Shatavadhani Dr. R. Ganesh
ಕಲಾಕೌತುಕ
ಕಲಾಕೌತುಕ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 248
Type - Paperback
Couldn't load pickup availability
ಗಣೇಶರು ಉನ್ನತಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಓದಿರುವವರು; ಸಂಸ್ಕೃತ-ಕನ್ನಡಭಾಷೆಗಳ ಸಾಹಿತ್ಯ-ವ್ಯಾಕರಣಗಳನ್ನು ಅರೆದು ಕುಡಿದಿರುವವರು: ಹಾಗೆಯೇ ಭಾರತೀಯದರ್ಶನಶಾಸ್ತ್ರಗಳ ಎಲ್ಲ ಶಾಖೆಗಳನ್ನೂ ಸಾಕಷ್ಟುಮಟ್ಟಿಗೆ ಅಧ್ಯಯನ ಮಾಡಿರುವವರು: ವಿಶೇಷವಾಗಿ ಕರ್ಣಾಟಕಸಂಗೀತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸಿರುವ ಮಟ್ಟಿಗೆ ಆ ಕಲೆಯ ಅಭ್ಯಾಸ ಮಾಡಿರುವವರು; ಭಾರತೀಯನರ್ತನಶಾಸ್ತ್ರವನ್ನು ತಿಳಿದವರು; ಭಾರತೀಯರ ಶಿಲ್ಪ-ದೇವಾಲಯಗಳ ನಿರ್ಮಾಣಶಾಸ್ತ್ರಗಳಲ್ಲಿ ಪ್ರದೇಶವುಳ್ಳವರು: ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದೀ, ಪ್ರಾಕೃತ ಮುಂತಾದ ಹತ್ತಾರು ಭಾಷೆಗಳನ್ನು ಬಲ್ಲವರು; ಇಂಗ್ಲಿಷ್ ಸಾಹಿತ್ಯವನ್ನೂ ಓದಿಕೊಂಡವರು: ಕನ್ನಡ-ಸಂಸ್ಕೃತ-ತೆಲುಗು-ಪ್ರಾಕೃತಗಳಲ್ಲಿ ಸಾವಿರಕ್ಕೂ ಮಿಕ್ಕು ಅವಧಾನಗಳನ್ನು ಮಾಡಿರುವ ಅಸಾಧಾರಣ ಸ್ಮೃತಿಶಕ್ತಿ ಮತ್ತು ಕಲ್ಪನಾಶೀಲತೆಗಳನ್ನು ಗಳಿಸಿಕೊಂಡಿರುವವರು: ಇಷ್ಟೆಲ್ಲ ಇದ್ದೂ ಕೇವಲ ಭೂತಕಾಲದತ್ತ ನೋಡದೆ ಸಮಕಾಲೀನ ಕಲಾಪ್ರಕಾರಗಳಲ್ಲಿ ಕೂಡ ಆಸಕ್ತಿಯಿರುವವರು.
ಗಣೇಶರು ಏನು ಬರೆದರೂ ವ್ಯಾಪಕವಾದ ಸಂಶೋಧನೆ ಮತ್ತು ವಿಪುಲವಾದ ಸಾಮಗ್ರಿಯ ಆಧಾರವಿಲ್ಲದೆ ಬರೆಯುವುದಿಲ್ಲ. ಈ ಗುಣವು ನಮ್ಮ ಎಷ್ಟೋ ಪ್ರಸಿದ್ಧನಾಮರಿಗೆ ಇಲ್ಲ.
ಚಿಕ್ಕ ವಯಸ್ಸಿನಲ್ಲಿ ಆನಂದ ಕುಮಾರಸ್ವಾಮಿಯವರ ಗ್ರಂಥಗಳನ್ನು ಓದಿ ಕಲೆ, ಸಾಹಿತ್ಯ ಮತ್ತು ಮೌಲ್ಯಗಳ ಬಗೆಗೆ ಪ್ರೀತಿ ಮತ್ತು ಗ್ರಹಿಕೆಗಳನ್ನು ಬೆಳಸಿಕೊಂಡ ನನಗೆ ಗಣೇಶರ ಈ ಸಂಕಲನವನ್ನು ಓದುವಾಗ ಕುಮಾರಸ್ವಾಮಿಯವರ ಬರೆಹಗಳ ಔನ್ನತ್ಯ, ವೈಶಾಲ್ಯ ಮತ್ತು ಮೌಲ್ಯಗಳ ತುಡಿತದ ಅನುಭವವಾಗಿದೆ.
ಡಾ. ಎಸ್.ಎಲ್. ಭೈರಪ್ಪ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.