಲ್ಕು ವರ್ಷ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಈಗ ಕಳೆದ 24 ವರ್ಷದಿಂದ  ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಮೂಲತಹ ಶಿವಮೊಗದಲ್ಲಿ ನೆಲೆಸಿದ್ದು ಪ್ರಸ್ತುತ ಕಾರ್ಯ ನಿರ್ಮಿತ್ತ ಬೆಂಗಳೂರಿನ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಕಳೆದ ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಇವರು ಈ ನಿಮಿತ್ತ ರಾಜ್ಯದ ಸುಮಾರು 1600 ಕ್ಕೂ ಅಧಿಕ ಪುರಾತನ ದೇವಾಲಯಗಳ ಭೇಟಿ ನೀಡಿದ್ದು ಇದನ್ನ ಕೇವಲ ಸಂಶೋಧನೆಗೆ ಸೀಮಿತಗೊಳಿಸಿದೇ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾಗಿರುವ ಇವರು ವಿವಿಧ ಬಳಗದ ಮೂಲಕ ಇತಿಹಾಸದ ಹೊಸ ಹೊರಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.  ಈ ನಿಟ್ಟಿನಲ್ಲಿ ಸುಮಾರು 7೦೦ ಕ್ಕೂ ಅಧಿಕ ಲೇಖನಗಳನ್ನು  ಅಜ್ಞಾತ ದೇವಾಲಯಗಳ ಬಗ್ಗೆ ಬರೆದಿದ್ದು ನಾಡಿನ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಯ್ದ 400 ಲೇಖನಗಳು “ಶಿಲ್ಪ ಕಲಾ ದೇವಾಲಯಕ್ಕೆ ದಾರಿ” ಎಂಬ ಹೆಸರಲ್ಲಿ ಏಳು ಸಂಪುಟಗಳಲ್ಲಿ ಪ್ರಕಟವಾಗಿದೆ. ಮೊದಲ ಪುಸ್ತಕಕ್ಕೆ ಕಳಿಂಗ ಭಾಷಾ ಸಮ್ಮಾನ್ ಪ್ರಶಸ್ತಿ ಬಂದಿದೆ.  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಾಳೇನಹಳ್ಳಿಯ ಶ್ರೀ ರಂಗನಾಥ ದೇವಾಲಯದ ಬಗ್ಗೆ ಪರಿಚಯ ಈ ಪುಸ್ತಕದಲ್ಲಿ ಇದೆ. 

ಇದರ ಜೊತೆಯಲ್ಲಿ ಬೇಟಿ ನೀಡಿದ ದೇವಾಲಯಗಳ ಛಾಯಾ ಚಿತ್ರಗಳನ್ನು ತೆಗೆಯುವ ಹವ್ಯಾಸ ಹೊಂದಿದ್ದು ಸುಮಾರು ೨೦,೦೦೦ ಕ್ಕೂ ಅಧಿಕ ಛಾಯಾ ಚಿತ್ರಗಳು ಸಂಗ್ರಹ ಮಾಡಿದ್ದು ಆಸಕ್ತರ ಅಧ್ಯಯನಕ್ಕೆ ಹಾಗು ಪರಿಚಯಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)