Skip to product information
1 of 2

Dr. D. M. Ganesh

ಮಹಾಬೆಳಕು

ಮಹಾಬೆಳಕು

Publisher - Beechi Prakashana

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 135

Type - Paperback

Gift Wrap
Gift Wrap Rs. 15.00

ಚಿಕ್ಕಮಗಳೂರು ಮಹಾನಗರದಲ್ಲಿ 2005 ಫೆಬ್ರವರಿ 5ರಿಂದ ಮಾರ್ಚ್ 13ರವರೆಗೆ ನಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಉಪನ್ಯಾಸ ಮಾಲಿಕೆಯನ್ನು ಆಲಿಸಿದ ಶ್ರೀ ಗಣೇಶ್ ಅವರು ಸ್ವಾಮಿಗಳ ಮಾತುಗಳ ಸಾರವನ್ನು ಯಥಾವತ್ತಾಗಿ ಹಿಡಿದಿಡುವ ಸಾಹಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಗಣೇಶ್ ಸಾಹಿತ್ಯ ಪ್ರೇಮಿಗಳು. ಕೇಳಿದ್ದನ್ನು ಕರಗತ ಮಾಡಿಕೊಂಡು ಯಥಾವತ್ತಾಗಿ ಅಕ್ಷರಗಳಲ್ಲಿ ಹಿಡಿದಿಡುವ ಗುಣ ಅವರಲ್ಲಿದೆ. ಅವರ ಸ್ಮರಣಶಕ್ತಿ ಅದ್ಭುತವಾದುದು. ಅವರ ಸ್ಮರಣ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ ಈ ಕೃತಿ. ಇದೊಂದು ಸಾಮಾನ್ಯ ಕೃತಿಯಲ್ಲ: ಅಧ್ಯಾತ್ಮದ ರಸಪಾಕ. ಇದನ್ನು ಓದುತ್ತಿದ್ದರೆ ಸಿದ್ದೇಶ್ವರ ಸ್ವಾಮಿಗಳ ಉಪನ್ಯಾಸವನ್ನು ನೇರವಾಗಿ ಕೇಳಿದ ಅನುಭವವಾಗುವುದು. ಆ ನಿಟ್ಟಿನಲ್ಲಿ ಗಣೇಶ್ ಅವರ ಸಾಧನೆ, ಶ್ರಮ ಸ್ತುತ್ಯರ್ಹವಾದುದು. ಅವರು ಸ್ವಾಮೀಜಿಯವರ ಭಾವನೆಗಳನ್ನು ಅಚ್ಚುಕಟ್ಟಾಗಿ ಸಂಪಾದನೆ ಮಾಡಿದ್ದಾರೆ. ಅದಕ್ಕಾಗಿ ಗಣೇಶ್ ಅವರಿಗೆ ಅಭಿನಂದನೆಗಳು. ಅವರಿಂದ ಈ ರೀತಿಯ ಹಲವು ಕೃತಿಗಳು ಹೊರಬಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ ಎಂದು ಹೃದಯ ತುಂಬಿ ಹಾರೈಸುತ್ತೇವೆ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಾಣೇಹಳ್ಳಿ

View full details