1
/
of
1
Maasti Venkatesha Iyyangar
ಕನ್ನಡದ ಸೇವೆ ತಾಯ್ನುಡಿಯ ತಮ್ಮಡಿ ಕನ್ನಡ ಲೆಂಕ
ಕನ್ನಡದ ಸೇವೆ ತಾಯ್ನುಡಿಯ ತಮ್ಮಡಿ ಕನ್ನಡ ಲೆಂಕ
Publisher -
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
೧೯೨೯ನೇ ಇಸವಿಯಲ್ಲಿ ಬೆಳಗಾಮ್ ನಗರದಲ್ಲಿ ನೆರೆದ ಶುಕ್ಲ ಸಂವತ್ಸರದ ಕರ್ನಾಟಕ ಸಾಹಿತ್ಯ ಸಮ್ಮೇಲನದ ಮುಂದೆ ನಾನು ಮಾಡಿದ ಆರಂಭ ಭಾಷಣವನ್ನು ಈ ಪುಸ್ತಕದ ರೂಪದಲ್ಲಿ ಅಚ್ಚು ಮಾಡಿಸಿದ್ದೇನೆ. ಆ ಸಮ್ಮೇಲನದ ಏರ್ಪಾಡಿನಲ್ಲಿ ಬೆಳಗಾಮಿನ ನಮ್ಮ ಪ್ರಮುಖ ಕರ್ಣಾಟಕರು ತೋರಿಸಿದ ಉತ್ಸಾಹ ಮಂತ್ರಶಕ್ತಿ ಕಾರ್ಯದಕ್ಷತೆಗಳನ್ನು ಇಷ್ಟೊಂದು ಹೇಳುವಂತಿಲ್ಲ. ಈ ವಿಚಾರದಲ್ಲಿ ಉತ್ತರ ಕರ್ಣಾಟಕವು ಕನ್ನಡ ನಾಡಿಗೇ ಆದರ್ಶವಾಗಿದೆ. ಸಮ್ಮೇಲನಗಳ ಸಮಯದಲ್ಲಿ ಕಾಣುವ ಈ ಉತ್ಸಾಹವು ನಮ್ಮ ಜನರಲ್ಲಿ ಎಷ್ಟು ಜೀವ ಕಳೆಯಿದೆಯೆಂಬುದನ್ನು ತೋರಿಸುತ್ತದೆ. ಇಂಥ ಉತ್ಸಾಹವನ್ನೂ ಶಕ್ತಿಯನ್ನೂ ಆರು ತಿಂಗಳಿಗೊಮ್ಮೆ ವರ್ಷಕ್ಕೊಮ್ಮೆ ತೋರಿಸಿ ಉಳಿದಾಗ ಸುಮ್ಮನೆ ಇರುವುದನ್ನು ಬಿಟ್ಟು ಸರ್ವದಾ ಕಾರ್ಯದಲ್ಲಿ ಪ್ರಕಾಶಗೊಳಿಸುತ್ತಿರುವುದೇ ಮುಂದುವರಿಯುವ ಜನದ ಲಕ್ಷಣ. ಈ ಬಗ್ಗೆ ನಾವು ಮಾಡಬೇಕಾಗಿರುವ ಕಾರಗಳು ಯಾವುವೆಂಬುದನ್ನು ನಾನು ಸಭೆಯ ಮುಂದೆ ಮಾಡಿದ ಭಾಷಣದಲ್ಲಿ ಸೂಚಿಸಲು ಯತ್ನಮಾಡಿದನು. ಇಂಥ ಭಾಷಣದಲ್ಲಿ ವಿಷಯ ಹೊಸದಾಗಿರಲಾರದು; ಈ ಭಾಷಣದಲ್ಲಿ ರೀತಿಯಾಗಲಿ ವಿಶೇಷವಾಗಿ ಸಾಹಿತ್ಯದ್ದೆಂದು ನಾನು ಹೇಳಲಾರೆನು; ಭಾಷಣವು ಲಂಬವೂ ಆಯಿತು. ನನ್ನ ಜ್ಞಾಪಕಕ್ಕಾಗಿ ಮಾಡಿಕೊಳ್ಳಬಹುದಾಗಿದ್ದ ಕರ್ತವ್ಯಗಳ ಪಟ್ಟಿಯೊಂದನ್ನು ದೇಶ ಸೇವಕರೂ ಭಾಷಾ ಸೇವಕರೂ ನೆರೆದ ಸಭೆಯ ಮುಂದೆ ಇರಿಸುವುದು ಉಚಿತವೆಂದು ನನಗೆ ತೋರಿದ್ದರಿಂದ ಭಾಷಣಕ್ಕೆ ಈ ರೂಪು ಬಂದಿತು. ಅದೇ ಪಟ್ಟಿಯನ್ನು ಈಗ ನಮ್ಮ ಜನರ ಮುಂದೆ ಇರಿಸಿದ್ದೇನೆ. ಇದನ್ನು ಓದುವುದರಲ್ಲಿ ಯಾರಿಗಾದರೂ ಬೇಸರ ತೋರುವುದಾದರೆ ಅಂಥವರು ಈ ಉದ್ದೇಶವನ್ನು ನೆನೆದು ನನ್ನನ್ನು ಮನ್ನಿಸಬೇಕಾಗಿ ಬೇಡುತ್ತೇನೆ.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
-ಮಾಸ್ತಿ ವೆಂಕಟೇಶ ಅಯ್ಯಂಗಾರ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.