Skip to product information
1 of 1

Dr. Shankaranarayana Joyis

ಮಾನವ ಶರೀರ - ಮಹರ್ಷಿ ದರ್ಶನ

ಮಾನವ ಶರೀರ - ಮಹರ್ಷಿ ದರ್ಶನ

Publisher - ಅಷ್ಟಾಂಗಯೋಗ ವಿಜ್ಞಾನ ಮಂದಿರ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಡಾ. ಶಂಕರನಾರಾಯಣ ಜೋಯ್ಸ್

ಸಾಧನೆ, ಅಧ್ಯಯನ ಮತ್ತು ಪಾಠಪ್ರವಚನಗಳನ್ನೇ ಜೀವನದ ಧೈಯವಾಗಿಸಿಕೊಂಡ ಚೇತನ ವಿದ್ವಾನ್ ಶಂಕರನಾರಾಯಣ ಜೋಯಿಸರು,ಅಲಂಕಾರ, ನ್ಯಾಯ, ಯೋಗವೇ ಮೊದಲಾದ ಅನೇಕ ಶಾಸ್ತ್ರಗಳಲ್ಲಿ ತಲಸ್ಪರ್ಶಿಯಾದ ಅಧ್ಯಯನದ ಜೊತೆಗೆ ಯೋಗಿವರ್ಯರಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದೊಂದಿಗೆ ಶಾಸ್ತ್ರಗಳನ್ನು ಅವಲೋಕಿಸುವುದು ಶ್ರೀಯುತರ ವೈಶಿಷ್ಟ್ಯ ತಮ್ಮ ಸಾಂಪ್ರದಾಯಿಕ ಶಿಕ್ಷಣದ ಬಳಿಕ ಶ್ರೀಗುರುವಿನ ವಿಜ್ಞಾನಸರಣಿಯನ್ನು ಪಡೆಯಲು ಶ್ರೀಯುತರು ಅನುಸರಿಸಿದ್ದು ಮಧುಕರವೃತ್ತಿಯನ್ನು, ಶ್ರೀಗುರುವಿನ ಆದ್ಯಶಿಷ್ಯರಾದ ಪೂಜ್ಯ ರಾಮಭದ್ರಾಚಾರ್ಯರಲ್ಲಿ ಮತ್ತು ಪೂಜ್ಯ ಶೇಷಾಚಲಶರ್ಮರಲ್ಲಿ ಅಧ್ಯಯನವು ಪ್ರಾರಂಭವಾಗಿ ಬಳಿಕ ಶ್ರೀಮಂದಿರದ ಅನೇಕಾನೇಕ ಹಿರಿಯ ಸಾಧಕರಿಂದ ಮಹಾಗುರುವಿನ ವಿಚಾರಮಕರಂದವನ್ನು ಸಂಗ್ರಹಿಸಿದರು.

ನಾಡಿನ ಹಿರಿಯ ಪ್ರವಚನಕಾರರಾಗಿ ಸೇವೆಗೈಯುತ್ತಿರುವ ಶ್ರೀಯುತರು ಶ್ರೀಮಂದಿರದ ಪ್ರಧಾನ ಕಾರ್ಯದರ್ಶಿಗಳಾಗಿಯೂ ಸೇವೆಸಲ್ಲಿಸಿದವರು. ಆರ್ಯಸಂಸ್ಕೃತಿ ಮಾಸಪತ್ರಿಕೆಯ ಸಂಪಾದಕರಾಗಿಯೂ, ಲೇಖಕರಾಗಿಯೂ ನೋಟವನ್ನು ವಿಸ್ತರಿಸುವ ನೂರಾರು ಲೇಖನಗಳ ಮಹಾಗುರುವಿನ ಮೂಲಕ ನಾಡಿನ ವಿದ್ಯಾಭಿಮಾನಿಗಳಿಗೆ ಪರಿಚಿತರಾಗಿರುತ್ತಾರೆ. ಶ್ರೀಯುತರಿಂದ ಬರೆಯಲ್ಪಟ್ಟ ಆಯುರ್ವೇದ, ಯೋಗ ಮೊದಲಾದ ಭಾರತೀಯ ವಿದ್ಯಾಸಾರವನ್ನುಳ್ಳ ಪುಸ್ತಕಗಳು ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಪ್ರಕಾಶನ ಕಂಡಿವೆ. ಮಹಾಭಾರತದಲ್ಲಿ ಯೋಗ ಎಂಬ ಸಂಶೋಧನಾಪ್ರಬಂಧವು ಇವರಿಗೆ ವಿದ್ಯಾವಾರಿಧಿ (ಪಿ.ಎಚ್.ಡಿ) ಪುರಸ್ಕಾರವನ್ನು ತಂದುಕೊಟ್ಟಿದೆ. ಯತಿವರೇಣ್ಯರೂ, ಶ್ರೇಷ್ಠ ವಿದ್ವಾಂಸರೂ, ಸಾಧಕೋತ್ತಮರೂ ಆದ ಶ್ರೀಶ್ರೀರಂಗಪ್ರಿಯಶ್ರೀಪಾದಂಗಳವರು ಶಿಷ್ಯವಾತ್ಸಲ್ಯದ ತುಂಬುಹೃದಯದಿಂದ ಪಾಠಪ್ರವಚನ ಪ್ರವೀಣ ಎಂಬ ಬಿರುದನ್ನು ಕೊಡಮಾಡಿರುವುದು ಮಹಾಗುರುವಿನ ಚಿಂತನಾಸರಣಿಗೆ ಸಂದ ಗೌರವವೇ ಆಗಿದೆ.

ಈ ಹಿಂದೆ ಲೋಕಾರ್ಪಣೆಗೊಂಡ ಮಹಾಯೋಗಿ ಶ್ರೀರಂಗ ಮತ್ತು ನಮಸ್ಕಾರ ಪುಸ್ತಕಗಳು ಓದುಗರ ಮನ್ನಣೆಗೆ ಪಾತ್ರವಾಗಿವೆ. ಪ್ರಸ್ತುತ ಈ ಪುಸ್ತಕವೂ ಶ್ರೀಗುರುವಿನ ಚಿಂತನಾವೈಶಿಷ್ಟ್ಯವನ್ನು ವ್ಯಾಖ್ಯಾನಿಸುವಂತಿದ್ದು ಲೇಖಕರ ಲೇಖನಕಲೆಗೆ ಸಾಕ್ಷಿಯಾಗಿದೆ.
View full details

Talk about your brand

Share information about your brand with your customers. Describe a product, make announcements, or welcome customers to your store.