R. K. Asha Pramod
ಕಾವ್ಯ ಕನ್ನಿಕೆ
ಕಾವ್ಯ ಕನ್ನಿಕೆ
Publisher -
- Free Shipping Above ₹300
- Cash on Delivery (COD) Available
Pages - 108
Type - Paperback
Couldn't load pickup availability
ತೋಚಿದ್ದೆಲ್ಲ ಗೀಚಿದರೆ ಕವನವಾಗುವುದೆ? ತೋಚುವುದೆಲ್ಲ ಕನಿಷ್ಠವೂ ಆಗಿರಬೇಕಿಲ್ಲ ಅಲ್ಲವೆ? ಕವನಗಾರಿಕೆಯು ಹುಟ್ಟು ಪ್ರತಿಭೆಯಿಲ್ಲದೆ ಕೈಹಿಡಿಯದು.
ಸಾಮಾನ್ಯವಾಗಿ ಪ್ರತಿಭೆಯೊಂದೇ ಮುಂದಕ್ಕೆ ನಡೆಸುವುದಿಲ್ಲ. ಬರೆಯುವ ಕುಶಲಗಾರಿಕೆಯಿಂದ ಕವನಗಾರಿಕೆಗೆ ಪ್ರತಿಭೆಯ ಊರುಗೋಲು ಹಿಡಿದು ಕಾವ್ಯಶಿಖರವನ್ನೇರಲು ಗ್ರಹಿಕೆ ಸೂಕ್ಷ್ಮ ಮತ್ತು ಸತತವಾಗಿರಲೇಬೇಕು.
'ಪ್ರಥಮ ಪಯಣ' ಎಂಬ ಮೊದಲ ಕವನ ಸಂಕಲನವನ್ನು ಪ್ರಕಟಣೆಗೆ ನಮ್ಮ ಪ್ರಕಾಶನಕ್ಕೆ ನೀಡಿದ್ದ ಶ್ರೀಮತಿ ಆಶಾ ಪ್ರಮೋದ್ ಅವರು ಮುಂದೆ ಬರವಣಿಗೆ ನಿಲ್ಲಿಸೇ ಇಲ್ಲ. ಒಂದೆರಡು ಕಾದಂಬರಿಗಳ ಜೊತೆಗೆ ಇದೀಗ ಒಂದಷ್ಟು ಭಾವಬೆಳೆಯನ್ನಿಲ್ಲಿ ಸಂಗ್ರಹಿಸಿ 'ಕಾವ್ಯಕನ್ನಿಕೆ' ಹೆಸರಿನಲ್ಲಿ ನೀಡಿದ್ದಾರೆ. ಈ ಬೆಳೆಯಲ್ಲಿ ತೆನೆಕಾಳುಗಳಿವೆ. ಇನ್ನು ಕೆಲವು ಮಕರಂದದ ಹೂಗಳು. ಹೂವಿನ ಸೌಂದರ್ಯ, ತೆನೆಯ ಮಾಧುರ್ಯ ಸಹೃದಯ ಓದುಗರಿಗೆ ದಕ್ಕಲಿ.
ಒಟ್ಟಾರೆ ಕವನ ಮತ್ತು ಹನಿಗವನಗಳ ಈ ಗುಚ್ಛವನ್ನು ಓದಿದಾಗ ಮೊದಲು ಹೇಳಿರುವ ವಿಷಯ ಹಂಚಿಕೊಳ್ಳುವ ಮನಸ್ಸಾಯಿತು.
'ಸೂಕ್ಷ್ಮ ಗ್ರಹಿಕೆಯೊಂದಿಗೆ ಭಾವ-ಬುದ್ದಿಗಳ ಮಿಶ್ರಣವು ಕವಿ ಮನಸ್ಸಿನ ಲಹರಿ. ಉಳಿದ ಅಭಿವ್ಯಕ್ತಿಯೆಲ್ಲ ಶ್ರೀಹರಿ.
-ಪ್ರಕಾಶಕರು
Share


ನಾನು ಕಡಲಾಳದ ಕಥೆಗಳು ಕಾದಂಬರಿಯನ್ನು ಓದಿದ್ದು ಕಥಾ ವಸ್ತು ಮತ್ತು ನಿರೂಪಣೆ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುವಂತಿದ್ದು ಭ್ಯರಪ್ಪ ನವರ ಇನ್ನೊಂದು ಮಜಲನ್ನು ಓದುವಂತೆ ಓದಿಸಿಕೊಂಡು ಹೋಗುತ್ತದೆ..... ಆದರಿಲ್ಲಿ ನಾನು ಹೇಳಬೇಕಿಂದಿರುವುದು ಈ ಲೇಖಕಿಯವರ ಕವನ ಸಂಕಲನದ ಬಗ್ಗೆ......
ಹರಿವು ಕವನ ಸ್ಪರ್ಧೆ 2025 ರ ಯೌಟ್ಯೂಬ್ ನಲ್ಲಿರುವ ಇವರ ಕವನ ವಾಚನವನ್ನು ಕೇಳಿ ಕೆ ಎಸ್ ಎನ್ ರವರ ಕವನ ವನ್ನೊಮ್ಮೆ ಹೊಕ್ಕಿ ಬಂದಂತಾಯಿತು ವಿರಹ ವೇದನೆ ದ್ಯೋತಕವಾಗಿ ಓಲೆ ಮೇಲಿಟ್ಟಿರೋ ಹಾಲು ಉಕ್ಕುವ ಚಿತ್ರಣ ಕೆ ಏಸ್ ಎನ್ ಕವನಗಳ ಸಾಲು ಗಳ ಚಿತ್ರಣದಂತೆ ಕಣ್ಣ ಮುಂದೆ ಬಂದು ಈ ಕಾವ್ಯ ಕನ್ನಿಕೆ ಯನ್ನು ಓದಲು ಪ್ರೆರೇಪಿಸಿತು....
ಇದರಲ್ಲಿ 49 ಕವನಗಳು ಮತ್ತು 101 ಹನಿಗವನಗಳಿದ್ದು ಮನ ಮೆಚ್ಚಿದ ಮಡದಿ ಹಿಡಿದು ಸಮರ್ಪಣೆ.... ಶರಣಗತಿ... ಹೀಗೆ ಎಲ್ಲಾ ಕವನಗಳು ಒಂಫು ಇನ್ನೊಂದನ್ನು ಮೀರಿಸಿ ಮುನ್ನಡೆಯುವಂತಿವೆ.... ಕವಯತ್ರಿ ಯ ಈ ಕವಿತೆ gala🌹 ಗುಚ್ಚ ವು ನಿಷ್ಕಲ್ಮಶ ಪ್ರೇಮಿಗಳಿಗೆ ಪ್ರೇಮಿಗಳ ದಿನದಂದು ಉಡುಗೊರೆ ಯಾಗಿ ನೀಡಲು. ಆಗತಾನೆ ಮದುವೆ ದಿನ ನಿರ್ಧಾರಿಸಲ್ಪಟ್ಟು ಹೊಸ ಬಾಳಿಗೆ ಹೆಜ್ಜೆ ಇಡಲು ಕಾಯುತ್ತಿರುವವರಿಗೆ. ನವ ವಧು ವರರಿಗೆ ಉಡುಗೊರೆ ಯಾಗಿ ನೀಡಲು ಸಂಗ್ರಹ ಯೋಗ್ಯ ಪುಸ್ತಕ ವಾಗಿದೆ
Subscribe to our emails
Subscribe to our mailing list for insider news, product launches, and more.