Skip to product information
1 of 2

MA. SU. Mannar Krishana Rao

ಮಹಾನ್ ರೈತ ನಾಯಕ

ಮಹಾನ್ ರೈತ ನಾಯಕ

Publisher - ಸಾಹಿತ್ಯ ಭಂಡಾರ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 80

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇದು ಪಟೇಲರು ರೈತರ ಪರವಾಗಿ ಮಾಡಿದ ಚಳವಳಿಗಳು ಮತ್ತು ಅದರ ಫಲಿತಗಳನ್ನು ಚಿತ್ರಿಸುತ್ತದೆ. ಪಟೇಲರು ರೈತರ ಪರವಾಗಿ ಮಾಡಿದ 'ಕೈರಾ ಚಳವಳಿ' (೧೯೧೭), 'ಬೋರ್ಸದ್ ಸತ್ಯಾಗ್ರಹ' (೧೯೨೩) ಮತ್ತು 'ಬಾರ್ದೋಲಿಯ ಸಮರ' (೧೯೨೮) – ಈ ಮೂರು ಚಳವಳಿಗಳು ಪಟೇಲರ ತಾಳ್ಮೆ, ಸಂಘಟನಾ ಶಕ್ತಿ ಮತ್ತು ರೈತ ಪರ ಕಾಳಜಿಗೆ ಸಾಕ್ಷಿಯಾಗಿವೆ. ೧೯೨೮ರಲ್ಲಿ ಬಾಂಬೆ ಸರ್ಕಾರ ಭೂ ಕಂದಾಯವನ್ನು ಯದ್ವಾ ತದ್ವಾ ಏರಿಸಿದಾಗ ಪಟೇಲರ ನಾಯಕತ್ವದಲ್ಲಿ ೯೨ ಹಳ್ಳಿಗಳ ೮೭,೦೦೦ ರೈತರು ನಡೆಸಿದ ಅಹಿಂಸಾತ್ಮಕ ಚಳವಳಿ ಭಾರತದ ಇತಿಹಾಸದಲ್ಲಿ ಮಹತ್ವದ ದಾಖಲೆಯಾಗಿದೆ. ಪಟೇಲರ ತಾಳ್ಮೆ, ಧೈರ್ಯ, ಚಾತುರ್ಯ ಮತ್ತು ಸಂಘಟನಾ ಶಕ್ತಿಯಿಂದ ಈ ಹೋರಾಟಗಳು ಅಭೂತಪೂರ್ವ ಯಶಸ್ಸು ಗಳಿಸಿ, ರೈತರಿಗೆ ನ್ಯಾಯ ಸಿಗುತ್ತದೆ. ಆಗ ಜನರೇ ಅತ್ಯಂತ ಪ್ರೀತಿಯಿಂದ ಮತ್ತು ಗೌರವದಿಂದ ಪಟೇಲರನ್ನು 'ಸರ್ದಾರ್' ಎಂದು ಕರೆಯುತ್ತಾರೆ. ಇಲ್ಲಿಂದ ಪಟೇಲರ ಹೆಸರಿನ ಹಿಂದೆ ಅವಿಭಾಜ್ಯ ಅಂಗವಾಗಿ 'ಸರ್ದಾರ್' ಬಿರುದು ಸೇರಿಕೊಂಡು ದೇಶದಾದ್ಯಂತ ಪ್ರಸಿದ್ಧಿ ಪಡೆದುದನ್ನು ಲೇಖಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

-ಡಾ|| ಮ.ರಾಮಕೃಷ್ಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಮಂಡ್ಯ

View full details