1
/
of
1
Vishweswara Bhat
ಕೈಹಿಡಿದು ನೀನಡೆಸು ತಂದೆ
ಕೈಹಿಡಿದು ನೀನಡೆಸು ತಂದೆ
Publisher - ವೀರಲೋಕ ಬುಕ್ಸ್
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 212
Type - Paperback
Couldn't load pickup availability
ಒಂದು ಹಂತ ಮೀರಿದ ಬಳಿಕ, ಅಪ್ಪ ಮಗನಿಗೆ ಏನೇ ಹೇಳಿದರೂ, ಬಹಳ ಕೊರೆಯುತ್ತಾನೆ ಎಂದು ಬಹಿರಂಗವಾಗಿಯೇ ಅಸಹನೆ ತೋರುತ್ತಾನೆ. ಆದರೆ ಅಪ್ಪನ ಪಾಲಿಗೆ ಆತ ಎಷ್ಟೆಂದರೂ ಮಗ, ಲೋಕದ ಅನುಭವ ಇಲ್ಲದವನು, ಹೀಗಾಗಿ ತನ್ನ ಉಪದೇಶವನ್ನು ಮುಂದುವರಿಸುತ್ತಾನೆ. ಆದರೆ ಮಗನಿಗೆ ಅವು ಬೇಕಾಗುವುದಿಲ್ಲ. ಮಗನಿಗೆ ತನಗೆ ಗೊತ್ತಿರುವುದನ್ನೆಲ್ಲ ಹೇಳಬೇಕು ಎಂದು ಎನಿಸಿದರೂ ಅವನ್ನೆಲ್ಲ ಕೇಳುವ ಮನಸ್ಥಿತಿಯಲ್ಲಿ ಮಗ ಇರುವುದಿಲ್ಲ. ಹೀಗಾಗಿ ಮಗನಿಗೆ ಹೇಳಬೇಕೆನಿಸಿದ ಎಷ್ಟೋ ಮಾತುಗಳು ಅಪ್ಪನ ಗಂಟಲಲ್ಲೇ ಉಳಿದುಬಿಡುತ್ತವೆ. ಅಷ್ಟೇ ಅಲ್ಲ, ಆ ಮಾತುಗಳನ್ನು ಮುಂದೆಂದೂ ಹೇಳಲು ಆಗುವುದೇ ಇಲ್ಲ. ಈ ಮಾತುಗಳನ್ನು ಮಗನಿಗೆ ಹೇಳಬೇಕಿತ್ತು ಎಂದು ತಂದೆಗೆ ಆಗಾಗ ಅನಿಸುತ್ತದೆ. ಆದರೆ ಆತ ಕೇಳಬೇಕಲ್ಲ? ಇನ್ನು ಶಾಲೆ, ಕಾಲೇಜುಗಳಲ್ಲಿ ಈ ವಿಷಯವನ್ನು ಹೇಳಿಕೊಡುತ್ತಾರಾ? ಉಹುಂ.. ಅದೂ ಇಲ್ಲ. ಪಠ್ಯ – ಪುಸ್ತಕಗಳಲ್ಲೂ ಇವನ್ನು ಸೇರಿಸುವುದಿಲ್ಲ. ಇನ್ನು ಒಳ್ಳೆಯ ಸ್ಕೂಲುಗಳಿಗೆ ಸೇರಿಸಿದರೆ, ಅಲ್ಲಿಯೂ ಹೇಳಿಕೊಡುವುದಿಲ್ಲ, ಹಾರ್ವರ್ಡ್, ಯೇಲ್, ಆಕ್ಸ್ಫರ್ಡ್, ಸ್ಟಾನ್ ಫೋರ್ಡ್, ಜೆಎನ್ಯುನಲ್ಲೂ ಈ ವಿಷಯಗಳನ್ನು ಹೇಳಿಕೊಡುವುದಿಲ್ಲ. ಇದು ಹೇಗೆ ಅಂದ್ರೆ ಮನೆಯಲ್ಲಿ ತಂದೆ-ತಾಯಿ ಹೇಳೊಲ್ಲ, ಶಾಲೆಯಲ್ಲಿ ಗುರುಗಳು ಕಲಿಸೊಲ್ಲ, ಪಠ್ಯದಲ್ಲಿ ಸೇರಿಸೊಲ್ಲ, ಸ್ನೇಹಿತರೂ ತಿಳಿಸೊಲ್ಲ. ಇವು ಅವನ್ನೆಲ್ಲಾ ಮಗನಿಗೆ ಹೇಳಲೇಬೇಕು ಎಂಬ ಒತ್ತಾಸೆಯಿಂದ ಬರೆದ ಲೈಫ್ ಟಿಪ್ಸ್ ! ಇದು ಅಪ್ಪನ ಆಪ್ತ ಸಲಹೆಗಳು ಅಥವಾ ತಂದೆ ಮಗನಿಗೆ ಬರೆದ ಲವ್ ಲೆಟರ್ 1
ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ, ವಿಶ್ವವಾಣಿ
ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ, ವಿಶ್ವವಾಣಿ
Share

Subscribe to our emails
Subscribe to our mailing list for insider news, product launches, and more.