Shatavadhani Dr. R. Ganesh
ಕಲಾಕೌತುಕ
ಕಲಾಕೌತುಕ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 248
Type - Paperback
Couldn't load pickup availability
ಗಣೇಶರು ಉನ್ನತಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಓದಿರುವವರು; ಸಂಸ್ಕೃತ-ಕನ್ನಡಭಾಷೆಗಳ ಸಾಹಿತ್ಯ-ವ್ಯಾಕರಣಗಳನ್ನು ಅರೆದು ಕುಡಿದಿರುವವರು: ಹಾಗೆಯೇ ಭಾರತೀಯದರ್ಶನಶಾಸ್ತ್ರಗಳ ಎಲ್ಲ ಶಾಖೆಗಳನ್ನೂ ಸಾಕಷ್ಟುಮಟ್ಟಿಗೆ ಅಧ್ಯಯನ ಮಾಡಿರುವವರು: ವಿಶೇಷವಾಗಿ ಕರ್ಣಾಟಕಸಂಗೀತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸಿರುವ ಮಟ್ಟಿಗೆ ಆ ಕಲೆಯ ಅಭ್ಯಾಸ ಮಾಡಿರುವವರು; ಭಾರತೀಯನರ್ತನಶಾಸ್ತ್ರವನ್ನು ತಿಳಿದವರು; ಭಾರತೀಯರ ಶಿಲ್ಪ-ದೇವಾಲಯಗಳ ನಿರ್ಮಾಣಶಾಸ್ತ್ರಗಳಲ್ಲಿ ಪ್ರದೇಶವುಳ್ಳವರು: ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದೀ, ಪ್ರಾಕೃತ ಮುಂತಾದ ಹತ್ತಾರು ಭಾಷೆಗಳನ್ನು ಬಲ್ಲವರು; ಇಂಗ್ಲಿಷ್ ಸಾಹಿತ್ಯವನ್ನೂ ಓದಿಕೊಂಡವರು: ಕನ್ನಡ-ಸಂಸ್ಕೃತ-ತೆಲುಗು-ಪ್ರಾಕೃತಗಳಲ್ಲಿ ಸಾವಿರಕ್ಕೂ ಮಿಕ್ಕು ಅವಧಾನಗಳನ್ನು ಮಾಡಿರುವ ಅಸಾಧಾರಣ ಸ್ಮೃತಿಶಕ್ತಿ ಮತ್ತು ಕಲ್ಪನಾಶೀಲತೆಗಳನ್ನು ಗಳಿಸಿಕೊಂಡಿರುವವರು: ಇಷ್ಟೆಲ್ಲ ಇದ್ದೂ ಕೇವಲ ಭೂತಕಾಲದತ್ತ ನೋಡದೆ ಸಮಕಾಲೀನ ಕಲಾಪ್ರಕಾರಗಳಲ್ಲಿ ಕೂಡ ಆಸಕ್ತಿಯಿರುವವರು.
ಗಣೇಶರು ಏನು ಬರೆದರೂ ವ್ಯಾಪಕವಾದ ಸಂಶೋಧನೆ ಮತ್ತು ವಿಪುಲವಾದ ಸಾಮಗ್ರಿಯ ಆಧಾರವಿಲ್ಲದೆ ಬರೆಯುವುದಿಲ್ಲ. ಈ ಗುಣವು ನಮ್ಮ ಎಷ್ಟೋ ಪ್ರಸಿದ್ಧನಾಮರಿಗೆ ಇಲ್ಲ.
ಚಿಕ್ಕ ವಯಸ್ಸಿನಲ್ಲಿ ಆನಂದ ಕುಮಾರಸ್ವಾಮಿಯವರ ಗ್ರಂಥಗಳನ್ನು ಓದಿ ಕಲೆ, ಸಾಹಿತ್ಯ ಮತ್ತು ಮೌಲ್ಯಗಳ ಬಗೆಗೆ ಪ್ರೀತಿ ಮತ್ತು ಗ್ರಹಿಕೆಗಳನ್ನು ಬೆಳಸಿಕೊಂಡ ನನಗೆ ಗಣೇಶರ ಈ ಸಂಕಲನವನ್ನು ಓದುವಾಗ ಕುಮಾರಸ್ವಾಮಿಯವರ ಬರೆಹಗಳ ಔನ್ನತ್ಯ, ವೈಶಾಲ್ಯ ಮತ್ತು ಮೌಲ್ಯಗಳ ತುಡಿತದ ಅನುಭವವಾಗಿದೆ.
ಡಾ. ಎಸ್.ಎಲ್. ಭೈರಪ್ಪ
Share

Subscribe to our emails
Subscribe to our mailing list for insider news, product launches, and more.