Skip to product information
1 of 2

Dr. H. R. Krishnamurthy

ಕಲ್ಪವೃಕ್ಷದ ಜಾಡು ಹಿಡಿದು

ಕಲ್ಪವೃಕ್ಷದ ಜಾಡು ಹಿಡಿದು

Publisher - ನವಕರ್ನಾಟಕ ಪ್ರಕಾಶನ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 176

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಕೃತಿ ಒಂದು ವಿಶಿಷ್ಟ ರೀತಿಯ ಲೇಖನಗಳ ಸಂಗ್ರಹ. ಕಲ್ಪವೃಕ್ಷದ ಜಾಡು ಹಿಡಿದು ಹೊರಟಂತೆಯೇ, ರಾಮದೇವರ ಬೆಟ್ಟದಲ್ಲಿ ಕಾಗೆಗಳು ಏಕಿಲ್ಲ ಎಂಬುದನ್ನು ಶೋಧಿಸುವ ವೈಜ್ಞಾನಿಕ ಕುತೂಹಲ ಇಲ್ಲಿದೆ. ಇದರಲ್ಲಿ ಚಿಟ್ಟೆಗಳು ಮತ್ತು ಪಕ್ಷಿಗಳ ಕುರಿತು, ಮರ-ಗಿಡಗಳ ಕುರಿತು, ಪರಿಸರ ಮತ್ತು ಹವಾಮಾನ ಕುರಿತು, ಅಂತೆಯೇ ಸುನಾಮಿಯಂಥ ಪ್ರಕೃತಿ ವಿಕೋಪ ಕುರಿತು ಲೇಖನ ಗಳಿವೆ. ಇವು ನಮ್ಮ ಕಣ್ಣ ಮುಂದಿನ ಹಲವು ವಿದ್ಯಮಾನ ಗಳನ್ನು ವಿಜ್ಞಾನದ ಒರೆಗಲ್ಲಿಗೆ ಉಜ್ಜಿ ಒಪ್ಪಮಾಡಿದಂತೆ, ಓದುಗರನ್ನು ವಿಜ್ಞಾನದ ಅರಿವಿನ ಆಳಕ್ಕೆ ಒಯ್ಯುತ್ತವೆ. ಲೇಖನಗಳ ಜೊತೆಗೆ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆದು ಬರುವ ನಿಟ್ಟಿನಲ್ಲಿ ಗಣನೀಯ ಕಾರ್ಯ ಮಾಡಿರುವ ಪ್ರೊ|| ಜೆ. ಆರ್. ಲಕ್ಷ್ಮಣರಾಯರ ಕುರಿತ ಲೇಖನ, ಹಾಗೂ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಇ. ಹನುಮಂತರಾವ್ ಅವರೊಂದಿಗೆ ಸಂದರ್ಶನವಿದೆ.

ಇದನ್ನು ರಚಿಸಿರುವ ಡಾ|| ಎಚ್. ಆರ್. ಕೃಷ್ಣಮೂರ್ತಿ ಪ್ರಸಾರ ಭಾರತಿಯಲ್ಲಿ ಉಪಮಹಾನಿರ್ದೆಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ವಿಜ್ಞಾನ ಪ್ರಸಾರದಲ್ಲಿ ತೊಡಗಿಕೊಂಡಿರುವ ಇವರು, ಚಾರಣದ ಮೂಲಕ ಪ್ರಕೃತಿಯನ್ನು ಪರಿಚಯ ಮಾಡಿಕೊಳ್ಳುವವರು. 'ಪರಿಸರ ಪ್ರಶಸ್ತಿ' ವಿಜೇತರು. ಇವರ 'ಜೈವಿಕ ವೈವಿಧ್ಯ' ನವಕರ್ನಾಟಕದಿಂದ ಪ್ರಕಟವಾಗಿದೆ. ಪರಿಸರ, ಪಕ್ಷಿಗಳು, ವೃಕ್ಷಗಳ ಕುರಿತ ಇವರ ಹಲವು ಪುಸ್ತಕಗಳು ಜನಪ್ರಿಯವಾಗಿವೆ.

'ಸಂಕುಲ' ಸಂಸ್ಥೆ, ನಾಡಿನ ಮೂರು ಮಂದಿ ಖ್ಯಾತ ಪರಿಸರ ವಿಜ್ಞಾನ ಲೇಖಕರನ್ನು ಸನ್ಮಾನಿಸುತ್ತಿರು

View full details

Talk about your brand

Share information about your brand with your customers. Describe a product, make announcements, or welcome customers to your store.