Skip to product information
1 of 2

R. D. G.

ಕನ್ನಡಕ್ಕಾಗಿ ಕೈಯೆತ್ತು

ಕನ್ನಡಕ್ಕಾಗಿ ಕೈಯೆತ್ತು

Publisher - ಸಪ್ನ ಬುಕ್ ಹೌಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 332

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

ಕರ್ನಾಟಕ ಏಕೀಕರಣವೇನೋ ನೆರವೇರಿ ಅರುವತ್ತು ವರ್ಷಗಳಾಗುತ್ತಾ ಬಂತು. ಇಷ್ಟು ಕಾಲ ಕಳೆದ ಬಳಿಕ ನಾಡಿನ ಈಗಿನ ಪರಿಸ್ಥಿತಿ ಏನಾಗಿದೆ ಎಂಬುದನ್ನು ಕುರಿತು ಚಿಂತಿಸಬೇಕಾದ ಆವಶ್ಯಕತೆ ಉಂಟಾಗಿದೆ. ನಾಡಿನ ಕನ್ನಡ ಜನರ ಜೀವನದಲ್ಲಿ ಏರುಪೇರಾಗಿದೆ. ಕನ್ನಡ ಭಾಷೆಯ ಮಾಧ್ಯಮಕ್ಕೆ ಅಡ್ಡಿ ಬಂದಿದೆ. ಕನ್ನಡ ಶಾಲೆಗಳನ್ನು ಮುಚ್ಚಿಬಿಡುವ ಪರಿಸ್ಥಿತಿ ಉಂಟಾಗಿದೆ. ಶಾಸ್ತ್ರೀಯ ಭಾಷೆಯ ಭಾಗ್ಯ ಬಂದುದಾದರೂ ಅದರಿಂದ ಯಾವ ಕೆಲಸವೂ ಆಗುತ್ತಿಲ್ಲ. ರೈತರ ಜೀವನದಲ್ಲಿ ಏರುಪೇರಾಗಿದೆ. ಸರಕಾರವು ಪ್ರತಿವರ್ಷವೂ ಹೊಸ ಪುಸ್ತಕಗಳನ್ನು ಕೊಳ್ಳುವ ಏರ್ಪಾಟಿತ್ತು. ಈ ಬಗ್ಗೆ ಸರಿಯಾದ ಯಾವ ನಿಯಮಗಳೂ ಪಾಲಿಸಲ್ಪಡುತ್ತಿಲ್ಲ. ಶಾಲೆಗಳಲ್ಲಿ ಬಾಲಕಿಯರ ಜೀವನ ಸುಗಮವಾಗಿಲ್ಲ. ಕನ್ನಡ ಯುವಕರಿಗೆ ಉದ್ಯೋಗ ದೊರಕುತ್ತಿಲ್ಲ. ಅವರು ಉದ್ಯೋಗಶೀಲರಾಗಲು ಏರ್ಪಾಟುಗಳು ಆಗಬೇಕು. ಸರೋಜಿನಿ ಮಹಿಷಿಯ ವರದಿ ಕಪಾಟು ಸೇರಿದೆ. ಉದ್ಯಮಗಳು ಕನ್ನಡಿಗರಿಂದ ಪ್ರಾರಂಭಗೊಂಡು ಕನ್ನಡಿಗರಿಗೆ ಉದ್ಯೋಗ ಲಭಿಸಬೇಕು.

ರಾಜ್ಯದಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿ ಕುಳಿತಿದೆ. ವಿದ್ಯುತ್ ಉತ್ಪಾದನೆ ಸಾಕಾಗುತ್ತಿಲ್ಲ. ಇದರ ಬಗ್ಗೆ ಕೂಡಲೆ ಕಾರ್ಯಮುಖರಾಗಬೇಕು - ತೀರ್ಪು ತೆಗೆದುಕೊಳ್ಳಬೇಕು. ಈ ಪುಸ್ತಕದಲ್ಲಿ, ಇಂಥ ಅನೇಕ ಸಮಸ್ಯೆಗಳ ಚಿತ್ರವಿದೆ. ರಾಜ್ಯೋತ್ಸವ ಸಂದರ್ಭದಲ್ಲಿ ಈ ಸಂಪುಟವನ್ನು ಸಪ್ನ ಪ್ರಕಾಶನದ ಶ್ರೀ ಆರ್. ದೊಡ್ಡೆಗೌಡರು ಸಂಪಾದಿಸಿ ಪ್ರಕಟಿಸಿದ್ದಾರೆ. ವಿದ್ವಾಂಸರ ಗಮನವನ್ನು ಸೆಳೆಯುವ ಅನೇಕ ವಿವರಗಳಿವೆ. ಓದುಗರು ಗಮನಿಸಬೇಕು. ಇಲ್ಲಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು.

View full details