T. S. Goravara
ಕುದರಿ ಮಾಸ್ತರ
ಕುದರಿ ಮಾಸ್ತರ
Publisher -
- Free Shipping Above ₹400
- Cash on Delivery (COD) Available*
Pages - 74
Type - Paperback
Couldn't load pickup availability
ಜೀವನಾನುಭವದ ಅಭಿವ್ಯಕ್ತಿಗಿಂತ ಸಿದ್ಧಾಂತ ಬದ್ಧತೆಯೇ ಹೆಚ್ಚು ಎಂಬ ನಿಲುವಿನ ಸಾಹಿತ್ಯ ಪ್ರಚಾರಕರು ಮತ್ತು ಅನುಭವ ಅಥವ ಸಿದ್ಧಾಂತಕ್ಕಿಂತಲೂ ಪ್ರಚಾರ-ಪ್ರತಿಷ್ಠಾಪನೆ. ಮುದ್ರಾಧಾರಣೆಯೇ ಮುಖ್ಯ ಎಂಬ ನಿಲುವಿನ. ಸುಗ್ಗಿಯ ಹಿಗ್ಗನ್ನು ಕೃತಕವಾಗಿ ಸೃಷ್ಟಿಸುತ್ತಿರುವ ಜಾಗತಿಕ ಜಾಣರು- ಈ ಎರಡು ಧ್ರುವಗಳ ನಡುವಿನ ಗೊಂದಲ ಕೊಂಚ ತಿಳಿಯಾಗುತ್ತಿರುವಂತಿದೆ. ಇತ್ತೀಚಿನ ದಿನಮಾನಗಳಲ್ಲಿ ಬರೆಯುತ್ತಿರುವ ಹೊಸ ತಲೆಮಾರಿನ ಲೇಖಕರು ಈ ಎರಡೂ ಅತಿ ನಿಲುವಿನ ಮಧ್ಯೆ ಇರಬಹುದಾದ ಕಥನ ಪರಂಪರೆಯ ಹುಡುಕಾಟದಲ್ಲಿರುವಂತೆ ಕಾಣಿಸುತ್ತಿದ್ದಾರೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ ಈ ತರುಣರು ಮುಖ್ಯಧಾರೆಯಲ್ಲಿ ದೊರಕುವ ಮಾನ್ಯತೆಯೇ ಅಂತಿಮ ಎಂದು ತಿಳಿದಿಲ್ಲದಿರುವುದು ಕೂಡ ಆರೋಗ್ಯಕರ ನಿಲುವೇ ಆಗಿದೆ.
ಟಿ.ಎಸ್. ಗೊರವರ ಕೂಡ ಇದೇ ಬಗೆಯ ತರುಣ ಲೇಖಕರಾಗಿದ್ದಾರೆ. ಬದುಕಿನ ತಾಳ-ಲಯ-ಗತಿಗಳನ್ನು ಕೃತಕತೆಯ ಲೇಪವಿಲ್ಲದೆ ಅತ್ಯಂತ ಸಹಜವಾಗಿ ಹಿಡಿದಿಡಬಲ್ಲ ಸಾಮರ್ಥ್ಯ ನಿಸರ್ಗ ಕೃಪೆಯಂತೆ ಅವರಿಗೆ ಒಲಿದು ಬಂದಿದೆ. ಅವರ ಕಥನ ಶೈಲಿ, ಕಥಾ ವಸ್ತುವನ್ನು ನಿಭಾಯಿಸುವ ರೀತಿ ಪ್ರಶಂಸೆಗೆ ಪಾತ್ರವಾಗುವಂತಿದೆ. ಗ್ರಾಮೀಣ ಸಮಾಜವನ್ನು ಚಿತ್ರಿಸುವಾಗ ಅವರ ಶೈಲಿ ಭಾವಗೀತಾತ್ಮಕವಾಗುತ್ತದೆ. ಸ್ಥಳೀಯ ನುಡಿಗಟ್ಟುಗಳಲ್ಲಿನ ಚೆಲುವು-ಕಸುವು, ರೂಪಕ ಶಕ್ತಿಯನ್ನು ಪಡೆದ ಸಹಜ ವಿವರಗಳನ್ನು ನಾವು ಓದಿಯೇ ಅಸ್ವಾದಿಸಬೇಕು ಎನ್ನುವಂತಿವೆ.
-ಕೇಶವ ಮಳಗಿ (ಮುನ್ನುಡಿಯಿಂದ)
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.