M. V. Nagaraja Rao
Publisher - ವಸಂತ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 184
Type - Paperback
ವ್ಯಾಕರಣ ವಿಷಯ ಶಾಸ್ತ್ರೋಕ್ತ, ಗಹನ ಹಾಗೂ ಗಂಭೀರ. ವಿದ್ಯಾರ್ಥಿಗಳ ದೃಷ್ಟಿಯಲ್ಲಿ ವ್ಯಾಕರಣವೆಂದರೆ 'ಜಗಿಯಲಾಗದ ಕಬ್ಬಿಣದ ಕಡಲೆ' ಎಂಬ ಭಾವನೆಯಿದೆ. ಈ ಮನೋಭಾವ ವಿದ್ಯಾರ್ಥಿಗಳಿಗೆ ಬರದಂತೆ ಎಚ್ಚರವಹಿಸುವುದು ಅಗತ್ಯ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ವ್ಯಾಕರಣ ಉಪಯುಕ್ತವಾಗಿರಬೇಕು. ಭಾಷೆ ಸರಳ, ಸುಲಭವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿರಬೇಕು.
ಪ್ರಸ್ತುತ ಕನ್ನಡ ವ್ಯಾಕರಣ ದರ್ಪಣ' ಕೃತಿಯನ್ನು ಬರೆದಿರುವ ನಿವೃತ್ತ ಪ್ರಾಚಾರ್ಯರಾದ ಎಂ. ವಿ. ನಾಗರಾಜರಾವ್ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ವಿದ್ವಾಂಸರು. 38 ವರ್ಷಗಳು ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಬೋಧಿಸಿದವರು. ಪ್ರಾಥಮಿಕ ಹಂತದಿಂದ ಕಾಲೇಜು ಹಂತಗಳಲ್ಲಿ ಪಾಠ ಹೇಳಿದವರು. ಇದು ಸರಳ, ಸುಲಭ ಶೈಲಿಯಲ್ಲಿದ್ದು ವಿದ್ಯಾರ್ಥಿಗಳಿಗೆ ಬಹು ಬೇಗ ಗ್ರಾಹ್ಯವಾಗುತ್ತದೆಂಬ ನಂಬಿಕೆ ನಮಗಿದೆ.