Skip to product information
1 of 2

Vijayavani

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

Publisher - Sahithya Prakashana

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 152

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇನ್ನಷ್ಟು ಬೇಕೆನ್ನ

ಹೃದಯಕ್ಕೆ ರಾಮ.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ ಲೋಕಪ್ರಿಯ ಸಾಹಿತ್ಯಪ್ರಕಾರವಾಗಿದೆ. ಸಣ್ಣಕಥೆಯನ್ನು ನಿರಂತರವಾಗಿ ಓದುವ ವಾಚಕವರ್ಗ ಕನ್ನಡದಲ್ಲಿದೆ. ಸಣ್ಣಕಥೆಯನ್ನು ಜನಪ್ರಿಯಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಕಳೆದ ಶತಮಾನದ ಆರಂಭದಲ್ಲಿ 'ಮಧುರವಾಣಿ', 'ಸುವಾಸಿನಿ", 'ಸಚಿತ್ರಭಾರತ' ಪತ್ರಿಕೆಗಳು ಕನ್ನಡದಲ್ಲಿ ಸಣ್ಣಕಥೆಗಳನ್ನು ಪ್ರಕಟಿಸಿ ಪ್ರಚಾರಕ್ಕೆ ತಂದವು. ಈ ಪರಂಪರೆ ಕನ್ನಡದಲ್ಲಿ ಈಗಲೂ ಮುಂದುವರಿದಿದೆ. ಕನ್ನಡದ ಮಾಸಪತ್ರಿಕೆ, ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ಸಣ್ಣಕಥೆ ನಿರಂತರವಾಗಿ ಬರುತ್ತಿರುವದು ಆಧುನಿಕ ಕನ್ನಡ ಸಾಹಿತ್ಯದ ವೈಶಿಷ್ಟ್ಯ ಎಂದೇ ಹೇಳಬಹುದು. 'ವಿಜಯವಾಣಿ' ದಿನಪತ್ರಿಕೆ ದೀಪಾವಳಿ ಕಥಾಸ್ಪರ್ಧೆ ಏರ್ಪಡಿಸಿ ಕಥೆಗಾರರನ್ನು ಉತ್ತೇಜಿಸುತ್ತಿರುವದು ಹರ್ಷದಾಯಕ ಸಂಗತಿಯಾಗಿದೆ.

ಸಾಹಿತ್ಯದಲ್ಲಿ ಸಣ್ಣಕಥೆ 'ಮೈನರ್' ಆಗಿದ್ದರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಎಪ್ಪತ್ತೈದು ವರ್ಷಗಳ ಕಾಲ ಸಣ್ಣಕಥೆಗಳನ್ನು ಬರೆದು 'ಮೇಜರ್' ಸಾಹಿತಿಯಾಗಿದ್ದ ಮಾಸ್ತಿಯವರು ಕನ್ನಡ ಕಥನ ಪರಂಪರೆಗೆ ಭದ್ರವಾದ ನೆಲೆಯನ್ನು ಒದಗಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಚಳುವಳಿಗಳಲ್ಲಿ ಕನ್ನಡ ಕಥನ ಸಾಹಿತ್ಯ ಹರಿದುಬಂದಿದೆ. ಈಗ ಕನ್ನಡ ಕಥನ ಸಾಹಿತ್ಯದಲ್ಲಿ ಯಾವುದೇ ಚಳುವಳಿಯ ಉದ್ಯೋಷವಿಲ್ಲ. ಆದ್ದರಿಂದಲೇ ಹೊಸ ಕಥೆಗಾರರು ವಾಸ್ತವವಾದಿ ಕಥೆಗಳನ್ನು ಬರೆಯುತ್ತಿದ್ದಾರೆ.

-ಡಾ. ಜಿ.ಎಂ. ಹೆಗಡೆ

-ಡಾ. ಚಂದ್ರಶೇಖರ ವಸ್ತ್ರದ

-ಡಾ. ಅಜಕ್ಕಳ ಗಿರೀಶ ಭಟ್ಟ

View full details