T. S. Gopal
ಹೊಸಗನ್ನಡ ಶಿಕ್ಷಣ ಪ್ರವರ್ತಕ ಪಂಜೆ ಮಂಗೇಶ ರಾವ್
ಹೊಸಗನ್ನಡ ಶಿಕ್ಷಣ ಪ್ರವರ್ತಕ ಪಂಜೆ ಮಂಗೇಶ ರಾವ್
Publisher - ನವಕರ್ನಾಟಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 48
Type - Paperback
Couldn't load pickup availability
ಪಂಜೆ ಮಂಗೇಶ ರಾವ್ ಅವರು ಕನ್ನಡದಲ್ಲಿ ಕಥೆ, ಕವನ, ಬಾಲಸಾಹಿತ್ಯ, ಪ್ರಬಂಧಗಳನ್ನು ಬರೆದವರಲ್ಲಿ ಆದ್ಯರು. ಆಧುನಿಕ ಕನ್ನಡ ಮಕ್ಕಳ ಸಾಹಿತ್ಯದ ಪ್ರಮುಖ ಬಾಲ ಕವಿತೆ ‘ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ ಬಾ ಬಾ ಬಾ ಬಾ ಬಾ ಬಾ‘ ಎನ್ನುವುದು ಪಂಜೆಯವರ ರಚನೆ. ಮೇಲುನೋಟಕ್ಕೆ ಹಾವಿನ ಬಗ್ಗೆ ಮಕ್ಕಳಿಗಿರಬಹುದಾದ ಭಯವನ್ನು ಹೊಡೆದೋಡಿಸುವ ಕವನದ ಹಾಗೆ ಕಂಡರೂ, ಪಂಜೆಯವರ ಮನಸ್ಸಿನಲ್ಲಿ ‘ಬ್ರಿಟಿಷರು ಹಾವಿನ ರೂಪದಲ್ಲಿ ಮನೆಮಾಡಿದ್ದರು‘ ಎಂದು ಕಾಣುತ್ತದೆ. ನಾಗರಹಾವು ಕವನದ ಕೊನೆಯ ಭಾಗವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ, ಎರಡೆಳೆ ನಾಲಗೆ ಇದ್ದರು ಸುಮ್ಮಗೆ, ಎರಗುವೆ ನಿನಗೆ, ಈಗಲೆ ಹೊರಗೆ, ಪೋ ಪೋ ಪೋ ಪೋ ಪೋ ಪೋ‘ ನಾಗರಹವು ಶೀತರಕ್ತದ ಪ್ರಾಣಿ. ಹಾಗಾಗಿ ಅದರ ಮೈ ತಣ್ಣಗೆ ಇರುತ್ತದೆ. ಬ್ರಿಟಿಷರು ವ್ಯಾಪಾರಕ್ಕಾಗಿ ಬಂದವರಂತೆ ಕಂಡರೂ ಸಹ ಅವರ ಮನಸ್ಸಿನಲ್ಲಿ ಭಾರತದ ಅಷ್ಟೂ ಸಂಪತ್ತನ್ನು ದೋಚುವ ದುರಾಲೋಚನೆಯಿತ್ತಲ್ಲವೆ!
Share

Subscribe to our emails
Subscribe to our mailing list for insider news, product launches, and more.