Skip to product information
1 of 2

T. S. Gopal

ಹೊಸಗನ್ನಡ ಶಿಕ್ಷಣ ಪ್ರವರ್ತಕ ಪಂಜೆ ಮಂಗೇಶ ರಾವ್

ಹೊಸಗನ್ನಡ ಶಿಕ್ಷಣ ಪ್ರವರ್ತಕ ಪಂಜೆ ಮಂಗೇಶ ರಾವ್

Publisher - ನವಕರ್ನಾಟಕ ಪ್ರಕಾಶನ

Regular price Rs. 45.00
Regular price Rs. 45.00 Sale price Rs. 45.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 48

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಪಂಜೆ ಮಂಗೇಶ ರಾವ್ ಅವರು ಕನ್ನಡದಲ್ಲಿ ಕಥೆ, ಕವನ, ಬಾಲಸಾಹಿತ್ಯ, ಪ್ರಬಂಧಗಳನ್ನು ಬರೆದವರಲ್ಲಿ ಆದ್ಯರು. ಆಧುನಿಕ ಕನ್ನಡ ಮಕ್ಕಳ ಸಾಹಿತ್ಯದ ಪ್ರಮುಖ ಬಾಲ ಕವಿತೆ ‘ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ ಬಾ ಬಾ ಬಾ ಬಾ ಬಾ ಬಾ‘ ಎನ್ನುವುದು ಪಂಜೆಯವರ ರಚನೆ. ಮೇಲುನೋಟಕ್ಕೆ ಹಾವಿನ ಬಗ್ಗೆ ಮಕ್ಕಳಿಗಿರಬಹುದಾದ ಭಯವನ್ನು ಹೊಡೆದೋಡಿಸುವ ಕವನದ ಹಾಗೆ ಕಂಡರೂ, ಪಂಜೆಯವರ ಮನಸ್ಸಿನಲ್ಲಿ ‘ಬ್ರಿಟಿಷರು ಹಾವಿನ ರೂಪದಲ್ಲಿ ಮನೆಮಾಡಿದ್ದರು‘ ಎಂದು ಕಾಣುತ್ತದೆ. ನಾಗರಹಾವು ಕವನದ ಕೊನೆಯ ಭಾಗವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ, ಎರಡೆಳೆ ನಾಲಗೆ ಇದ್ದರು ಸುಮ್ಮಗೆ, ಎರಗುವೆ ನಿನಗೆ, ಈಗಲೆ ಹೊರಗೆ, ಪೋ ಪೋ ಪೋ ಪೋ ಪೋ ಪೋ‘ ನಾಗರಹವು ಶೀತರಕ್ತದ ಪ್ರಾಣಿ. ಹಾಗಾಗಿ ಅದರ ಮೈ ತಣ್ಣಗೆ ಇರುತ್ತದೆ. ಬ್ರಿಟಿಷರು ವ್ಯಾಪಾರಕ್ಕಾಗಿ ಬಂದವರಂತೆ ಕಂಡರೂ ಸಹ ಅವರ ಮನಸ್ಸಿನಲ್ಲಿ ಭಾರತದ ಅಷ್ಟೂ ಸಂಪತ್ತನ್ನು ದೋಚುವ ದುರಾಲೋಚನೆಯಿತ್ತಲ್ಲವೆ!

View full details