1
/
of
2
Dr. K. S. Narayanacharya
ಮಾರೀಚ
ಮಾರೀಚ
Publisher - Sahithya Prakashana
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 112
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಕೆ. ಎಸ್. ನಾರಾಯಣಾಚಾರ್ಯ ಅವರ ಈ “ ಮಾರೀಚ ಪ್ರಸಂಗವು" ಅವರ ಕೊನೆಕೊನೆಯ ಬರಹಗಳಲ್ಲೊಂದು. "ರಾಮಾಯಣದ ಮಹಾಪ್ರಸಂಗಗಳ" ಮತ್ತೊಂದು ಸಂಪುಟ ಬರೆಯಲೇ?
-ಎಂದೊಮ್ಮೆ ನನಗೆ ಕೇಳಿದಾಗ, ಖಂಡಿತ ಬರೆಯಿರಿ ಸರ್, ಎಂದುತ್ತರಿಸಿ, ಮುಂದೆ, ಆಗಾಗ ಅದನ್ನವರಿಗೆ ನೆನಪಿಸಿ ಒತ್ತಾಯಿಸುತ್ತಿದ್ದೆ. ಒಂದು ಶುಭ ಮುಹೂರ್ತದಲ್ಲಿ, ಯಾವಯಾವ ಪ್ರಸಂಗಗಳನ್ನು ವಿಶ್ಲೇಷಣೆಗಳಿಗೊಳಪಡಿಸಬೇಕೆಂದು ಯೋಚಿಸಿ, ಈ "ಮಾರೀಚನಿಂದ" ಆರಂಭಿಸಿ, ಬರೆದು ಮುಗಿಸುತ್ತಿದ್ದಂತೆಯೇ, ಅಳಿಯ ಶ್ರೀ ದಾಶರಥಿ ಅವರು ಟೈಪ್ ಮಾಡಿಯೂಬಿಟ್ಟರು.
ನಂತರ, “ಮಹಾಭಾರತದ ಪೂರ್ವಕಾಂಡದ ಪಾತ್ರಗಳು ತುಂಬ ಬಾಧಿಸುತ್ತಿವೆ. ಅವುಗಳನ್ನೇ ಕೈಗೆತ್ತಿಕೊಳ್ಳುವೆ, ಆನಂತರ ಇದನ್ನು ಮುಂದುವರಿಸುವೆ," ಎಂದೂ ತಿಳಿಸಿ- "ಸರ್ಪಯಾಗಕ್ಕೆ ಶ್ರೀಕಾರ ಹಾಕಿಬಿಟ್ಟೆನೆಂದು" ತಿಳಿಸಿದ್ದರು. ನೋಡನೋಡುತ್ತಿದ್ದಂತೆ, ಸರ್ಪಯಾಗದ ಪರೀಕ್ಷಿತ-ಜನಮೇಜಯ, ಉರ್ವಶೀ-ಪುರೂರವ, ನಹುಷ, ಯಯಾತಿ -ಹೀಗೆ ನಾಲ್ಕು ಕಾದಂಬರಿಗಳ ರಚನೆ, ಮುದ್ರಣ, ಬಿಡುಗಡೆಯ ಕಾರ್ಯಕ್ರಮಗಳೆಲ್ಲ ಆಯಿತು. ಆ ಮಾಲೆಯ ಕೊನೆಯ ಬೃಹತ್ ಸಂಪುಟ "ಭರತ ವಂಶ"ದಲ್ಲಿ ಮಿಕ್ಕೆಲ್ಲ ಪಾತ್ರಪ್ರಸಂಗಗಳನ್ನು ೬೦ ಅಧ್ಯಾಯಗಳಿಗೂ ಹೆಚ್ಚೇ ಬರೆದು, ಭರತನಿಂದ ಭಾರತ ಆದ ಸನ್ನಿವೇಶಕ್ಕೆ ಮುಕ್ತಾಯಗೊಳಿಸುವೆ -ಎಂದಿದ್ದವರು. ಆ ಬೃಹತ್ ಕಾದಂಬರಿಯ ಹದಿನೇಳು ಅಧ್ಯಾಯಗಳನ್ನಷ್ಟೇ ಬರೆದಿಟ್ಟು ಕಣ್ಮರೆಯಾಗಿಬಿಟ್ಟರಲ್ಲ! ರಾಮಾಯಣದ ಮಹಾಪ್ರಸಂಗಗಳ ೨ನೇ ಭಾಗವೂ "ಮಾರೀಚೆ ಪ್ರಸಂಗದ" ವಿಶ್ಲೇಷಣೆಗೆ ನಿಂತುಬಿಟ್ಟಿತಲ್ಲ!
-ಎಂದೊಮ್ಮೆ ನನಗೆ ಕೇಳಿದಾಗ, ಖಂಡಿತ ಬರೆಯಿರಿ ಸರ್, ಎಂದುತ್ತರಿಸಿ, ಮುಂದೆ, ಆಗಾಗ ಅದನ್ನವರಿಗೆ ನೆನಪಿಸಿ ಒತ್ತಾಯಿಸುತ್ತಿದ್ದೆ. ಒಂದು ಶುಭ ಮುಹೂರ್ತದಲ್ಲಿ, ಯಾವಯಾವ ಪ್ರಸಂಗಗಳನ್ನು ವಿಶ್ಲೇಷಣೆಗಳಿಗೊಳಪಡಿಸಬೇಕೆಂದು ಯೋಚಿಸಿ, ಈ "ಮಾರೀಚನಿಂದ" ಆರಂಭಿಸಿ, ಬರೆದು ಮುಗಿಸುತ್ತಿದ್ದಂತೆಯೇ, ಅಳಿಯ ಶ್ರೀ ದಾಶರಥಿ ಅವರು ಟೈಪ್ ಮಾಡಿಯೂಬಿಟ್ಟರು.
