Skip to product information
1 of 1

H. R. K

ಹಣ, ಬ್ಯಾಂಕೋದ್ಯಮ ಮತ್ತು ಸಾರ್ವಜನಿಕ ಅರ್ಥಶಾಸ್ತ್ರ

ಹಣ, ಬ್ಯಾಂಕೋದ್ಯಮ ಮತ್ತು ಸಾರ್ವಜನಿಕ ಅರ್ಥಶಾಸ್ತ್ರ

Publisher -

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಗ್ರಂಥಕರ್ತರಾದ ಶ್ರೀಯುತ ಎಚ್ಚಾರ್ಕೆಯವರು ಒಬ್ಬ ಜನಪ್ರಿಯ ಬರಹಗಾರರು. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊಸಬೀಡು ಗ್ರಾಮದವರು, ಮಲೆನಾಡಿನ ಸಾಹಿತ್ಯಕ ವಾತಾವರಣದಲ್ಲಿ ಬೆಳೆದ ಶ್ರೀಯುತರು ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ, ನ್ಯಾಷನಲ್ ಕಾಲೇಜ್ (ಸ್ವಾಯತ್ತ)ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು ಪ್ರತಿಭಾವಂತ ಬ್ಯಾಂಕ್ ವಿದ್ಯಾರ್ಥಿಯಾಗಿದ್ದರು. ವಿದ್ಯಾರ್ಥಿ ಸಮೂಹದಲ್ಲಿ ಒಬ್ಬ ಪ್ರಭಾವಿ ಮತ್ತು ಜನಪ್ರಿಯ ಅಧ್ಯಾಪಕರಾಗಿರುವ ಎಚ್ಚಾರ್ಕೆಯವರು ತಮ್ಮ Ph.D. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ನಾಡಿನ ಜನಪ್ರಿಯ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ಗಳಿಗೆ ಇವರು ಅರೆಕಾಲಿಕ ಮದಿಗಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಅಂಕಣಗಳಿಗೆ ಲೇಖನ ಬರೆಯುವ ಹವ್ಯಾಸವಿರುವ ಇವರ ವಿವಿಧ ವಿಚಾರಗಳ ಮೇಲಿನ ಹಲವಾಕು ಲೇಖನಗಳು ಪ್ರಕಟಗೊಂಡಿವೆ.

ಪತ್ರಿಕೋದ್ಯಮ, ಸಾಹಿತ್ಯ, ಕಲೆ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ವಿವಿದೆಡೆ ನಡೆಯುವ ಚರ್ಚೆಗಳು, ಕಮ್ಮಟಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಒಬ್ಬ ಪ್ರಭಾವಿ ಮತ್ತು ಪ್ರತಿಭಾವಂತ ಅಧ್ಯಾಪಕರಾಗಿ ಗಳಿಸಿದ ಸುಧೀರ್ಘ ಬೋಧನಾನುಭವವನ್ನು ಸಮರ್ಥವಾಗಿ ಬಳಸಿಕೊಂಡು ಅರ್ಥಶಾಸ್ತ್ರ ಸಾಮಾನ್ಯ ಜ್ಞಾನ ಮತ್ತು ಇತರ ವಿಚಾರಗಳ ಮೇಲೆ 50ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದ ಮೇಲಿನ ಇವರ ಕೃತಿಗಳು ಇಂದು ಕರ್ನಾಟಕದಾದ್ಯಂತ ಜನಪ್ರಿಯವಾಗಿವೆ. ಅರ್ಥ ಶಾಸ್ತ್ರವಿಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಇವರು ತಮ್ಮ ಕೃತಿಗಳ ಮೂಲಕ ಮನೆಮಾತಾಗಿದ್ದಾರೆ. ಇವರ ಸರಳ ಮತ್ತು ಸ್ಪುಟವಾದ ಬರವಣಿಗೆ ಶೈಲಿ ಮನಮುಟ್ಟುವಂತಹದು.

ಪ್ರಕಾಶಕರು-ಸಪ್ನ ಬುಕ್ ಹೌಸ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)