Skip to product information
1 of 1

Dr. D. N. Shankara Batt

ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

Publisher -

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type - Paperback

ಕನ್ನಡ ಭಾಷೆಯ ಚರಿತ್ರೆಯನ್ನು ಈ ಪುಸ್ತಕದಲ್ಲಿ ಎರಡು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಅವುಗಳಲ್ಲಿ ಒಂದೊಂದು ಭಾಗದಲ್ಲೂ ಒಂದೊಂದು ಮೂಲೆನುಡಿಯನ್ನು ಕಟ್ಟಿ, ಆ ಮೂಲನುಡಿಯ ಮೂಲಕ ಕನ್ನಡ ಭಾಷೆಯ ಚರಿತ್ರೆಯನ್ನು ವಿಂಗಡಿಸಲಾಗಿದೆ.

ಮೊದಲನೆಯ ಭಾಗದಲ್ಲಿ ಕನ್ನಡ, ತಮಿಳು, ತೆಲುಗು, ತುಳು, ಗೋಂಡಿ, ಕುಡುಕ್ ಮೊದಲಾದ ದ್ರಾವಿಡ ನುಡಿಗಳಿಗೆಲ್ಲ ಮೂಲವಾಗಬಲ್ಲ ಮೂಲದ್ರಾವಿಡ ಎಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳಲಾಗಿದೆ, ಮತ್ತು ಈ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ವಿವರಿಸಲಾಗಿದೆ.

ಎರಡನೆಯ ಭಾಗದಲ್ಲಿ ಕನ್ನಡದ ಬೇರೆ ಬೇರೆ ಇವತ್ತಿನ ಮತ್ತು ಹಿಂದಿನ ಒಳನುಡಿಗಳಿಗೆಲ್ಲ ಮೂಲವಾಗಬಲ್ಲ ಮೂಲಕನ್ನಡ ಎಂಬ ಬೇರೊಂದು ಮೂಲನುಡಿಯನ್ನು ಕಲ್ಪಿಸಿಕೊಳ್ಳಲಾಗಿದೆ, ಮತ್ತು ಈ ಕಲ್ಪಿತವಾದ ನುಡಿಯಿಂದ ಕನ್ನಡ ಈ ಒಳನುಡಿಗಳು ಹೇಗೆ ಬೆಳೆದುಬಂದಿರಬೇಕು ಎಂಬುದನ್ನು ವಿವರಿಸಲಾಗಿದೆ.

ಒಂದು ನುಡಿಯ ಚರಿತ್ರೆಯನ್ನು ಈ ರೀತಿ ಮೂಲನುಡಿಯನ್ನು ಕಟ್ಟಿ ಹೇಳುವ ಬಗೆ ಕನ್ನಡಕ್ಕೆ ಹೊಸದು. ಮುಖ್ಯವಾಗಿ ಕನ್ನಡದ ಶಾಸನಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಹೋಲಿಸಿ ನೋಡಿ, ಮತ್ತು ಅವುಗಳ ಕಾಲಾನುಕ್ರಮವನ್ನು ಬಳಸಿ, ಕನ್ನಡದ ಚರಿತ್ರೆಯನ್ನು ಬರೆಯುವುದೇ ಕನ್ನಡದಲ್ಲಿ ಬಳಕೆಯಲ್ಲಿರುವ ಬಗೆ. ಆದರೆ, ಅಂತಹ ಚರಿತ್ರೆ ಕನ್ನಡ ಬರಹದ ಚರಿತ್ರೆಯಾಗಬಲ್ಲುದಲ್ಲದೆ, ಕನ್ನಡ ನುಡಿಯ ಚರಿತ್ರೆಯಾಗಲಾರದು. ಚರಿತ್ರೆಯನ್ನು ಬರೆಯುವಲ್ಲಿ ಬಳಕೆಯಾಗುವ ಈ ಎರಡು ಬಗೆಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ವಿವರಿಸಲಾಗಿದೆ.

ಕನ್ನಡ ನುಡಿಯ ಚರಿತ್ರೆಯನ್ನು ಇನ್ನೊಂದು ರೀತಿಯಲ್ಲಿ, ಮತ್ತು ಇನ್ನಷ್ಟು ಹೆಚ್ಚು ವಿವರವಾಗಿ ತಿಳಿಸಿರುವುದನ್ನು ಇದೇ ಬರಹಗಾರರ ಕನ್ನಡ ನುಡಿ ನಡೆದು ಬಂದ ದಾರಿ ಎಂಬ ಪುಸ್ತಕದಲ್ಲಿ ನೋಡಬಹುದು.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ವಿವೇಕ್ ಶಂಕರ್
ಕನ್ನಡ ಹಿನ್ನಡವಳಿ ಹೀಗೂ ನೋಡಬಹುದು

ಕನ್ನಡ ನುಡಿಯ ಹಿನ್ನಡವಳಿಯೆಂದ ಕೂಡಲೇ ಬರಿ ಬರಹಗಳ ನೆರವಿನಿಂದ ನೋಡುವುದಾದರೆ ಅದು ಕನ್ನಡ ಬರಹದ ಹಿನ್ನಡವಳಿ ಆಗುತ್ತದೆ ಹೊರತು ಕನ್ನಡ ನುಡಿಯ ಹಿನ್ನಡವಳಿಯಲ್ಲವೆಂದು ಈ ಹೊತ್ತಗೆ ಓದಿದರೆ ನೆರೆಯಾಗಿ ತಿಳಿಯುತ್ತದೆ. ನಂಟಿರುವ ತಮಿಳು, ತೆಲುಗು, ಮಲಯಾಳಂ, ಕೊಡವ, ತುಳು ಮುಂತಾದ ದ್ರಾವಿಡ ನುಡಿಗಳಿಗೆ ಹೋಲಿಸಿದಾಗ ಮೂಲದ್ರಾವಿಡವೆಂದು ಒಂದು ಕಟ್ಟಿದ ನುಡಿಯ ನೆರವಿನಿಂದ ಈಗಿನ ಕನ್ನಡಕ್ಕೂ ನಡೆದಿರುವ ಮಾರ‍್ಪಾಟುಗಳೇನೆಂದು ತಿಳಿಯುತ್ತದೆ ಮತ್ತು ಮೂಲಕನ್ನಡದಿಂದ ಈಗಿನ ಒಳನುಡಿಗಳ ಬೆಳವಣಿಗೆ ಕೂಡ ತಿಳಿದುಕೊಳ್ಳಬಹುದು. ಕನ್ನಡ ಇಲ್ಲ ಯಾವುದೇ ನುಡಿಯಾಗಲಿ ಅದಿರುವುದು ಮಾತಿನಲ್ಲಿ ಹಾಗಾಗಿ ಮಾತಿನ ಕುರುಹುಗಳನ್ನು ಎಣಿಸಿದಾಗ ಒಂದು ನುಡಿಯ ಹಿನ್ನಡವಳಿ ತಿಳಿದುಕೊಳ್ಳಬಹುದೆಂದು ಹೊತ್ತಗೆ ಓದಿದಾಗ ತಿಳಿಯುತ್ತದೆ. ನಾಳಿನ ಕನ್ನಡಕ್ಕೆ ನೆನ್ನೆಗಳ ತಿಳಿವಳಿಕೆ ಬೇಕಾಗುತ್ತದೆ ಹಾಗಾಗಿ ಈ ಹೊತ್ತಗೆಯನ್ನು ಎಲ್ಲ ಕನ್ನಡಿಗರು ಓದಲೇ ಬೇಕು.