ನಂತರ, “ಮಹಾಭಾರತದ ಪೂರ್ವಕಾಂಡದ ಪಾತ್ರಗಳು ತುಂಬ ಬಾಧಿಸುತ್ತಿವೆ. ಅವುಗಳನ್ನೇ ಕೈಗೆತ್ತಿಕೊಳ್ಳುವೆ, ಆನಂತರ ಇದನ್ನು ಮುಂದುವರಿಸುವೆ," ಎಂದೂ ತಿಳಿಸಿ- "ಸರ್ಪಯಾಗಕ್ಕೆ ಶ್ರೀಕಾರ ಹಾಕಿಬಿಟ್ಟೆನೆಂದು" ತಿಳಿಸಿದ್ದರು. ನೋಡನೋಡುತ್ತಿದ್ದಂತೆ, ಸರ್ಪಯಾಗದ ಪರೀಕ್ಷಿತ-ಜನಮೇಜಯ, ಉರ್ವಶೀ-ಪುರೂರವ, ನಹುಷ, ಯಯಾತಿ -ಹೀಗೆ ನಾಲ್ಕು ಕಾದಂಬರಿಗಳ ರಚನೆ, ಮುದ್ರಣ, ಬಿಡುಗಡೆಯ ಕಾರ್ಯಕ್ರಮಗಳೆಲ್ಲ ಆಯಿತು. ಆ ಮಾಲೆಯ ಕೊನೆಯ ಬೃಹತ್ ಸಂಪುಟ "ಭರತ ವಂಶ"ದಲ್ಲಿ ಮಿಕ್ಕೆಲ್ಲ ಪಾತ್ರಪ್ರಸಂಗಗಳನ್ನು ೬೦ ಅಧ್ಯಾಯಗಳಿಗೂ ಹೆಚ್ಚೇ ಬರೆದು, ಭರತನಿಂದ ಭಾರತ ಆದ ಸನ್ನಿವೇಶಕ್ಕೆ ಮುಕ್ತಾಯಗೊಳಿಸುವೆ -ಎಂದಿದ್ದವರು. ಆ ಬೃಹತ್ ಕಾದಂಬರಿಯ ಹದಿನೇಳು ಅಧ್ಯಾಯಗಳನ್ನಷ್ಟೇ ಬರೆದಿಟ್ಟು ಕಣ್ಮರೆಯಾಗಿಬಿಟ್ಟರಲ್ಲ! ರಾಮಾಯಣದ ಮಹಾಪ್ರಸಂಗಗಳ ೨ನೇ ಭಾಗವೂ "ಮಾರೀಚೆ ಪ್ರಸಂಗದ" ವಿಶ್ಲೇಷಣೆಗೆ ನಿಂತುಬಿಟ್ಟಿತಲ್ಲ!
ಈ ಬಗೆಯಲ್ಲಿ, ವಾಲ್ಮೀಕಿ, ವ್ಯಾಸ ಮತ್ತೆಲ್ಲ ಋಷಿಗಳ ಮೂಲದರ್ಶನಕ್ಕೆ ಕಿಂಚಿತ್ತೂ ಚ್ಯುತಿ ತಾರದೇ. ವಸ್ತುವಿನಲ್ಲೇ ವಿಪುಲ ರಸವಿರಬೇಕು, ಮಲ್ಲಿಗೆಯ ಘಮ ಅದರ ಸ್ವಭಾವದಲ್ಲೇ ಬಂದುದಲ್ಲವೇ, ಎಂಬ ಮಾತಿಗೆ ನಿಷ್ಠರಾಗಿ, ರೋಚಕವಾಗಿ ಕತೆ ಹೇಳುವ ಪ್ರೊ. ಕೆ. ಎಸ್. ನಾರಾಯಣಾಚಾರ್ಯರಂತಹ ಸರಸ್ವತೀವರಸಂಜಾತ ಲೇಖಕರನ್ನು ನಮ್ಮ ಜೀವಿತಾವಧಿಯಲ್ಲೆ ಕಂಡಿದ್ದು ಅವರ ಮಾತುಗಳನ್ನು ಕೇಳಿದ್ದು ನಮ್ಮ ಭಾಗ್ಯವಲ್ಲದೇ ಮತ್ತೇನು?
ಈ ಕೃತಿಗೆ "ಲೇಖಕನ ಅರಿಕೆ" ತಪ್ಪಿ ಹೋದುದರ ಮತ್ತು ಹಿನ್ನುಡಿಯನ್ನು ಪ್ರಕಾಶಕನಾಗಿ ನಾನೇ ಬರೆಯಬೇಕಾದ ದುಃಖದ ಸನ್ನಿವೇಶ ಎದುರಾದುದು ತಮ್ಮ ಅರಿವಿಗೆ ಬಂದಿರಬೇಕಲ್ಲ?
ಈ ಕೃತಿಗೆ "ಲೇಖಕನ ಅರಿಕೆ" ತಪ್ಪಿ ಹೋದುದರ ಮತ್ತು ಹಿನ್ನುಡಿಯನ್ನು ಪ್ರಕಾಶಕನಾಗಿ ನಾನೇ ಬರೆಯಬೇಕಾದ ದುಃಖದ ಸನ್ನಿವೇಶ ಎದುರಾದುದು ತಮ್ಮ ಅರಿವಿಗೆ ಬಂದಿರಬೇಕಲ್ಲ?
ಮಾರೀಚನನ್ನು ಓದೋಣ!
-ಸುಬ್ಬಣ್ಣ
-ಸುಬ್ಬಣ್ಣ
Share

Subscribe to our emails
Subscribe to our mailing list for insider news, product launches, and more.