Shatavadhani Dr. R. Ganesh
ಹೊಕ್ಕುಳ ಬಳ್ಳಿಯ ಸಂಬಂಧ'
ಹೊಕ್ಕುಳ ಬಳ್ಳಿಯ ಸಂಬಂಧ'
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 170
Type - Paperback
Couldn't load pickup availability
ಬಹುಭಾಷಾಪ್ರೌಡಿಮೆ. ನನ್ನ ಅತ್ಮೀಯಮಿತ್ರರಾದ ಶತಾವಧಾನಿ ಡಾ. ಆರ್. ಗಣೇಶ್ ಅಸಾಮಾನ್ಯವೈದುಷ್ಯ, ವಿವಿಧಶಾಸ್ತ್ರಪರಿಣತಿ, ಅವಧಾನಸಾಧನೌನ್ನತ್ಯ - ಇವೆಲ್ಲ ಈಗಾಗಲೇ ವಿಶ್ರುತವಾಗಿವೆ. ಅವರ ಈ ಸಾಧನೆಯ ಆಗಾಧತೆ ವಿಸ್ಮಯಾವಹವಾಗಿದ್ದು, ಇದನ್ನು ವಿದ್ವಲ್ಲೋಕದ ಅದ್ಭುತವೆಂದೇ ಪರಿಗಣಿಸಬೇಕಾಗಿದೆ. ಇದರಷ್ಟೇ ಗಮನ ಸೆಳೆಯುವುದು ಅವರ ಸಮಾಜಾಭಿಮುಖತೆ. ವಶಕಗಳ ಪರಿಶ್ರಮದಿಂದಲೂ ವಿದ್ವಜ್ಜನರ ಸಂಶ್ರಯದಿಂದಲೂ ಗಳಿಸಿಕೊಂಡ ಪಾಂಡಿತ್ಯವನ್ನು ಅವರು ಸಮಾಜದಲ್ಲಿ ಸಂಸ್ಕೃತಿ ಪ್ರಜ್ಞೆಯನ್ನು ಉತ್ತೇಜಿಸುವುದಕ್ಕಾಗಿಯೂ ಸಾಹಿತ್ಯ-ಕಲಾದಿಕ್ಷೇತ್ರಗಳ ದುಷ್ಟವೃತ್ತಿಗಳ ಖಂಡನೆಗಾಗಿಯೂ ಋಜುಮೌಲ್ಯಗಳ ಪ್ರವರ್ತನೆಗಾಗಿಯೂ ವಿನಿಯೋಗಿಸುತ್ತ ಬಂದಿದ್ದಾರೆ.
ಪ್ರಕೃತಗ್ರಂಥವಾದರೂ ಗಣೇಶ್ ಅವರ ಈ ಸಾಂಸ್ಕೃತಿಕಾಭಿಯಾನದ ಅಂಗವೇ ಆಗಿದೆ. ಮೇಲ್ನೋಟಕ್ಕೆ ಇದು ವಿವಿಧವಿಷಯಗಳ ವೀಥೀವಿಹಾರ, ಒಳಹೂಕ್ಕಾಗ ಈ ಬರೆಹಗಳ ಉದ್ದಕ್ಕೂ ಕಾಣುವುದು ನಮ್ಮ ಸಂಸ್ಕೃತಿಯ ಬೇರುಗಳ ಸಾರವಂತಿಕೆಯ ಅತ್ಮೀಕ್ಷಣ. ಇಲ್ಲಿ ಸಂಪ್ರದಾಯಪಕ್ಷಪಾತವುಂಟು; ಆದರೆ ಸಂಪ್ರದಾಯಜಡತೆ ಇಲ್ಲ.
ಇಲ್ಲಿಯ ಬರೆಹಗಳಲ್ಲಿ ಎದ್ದುತೋರುವುದು ಆರೋಗ್ಯಪೂರ್ಣವಾದ ಜೀವನದೃಷ್ಟಿಯಿಂದ ಚೋದಿತವಾದ ಸಮಾಜಾವಲೋಕನ, ತನುಗುಣವಾದ ಮಾಹಿತಿ, ಸಮೃದ್ಧವಾದ ಸಾಹಿತ್ಯೋಲ್ಲೇಖಗಳ ಮಾಧ್ಯಮದಿಂದ ಸಂಸ್ಕೃತಿಯ ಪರ್ಯವೇಕ್ಷಣ. ಶ್ರೇಷ್ಠಸಾಹಿತ್ಯವಾಗಷ್ಟೇ ಓದಿದರೂ ಈ ಬರೆಹಗಳು ಆಸ್ವಾದನೀಯವೇ. ಆದರೆ ಅದಕ್ಕೂ ಮಿಗಿಲಾಗಿ ಸಮಾಸ್ವಾದ್ಯವಾಗುವುದು ಈ ಬರೆಹಗಳಲ್ಲಿ ಹೊಮ್ಮಿರುವ ಜೀವನದರ್ಶನ.
ಡಾ. ಎಸ್.ಆರ್. ರಾಮಸ್ವಾಮಿ
("ಹೊಕ್ಕುಳಬಳ್ಳಿಯ ಸಂಬಂಧ'ದ ಮುನ್ನುಡಿಯಿಂದ)
Share

Subscribe to our emails
Subscribe to our mailing list for insider news, product launches, and more.