Skip to product information
1 of 2

D.N Srinath

ಮಹಾತ್ಮಾ ವರ್ಸಸ್ ಗಾಂಧಿ

ಮಹಾತ್ಮಾ ವರ್ಸಸ್ ಗಾಂಧಿ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 332

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಮಹಾತ್ಮಾ ವರ್ಸಸ್ ಗಾಂಧಿ ಗಾಂಧಿಜಿಯವರ ಜೇಷ್ಠ ಪುತ್ರ ಹರಿಲಾಲ್ ಗಾಂಧಿಯ ಬಗ್ಗೆ ಬರೆದ ಕಾದಂಬರಿಯಾಗಿದೆ. ಗಾಂಧಿಜಿಯವರ ಬಗ್ಗೆ ಖರೆಯದೆ ಅವರ ಪುತ್ರ ಹರಿಲಾಲನ ಬಗ್ಗೆ ಈ ಕಾದಂಬರಿಯನ್ನು ಏಕೆ ಬರೆಯಲಾಯಿತು? ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಉದ್ಭವಿಸಬಹುದು. ಈ ಕಥೆ ಗಾಂಧಿಜಿಯವರ ಜೀವನದ ಅತ್ಯಂತ ದುಃಖದ ಪ್ರಸಂಗವಾಗಿದೆ. ಹರಿಲಾಲ್ ಗಾಂಧಿಯ ಜೀವನ ವಿಡಂಬನೆಗಳು ಮತ್ತು ಅಂಧಕಾರದಿಂದ ಅವರಿಸಿತ್ತು. ಮಹಮ್ಮದ್ ಅಲಿ ಬಿನ್ನಾರ ಹೊರತಾಗಿ ಗಾಂಧಿಜಿಯವರು ಅರ್ಥ ಮಾಡಿಕೊಳ್ಳದ ಇನ್ನೊಬ್ಬ ವ್ಯಕ್ತಿಯೆಂದರೆ ಅದು ಹರಿಲಾಲ್ ಗಾಂಧಿಯಾಗಿದ್ದ. ಇಂದು ಹರಿಲಾಲನ ಹೆಸರು ಯಾರಿಗಾದರು ನೆನಪಿದ್ದರೆ ಅದು ಬಹುಶಃ ಅವನ ಅದೃಷ್ಟವೇ ಸರಿ! ಹರಿಲಾಲ ಮತ್ತು ಬಾಪೂ ಅಂದರೆ ತಂದೆ-ಮಗನ ನಡುವಿನ ಸಂಘರ್ಷ ಇಬ್ಬರ ಬದುಕಿನ ಅತ್ಯಂತ ಕರುಣಾಭರಿತ ಮತ್ತು ಮನಸ್ಸನ್ನು ನೋಯಿಸುವ ಪ್ರಸಂಗವಾಗಿದೆ. ಇಂಥ ಅನೇಕ ಪ್ರಸಂಗಗಳು ಮತ್ತು ಪರ್ಷಣೆಗಳು ನಡೆದಿವೆ.

'ಬಾಪೂ, ಇಂದು ಬಲಿ ಮಾಸಿಯವರು ತಂದೆಯವರ ಕಪಾಳಕ್ಕೆ ಹೊಡೆದು ಮನೆಯಿಂದ ಹೊರ ಹಾಕಿದರು-ಎಂಬ ಹರಿಲಾಲನ ಮಗಳು ಮನುಳ ಪತ್ರವಾಗಿರಬಹುದು ಅಥವಾ

'ಹರಿಲಾಲ ಪಾರಾಯಿ ಕುಡಿದು ರಸ್ತೆಯಲ್ಲಿ ರಂಪಾಟ ಮಾಡಿ ಬಂಧಿಸಲ್ಪಟ್ಟ'- ಎಂಬ ಪತ್ರಿಕೆಯೊಂದರ ಕಜಂಗ್ಸ್ ಮೇಲೆ ದೃಷ್ಟಿ ಹರಿಯುವುದು ಅಥವಾ 'ಖಾ ಮತ್ತು ಬಾಪೂ ಮುಸ್ಲಿಮ್ ಧರ್ಮವನ್ನು ಸ್ವೀಕರಿಸುವವರೆಗೆ, ನನ್ನ ಹೋರಾಟ ಮುಂದುವರೆಯುವುದು'- ಎಂದು ಹರಿಲಾಲ ಮುಸ್ಲಿಮರ ಸಭೆಯಲ್ಲಿ ಘೋಷಣೆ ಮಾಡಿದ್ದು,

-ಇಂಥ ಅನೇಕ ಪ್ರಸಂಗಗಳು ಖಾಪೂ ಮತ್ತು ಬಾ ಅವರ ಹೃದಯವನ್ನು ಜರಡಿ ಮಾಡುತ್ತಿದ್ದವು. ಬಾಪೂ ಅವರ ಮಾತಿರಲಿ, ಕಸ್ತೂರಬಾರವರ ವ್ಯಥೆಯನ್ನು ಸಹ ಶಬ್ದಗಳಲ್ಲಿ ಎಲ್ಲೂ ಬಂಧಿಸಿಡುವ ಪ್ರಯತ್ನ ನಡೆದಿಲ್ಲ. ತಂದೆ-ಮಗನ ಈ ಕರುಣಾಭರಿತ ಸಂಘರ್ಷದ ನಡುವೆ ಕಸ್ತೂರಬಾರ ಪರಿಸ್ಥಿತಿ ಏನಾಗಿತ್ತು? ಎಂಬುದನ್ನು ಕಲ್ಪನೆ ಮಾಡಿಕೊಳ್ಳುವುದು ಸಹ ಕಷ್ಟದ ಹಂಗತಿಯೇ ಸರಿ.

ಈ ಕಾದಂಬರಿಯಲ್ಲಿ ತಂದೆಯ ರೂಪದಲ್ಲಿ ಗಾಂಧಿಜಿ ಮತ್ತು ತಾಯಿಯ ರೂಪದಲ್ಲಿ ಕಸ್ತೂರಬಾರ ಮಮತೆ, ಕರುಣಿ ಮತ್ತು ವ್ಯಥೆಯನ್ನು ಅತ್ಯಂತ ಮಾರ್ಮಿಕವಾಗಿ ತೆರೆದಿಡಲಾಗಿದೆ.

'ಮಹಾತ್ಮಾ ವರ್ಸಸ್ ಗಾಂಧಿ' ಇತಿಹಾಸ ಮತ್ತು ಇತಿಹಾಸದ ಸತ್ಯವನ್ನು ಉದ್ಘಾಟಿಸುವ ಒಂದು ಮಹತ್ವದ ಕಾದಂಬರಿಯಾಗಿದೆ.

-ದಿನಕರ್ ಜೋಶಿ

View full details