Dr. K. S. Narayanacharya
ಮಹಾಪ್ರಸ್ಥಾನ
ಮಹಾಪ್ರಸ್ಥಾನ
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 200
Type - Paperback
Couldn't load pickup availability
"ಎಷ್ಟಾದರೂ ನಾನು ಸ್ತ್ರೀ.. ಬರೀ ಭೂಮಿ... ನನ್ನಲ್ಲಿ ಬೆಳೆದುದನ್ನು ರೈತ ಕೊಯ್ದು ಬಿಡುತ್ತಾನೆ. ನಾನು ಮರ, ಗಿಡ, ಬಳ್ಳಿ ಏನು ಬೆಳೆದರೂ, ಅಚಲೆ, ಜಡ. ಆ ಮರಗಳ ನೆರಳೂ, ಹೂ, ಹಣ್ಣು, ಕಾಯಿ, ಎಲೆ ಎಲ್ಲಾ ಬೇರೆಯವರಿಗೇ! ಈ ಪರಾರ್ಥವು ಸ್ವಾಭಾವಿಕ ಎಂದರೂ ಮನಸ್ಸು ಒಗ್ಗಿಕೊಳ್ಳುತ್ತಿಲ್ಲ. ಜಡ ಎಂದೆ. ಅದು ಭಾಷೆಯ, ರೂಪಕದ ಮಿತಿ. ಆದರೆ ನನಗೆ ಭಾವನೆ ಇದೆಯಲ್ಲ? ಮನಸ್ಸು ಇದೆಯಲ್ಲ? ಮನಸ್ಸನ್ನೂ ಜಡ ಎನ್ನುತ್ತಾರೆ. ಆದರೆ ಅದರ ಮೇಲೆ ದರ್ಬಾರು ನಡೆಸುವ ಆ ಇನ್ನೊಂದು — ಆತ್ಮಾ, ಚೈತನ್ಯ — ಅದರ ನೋವು ಇದೆಯಲ್ಲ? ಈ ಪರಿಸರದ ಹಳ್ಳಿಗರಿಗೂ ಅನುಭವಕ್ಕೆ ಬರುತ್ತಿದ್ದರೂ ನಾನು ಸ್ಪಂದಿಸುವಂತಿಲ್ಲದ ಒಂದು ಮೂಕತನ. ಈ ಸ್ಥಿತಿ ಯಾರ ಹಾರೈಕೆ? ಯಾರ ಹರಕೆ? ಯಾತರ ಹೊದ್ದಿಕೆ?
ನಾನು ಅಹಲ್ಯೆಯನ್ನು ನೆನೆಯುತ್ತೇನೆ. ಅವಳು ನಿಜವಾಗಿ ಕಲ್ಲಾಗಿಯೇ ಹೋಗಿದ್ದವಳು. ನನ್ನದು ಅದಕ್ಕಿಂತ ಕೆಟ್ಟ ಸ್ಥಿತಿ. ಒಂದು ವೇಳೆ ಮನುಷ್ಯರೂಪಿನಲ್ಲೇ ಅಹಲ್ಯೆ ಶಾಪಕಾಲ ನೂಕುವಂತಾಗಿದ್ದರೆ?... ಅಹಲ್ಯೆಯೇ ಬರುತ್ತಾಳೆ. ಇಗೋ ಮನಃಪಟಲದಲ್ಲಿ..."
- ದ್ರೌಪದಿ
Share

Subscribe to our emails
Subscribe to our mailing list for insider news, product launches, and more.