Skip to product information
1 of 1

T. G. Prabhashankara 'Premi'

ಹಿಮಾಲಯದಲ್ಲಿ ವಿವೇಕಾನಂದ

ಹಿಮಾಲಯದಲ್ಲಿ ವಿವೇಕಾನಂದ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ವಿಶ್ವಾದ್ಯಂತ ಭಾರತ ಭೂಮಿ ಮತ್ತು ಭಾರತೀಯತೆ ಹಾಗೂ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಗೌರವ ಮತ್ತು ಆಸ್ಮಿತೆಯ ಪರಿಚಯವನ್ನು ಮೊಟ್ಟಮೊದಲು ಮಾಡಿದವರು ಅಸಂದಿಗ್ಧವಾಗಿ ಮತ್ತು ನಿರ್ವಿವಾದವಾಗಿ ಸ್ವಾಮಿ ವಿವೇಕಾನಂದರು, ಆಶ್ಚರ್ಯದ ಸಂಗತಿಯೆಂದರೆ ದೇವಭೂಮಿ ಹಿಮಾಲಯದ ಉತ್ತರಾಖಂಡಕ್ಕೆ ಅವರ ಐದು ಯಾತ್ರೆಗಳು ಮತ್ತು ಅವರನ್ನು ವಿವೇಕಾನಂದರನ್ನಾಗಿ ಮಾಡುವಲ್ಲಿ ದೇವಭೂಮಿಯ ಮಹತ್ವಪೂರ್ಣ ಕೊಡುಗೆ ಇಂತಹ ತಥ್ಯಗಳು ಇಲ್ಲಿಯವರೆಗೆ ಹೆಚ್ಚು ಉಲ್ಲೇಖವಾದ ಪ್ರಕರಣಗಳಿಲ್ಲ. 1893ರಲ್ಲಿ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ 17 ದಿನಗಳು ಮಾಡಿದ ಅವರ ಐತಿಹಾಸಿಕ ಭಾಷಣಕ್ಕೆ ಮೊದಲು ಹಾಗೂ ನಂತರವೂ ಅವರು ಈ ದೇವಭೂಮಿಗೆ ಬಂದರು ಮತ್ತು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು.

ಪ್ರಸ್ತುತ ಕೃತಿಯು ಯುಗಪುರುಷ ಸ್ವಾಮಿ ವಿವೇಕಾನಂದರ ಅದೇ ದೇವ ಭೂಮಿ, ಉತ್ತರಾಖಂಡ ಕ್ಷೇತ್ರದ ಅನೇಕ ಯಾತ್ರೆಗಳ ಮತ್ತು ಅವರು ತಂಗಿದ್ದ ಸ್ಥಾನಗಳ ವಿಶೇಷ ಸಂದರ್ಭವನ್ನು ಕುರಿತದ್ದಾಗಿದೆ. ಇದನ್ನು 'ನರೇಂದ್ರ' ರು 'ವಿವೇಕಾನಂದ'ರಾಗಿ ರೂಪುಗೊಳ್ಳುವ ವಿಕಾಸ ಯಾತ್ರೆಯ ಬಗ್ಗೆಯೂ ತಿಳಿದು ಕೊಳ್ಳಬಹುದು. ಉತ್ತುಂಗ ಧವಳ ಪರ್ವತ ಶಿಖರಗಳ ಮತ್ತು ಕಲ-ಕಲ ನಿನಾದದ ನಿರ್ಮಲ ಝರಿಗಳ ಹಾಗೂ ಸಮೃದ್ಧವನ-ಪ್ರಾಂತದ ಈ ದೇವಭೂಮಿಯು ವಿವೇಕಾನಂದರನ್ನು ಮತ್ತೆ-ಮತ್ತೆ ತನ್ನ ಆಯಸ್ಕಾಂತಿಕ ಆಕರ್ಷಣೆಯಿಂದ ತನ್ನ ಮಡಿಲಿಗೆ ಬರಲು ವಿವಶರನ್ನಾಗಿ ಮಾಡುತ್ತಿತ್ತು, ಸಾಮಾನ್ಯ ಓದುಗರಿಗಂತೂ ಇದು ರುಚಿಸುವುದು, ಜೊತೆಗೆ ವಿವೇಕಾನಂದರ ಬಗ್ಗೆ ತಿಳಿಯುವ ಆಸಕ್ತಿಯುಳ್ಳ ಅಧ್ಯಯನಶೀಲರಿಗೂ ಕೂಡ ಹೆಚ್ಚು ಉಪಯುಕ್ತವಾಗಿದೆ.

ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ ಮತ್ತು ರಾಜನೀತಿ-ಈ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಭಾವ ಮತ್ತು ಗತಿ ಯಿಂದ ನಿರಂತರ ಒಡನಾಟವುಳ್ಳ ಸಾಹಿತ್ಯ ಸೇವೆ ಸಹ-ರಾಜನೇತಾ, ಡಾ. ರಮೇಶ್ ಸೋಖರಿಯಾಲ್ 'ನಿಶಂಕ್' ಬಹು-ಆಯಾಮಿ ವ್ಯಕ್ತಿತ್ವವುಳ್ಳವರು, ಅವರು ಬಹುವಿಧ ಕ್ಷೇತ್ರಗಳಲ್ಲಿ ಒಟೊಟ್ಟಿಗೆ ಕೆಲಸ ಮಾಡುವುದರ ಜೊತೆಗೆ ಸದಾ ಸೃಜನಶೀಲರು, ಅವರು ದೇವಭೂಮಿ ಉತ್ತರಾಖಂಡದವರು, ಅವರು ಪ್ರಸ್ತುತ ಕೃತಿ-ರಚನೆಗೆ ಸಹಜವಾಗಿಯೇ ಪಾತ್ರರು,

ಡಾ. ಮೋಖರಿಯಾಲ್‌ರವರಿಂದ ಈವರೆಗೆ ಕತೆ, ಕವಿತೆ, ಕಾದಂಬರಿ, ಬಾಲ ಸಾಹಿತ್ಯ ಯಾತ್ರಾ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಾಸ ಮುಂತಾದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಐವತ್ತಕ್ಕೂ ಮಿಗಿಲಾಗಿ ಕೃತಿಗಳು ಪ್ರಕಟವಾಗಿವೆ. ಈ ಕೃತಿಗಳು ಫ್ರೆಂಚ್, ರಶಿಯನ್, ಜರ್ಮನ್, ಇಂಗ್ಲೀಷ್, ನೇಪಾಳಿ ಮುಂತಾದ ಅನೇಕ ವಿದೇಶಿ ಭಾಷೆಗಳ ಜೊತೆಗೆ ಭಾರತದ ಸುಮಾರು ಭಾಷೆಗಳಲ್ಲಿ ಅನುವಾದಗೊಂಡಿವೆ. ದೇಶ-ವಿದೇಶಗಳ ಆನೇಕ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ತಮ್ಮ ಕೃತಿಗಳು ಸ್ಥಾನ ಪಡೆದಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಸಾಹಿತ್ಯವನ್ನು ಕುರಿತು ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ.

ಭಾರತದ ಮೂವರ ರಾಷ್ಟ್ರಪತಿಗಳಿಂದ ತಮ್ಮ ಉತ್ಕೃಷ್ಟ ಸಾಹಿತ್ಯ-ಸೃಜನಕ್ಕಾಗಿ ಸನ್ಮಾನಿತರಾಗಿದ್ದಾರೆ. ಭಾರತ ಗೌರವ, ರಾಷ್ಟ್ರ-ಗೌರವ, ಸಹಿತ್ಯ ಭಾರತಿ, ಸಾಹಿತ್ಯ ಗೌರವ ಮತ್ತು ಸಾಹಿತ್ಯ-ಚೇತನ ಸನ್ಮಾನದ ಜೊತೆಗೆ ಮಾರಿಷಸ್, ಉಗಾಂಡಾ, ದುಬೈ ಮತ್ತು ನೇಪಾಳ ರಾಷ್ಟ್ರಗಳಿಂದ ಆ ದೇಶದ ವಿಶೇಷ ಪ್ರತಿಷ್ಠಿತ ಸನ್ಮಾನದಿಂದ ವಿಭೂಷಿತರಾಗಿದ್ದಾರೆ.

ತಾವು ಉತ್ತರಾಖಂಡದ ಪೂರ್ವ ಮುಖ್ಯಮಂತ್ರಿ ಮತ್ತು ಲೋಕಸಭಾ ಸಂಸದರಾಗಿದ್ದು, ಭಾರತ ಸರ್ಕಾರ, ಶಿಕ್ಷಣ ಸಚಿವಾಲಯದ ಪೂರ್ವ ಮಂತ್ರಿಯಾಗಿ ಸುಶೋಭಿತರಾಗಿದ್ದಾರೆ.
View full details