Ganesh Kasragodu
Publisher -
Regular price
Rs. 225.00
Regular price
Rs. 225.00
Sale price
Rs. 225.00
Unit price
per
- Free Shipping Above ₹200
- Cash on Delivery (COD) Available
Pages -
Type -
ಗಣೇಶ್ ಕಾಸರಗೋಡು
ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ, ಕನ್ನಡ ಸ್ನಾತಕೋತ್ತರ ಪದವಿಯಲ್ಲಿ Rank ವಿಜೇತ, ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರೂ ಉಂಟು. ನಂತರ ಕಾಲಿಟ್ಟದ್ದು, ಸಿನಿಮಾ ಪತ್ರಿಕೋದ್ಯಮಕ್ಕೆ ಮೊದಲು ಚಿತ್ರದೀಪ, ನಂತರ ಚಿತ್ರತಾರ, ಆನಂತರ ಅರಗಿಣಿ, ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ, ಕರ್ಮವೀರ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ವಿಜಯ ಕರ್ನಾಟಕದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ವಿಜಯವಾಣಿಯ ಅಂಕಣಕಾರ.
ಇವರ ಪತ್ರಿಕೋದ್ಯಮದ ಸೇವೆ ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಮಂತ್ರಾಲಯದ ಪ್ರತಿಷ್ಠಿತ ವಿಜಯ ವಿಠಲ ಪ್ರಶಸ್ತಿ, ಪತ್ರಕರ್ತರ ವೇದಿಕೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಹಲೋ ಗಾಂಧಿನಗರ ಪ್ರಶಸ್ತಿ, ವೈಯನ್ಕೆ ಸಾಹಿತ್ಯ ಪ್ರಶಸ್ತಿ ದೊರಕಿವೆ. ಇವರು ಬರೆದ ಸಾರ್ವಕಾಲಿಕ ಪ್ರಶಂಸೆಗೆ ಪಾತ್ರವಾದ ಚದುರಿದ ಚಿತ್ರಗಳು ಪುಸ್ತಕಕ್ಕೆ 2011ನೇ ಸಾಲಿನ ರಾಜ್ಯ ಸರ್ಕಾರದ ಪುಸ್ತಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ವೃತ್ತಿ ಬದುಕಿನಲ್ಲಿ ಒಟ್ಟು 30 ಪುಸ್ತಕಗಳನ್ನು ಬರೆದಿರುವ ಕೀರ್ತಿ ಇವರದ್ದು. ಇವುಗಳಲ್ಲಿ ಶುಭಂ ಕೃತಿ 25ನೇ ಪುಸ್ತಕ. ಇವಲ್ಲದೇ 'ಮೌನ ಮಾತಾದಾಗ', 'ಚದುರಿದ ಚಿತ್ರಗಳು', 'ಹೇಗಿದ್ದ ಹೇಗಾದ ಗೊತ್ತಾ', 'ನೆನಪಿನಂಗಳದಲ್ಲಿ ಶಂಕರನಾಗ್, 'ಬೆಳ್ಳಿತೆರೆಯ ಅಮೃತ ಕಳಶ ರವಿಚಂದ್ರನ್', 'ಗುರಿ ಹೆಗ್ಗುರಿ', 'ಕನ್ನಡದ ಕಣ್ಮಣಿ ಕಾಳಿಂಗರಾಯರು', 'ಪ್ರೀಮಿಯರ್ ಬಸವರಾಜಯ್ಯ', 'ಬಣ್ಣ ಮಾಸಿದ ಬದುಕು', 'ನೂರು ಚಿತ್ರಗಳು ನೂರಾರು ನೆನಪುಗಳು', 'ಚಿಗುರಿದ ಕನಸುಗಳು', 'ಸೂರ್ತಿಯ ಸೆಲೆ. ರಮೇಶ್ ಅರವಿಂದ್, 'ಆಫ್ ದಿ ರೆಕಾರ್ಡ್', 'ಅಂತರಂಗ ಬಹಿರಂಗ ದರ್ಶನ', 'ಹುಚ್ಚು ಮನಸ್ಸಿನ ನೂರು ಮುಖಗಳು', 'ಸಾಂಪ್ರತಾ', 'ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್', 'ಬೆಳ್ಳಿತೆರೆಯ ಬಂಗಾರದ ಗೆರೆ', 'ಚೌಕಟ್ಟಿಲ್ಲದ ಚಿತ್ರಪುಟಗಳು ... ಮೊದಲಾದುವುಗಳು ಪ್ರಕಟಿತ ಪುಸ್ತಕಗಳು...
ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ, ಕನ್ನಡ ಸ್ನಾತಕೋತ್ತರ ಪದವಿಯಲ್ಲಿ Rank ವಿಜೇತ, ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರೂ ಉಂಟು. ನಂತರ ಕಾಲಿಟ್ಟದ್ದು, ಸಿನಿಮಾ ಪತ್ರಿಕೋದ್ಯಮಕ್ಕೆ ಮೊದಲು ಚಿತ್ರದೀಪ, ನಂತರ ಚಿತ್ರತಾರ, ಆನಂತರ ಅರಗಿಣಿ, ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ, ಕರ್ಮವೀರ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ವಿಜಯ ಕರ್ನಾಟಕದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ವಿಜಯವಾಣಿಯ ಅಂಕಣಕಾರ.
ಇವರ ಪತ್ರಿಕೋದ್ಯಮದ ಸೇವೆ ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಮಂತ್ರಾಲಯದ ಪ್ರತಿಷ್ಠಿತ ವಿಜಯ ವಿಠಲ ಪ್ರಶಸ್ತಿ, ಪತ್ರಕರ್ತರ ವೇದಿಕೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಹಲೋ ಗಾಂಧಿನಗರ ಪ್ರಶಸ್ತಿ, ವೈಯನ್ಕೆ ಸಾಹಿತ್ಯ ಪ್ರಶಸ್ತಿ ದೊರಕಿವೆ. ಇವರು ಬರೆದ ಸಾರ್ವಕಾಲಿಕ ಪ್ರಶಂಸೆಗೆ ಪಾತ್ರವಾದ ಚದುರಿದ ಚಿತ್ರಗಳು ಪುಸ್ತಕಕ್ಕೆ 2011ನೇ ಸಾಲಿನ ರಾಜ್ಯ ಸರ್ಕಾರದ ಪುಸ್ತಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ವೃತ್ತಿ ಬದುಕಿನಲ್ಲಿ ಒಟ್ಟು 30 ಪುಸ್ತಕಗಳನ್ನು ಬರೆದಿರುವ ಕೀರ್ತಿ ಇವರದ್ದು. ಇವುಗಳಲ್ಲಿ ಶುಭಂ ಕೃತಿ 25ನೇ ಪುಸ್ತಕ. ಇವಲ್ಲದೇ 'ಮೌನ ಮಾತಾದಾಗ', 'ಚದುರಿದ ಚಿತ್ರಗಳು', 'ಹೇಗಿದ್ದ ಹೇಗಾದ ಗೊತ್ತಾ', 'ನೆನಪಿನಂಗಳದಲ್ಲಿ ಶಂಕರನಾಗ್, 'ಬೆಳ್ಳಿತೆರೆಯ ಅಮೃತ ಕಳಶ ರವಿಚಂದ್ರನ್', 'ಗುರಿ ಹೆಗ್ಗುರಿ', 'ಕನ್ನಡದ ಕಣ್ಮಣಿ ಕಾಳಿಂಗರಾಯರು', 'ಪ್ರೀಮಿಯರ್ ಬಸವರಾಜಯ್ಯ', 'ಬಣ್ಣ ಮಾಸಿದ ಬದುಕು', 'ನೂರು ಚಿತ್ರಗಳು ನೂರಾರು ನೆನಪುಗಳು', 'ಚಿಗುರಿದ ಕನಸುಗಳು', 'ಸೂರ್ತಿಯ ಸೆಲೆ. ರಮೇಶ್ ಅರವಿಂದ್, 'ಆಫ್ ದಿ ರೆಕಾರ್ಡ್', 'ಅಂತರಂಗ ಬಹಿರಂಗ ದರ್ಶನ', 'ಹುಚ್ಚು ಮನಸ್ಸಿನ ನೂರು ಮುಖಗಳು', 'ಸಾಂಪ್ರತಾ', 'ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್', 'ಬೆಳ್ಳಿತೆರೆಯ ಬಂಗಾರದ ಗೆರೆ', 'ಚೌಕಟ್ಟಿಲ್ಲದ ಚಿತ್ರಪುಟಗಳು ... ಮೊದಲಾದುವುಗಳು ಪ್ರಕಟಿತ ಪುಸ್ತಕಗಳು...