Shri Lakshmana Dombara
ಈ ಸ್ನೇಹ ಬಂಧನ
ಈ ಸ್ನೇಹ ಬಂಧನ
Publisher -
- Free Shipping Above ₹400
- Cash on Delivery (COD) Available*
Pages - 168
Type - Paperback
Couldn't load pickup availability
ಸಾಹಿತ್ಯ ರಚನೆ ಎಂಬುದು ಸೃಜನಶೀಲ ಕಲೆಯಾಗಿದೆ. ಎಲ್ಲರಲ್ಲೂ ಅದರ ಅಂಶ ಇದ್ದೇ ಇರುತ್ತದೆ. ಇದನ್ನು ಗುರುತಿಸಿ ಬೆಳೆಸುವ ಮೂಲಕ ಸಾಹಿತಿಗಳು ಪ್ರಬುದ್ಧರಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿ, ಸಮಾಜಕ್ಕೆ ಅನುಕೂಲವಾಗುವ ಲೇಖನಗಳನ್ನು ಜನಕ್ಕೆ ನೀಡುವ ಮೂಲಕ ಒಂದು ವಿಭಿನ್ನ ಪ್ರಯೋಗಾತ್ಮಕ ಕೃತಿ ರಚನೆಗಿಳಿದಿರುವ ಶ್ರೀಯುತ ಲಕ್ಷ್ಮಣ ಡೊಂಬರ ಅವರು ಅಭಿನಂದನಾರ್ಹರು.
ಈ 'ಸ್ನೇಹ ಬಂಧನ' ಎಂಬ ಕೃತಿಯಲ್ಲಿ ತಾಯಿ, ತಂದೆ, ಭಕ್ತಿ, ಸ್ನೇಹ, ಪ್ರೀತಿ, ಬಾಲ್ಯದ ನೆನಪುಗಳು, ಮಾರ್ಗದರ್ಶಕ ಶಿಕ್ಷಕರು, ಭಾರತ ದೇಶ, ಭಾಷೆ, ಹಬ್ಬಗಳು ಮೊದಲಾದವುಗಳ ಕುರಿತು ಸಮಗ್ರವಾಗಿ ಓದುಗರಿಗೆ ತಿಳಿಸಿಕೊಡುವ ಮೂಲಕ ಲೇಖಕರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಪಾರ ಸ್ನೇಹಿತರ ಬಳಗವನ್ನು ಹೊಂದಿರುವ ಇವರು, ಸ್ನೇಹಿತರ ಒತ್ತಾಯದ ಮೇರೆಗೆ ಕೃತಿ ರಚನೆಗಿಳಿದೆ ಎಂದು ನೆನಪಿಸಿಕೊಳ್ಳುತ್ತಾರೆ. ಅವರ ಈ ಕೃತಿಯ ಲೇಖನಗಳಿಗೆ ಬೆಲೆ ಕಟ್ಟಲಾಗದು; ಇಂಥ ಕೃತಿ ರಚನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿ ಹಿರಿಮೆ ಹೆಚ್ಚಿಸಿಕೊಂಡಿದ್ದಾರೆ. ಇಲ್ಲಿರುವ ಲೇಖನಗಳಲ್ಲಿನ ನವಿರಾದ ಭಾವ, ಸೂಕ್ಷ್ಮ ಸಂವೇದನೆ ಎಲ್ಲರಿಗೂ ಇಷ್ಟವಾಗುತ್ತದೆ.
ಇಲ್ಲಿರುವ ಲೇಖನಗಳ ಜೊತೆಜೊತೆಗೆ ಇಲ್ಲಿಯವರೆಗಿನ ಪ್ರಧಾನಿಗಳು, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಿವಿಧ ಚಲನಚಿತ್ರಗಳಲ್ಲಿ ತಂದೆ-ತಾಯಿ-ಗೆಳೆಯರ ಕುರಿತು ಇರುವ ಆಯ್ದ ಚಲನಚಿತ್ರ ಗೀತೆಗಳು, ಪ್ರಮುಖ ಭಾವಗೀತೆಗಳು, ಜಾನಪದ ಗೀತೆಗಳು, ಪ್ರಸಿದ್ಧ ಕನ್ನಡ ಮತ್ತು ಹಿಂದಿ ಹಾಡುಗಳು, ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ವಿಶೇಷತೆಗಳು ಹಾಗೂ ಕನ್ನಡದ ಮೊದಲಿಗರು—ಹೀಗೆ ಹತ್ತು ಹಲವು ಆಯಾಮಗಳ ಕುರಿತು ಬೆಳಕು ಚೆಲ್ಲಿರುವುದು ಈ ಪುಸ್ತಕದ ಪ್ರಮುಖ ಅಂಶಗಳಾಗಿವೆ. ಇದರ ಜೊತೆಗೆ ಯೂಟ್ಯೂಬ್ನಲ್ಲಿ ಲಭ್ಯವಿರುವ ವಿಶೇಷ ಹಾಡುಗಳನ್ನು ಸನ್ನಿವೇಶ ಸಮೇತ ದಾಖಲಿಸಿದ್ದಾರೆ.
ಮೂಲತಃ ಗೋಕಾಕ ತಾಲೂಕಿನ ಖನಗಾಂವಿ ಗ್ರಾಮದವರಾದ ಇವರು ಸದ್ಯ ನೇಸರಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀ ಲಕ್ಷ್ಮಣ ಡೊಂಬರ ಇವರಲ್ಲಿ ಬರೆಯುವ ತುಡಿತವಿದೆ. ಜನರಿಗೆ ಆಪ್ತವಾಗುವ ವಿಷಯಗಳನ್ನು ಆಯ್ದುಕೊಂಡು ವಿಷಯದ ಆಳಕ್ಕೆ ಹೋಗಿ ಬರೆಯುವ ಕಲೆ ಇವರಿಗೆ ಸಿದ್ಧಿಸಿದೆ. ಅವರ ಕೈಬರಹದ ಅಕ್ಷರಗಳು ಮುತ್ತಿನಂತೆ ಪೋಣಿಸಿದ ಹೊಳಪಿನಿಂದ ಕೂಡಿದ್ದು, ಅಕ್ಷರಗಳಂತೆ ಅವರ ಸಾಹಿತ್ಯವೂ ಮೇರು ಸಾಲಿನಲ್ಲಿ ನಿಲ್ಲುವಂತಿದೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗಗಳ ಮೂಲಕ ಕೃತಿ ರಚನೆಗಿಳಿದಿರುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಕೃತಿ ಹೆಚ್ಚೆಚ್ಚು ಜನಕ್ಕೆ ತಲುಪಿ, ಅದರಲ್ಲಿರುವ ಅಂಶಗಳು ಎಲ್ಲರಿಗೂ ರುಚಿ ನೀಡುವಂತಾಗಲಿ.
ಅವರ ಈ ಚೊಚ್ಚಲ ಕೃತಿ ನಾಡಿನೆಲ್ಲೆಡೆ ಎಲ್ಲರ ಮನಕ್ಕೂ ತಲುಪಿ ಮೆಚ್ಚುಗೆಗೆ ಪಾತ್ರವಾಗಲೆಂದು ಹಾರೈಸುತ್ತೇನೆ. ಅವರಿಂದ ಇನ್ನಷ್ಟು ಮೌಲಿಕ ಕೃತಿಗಳು ಮುಂದಿನ ದಿನಗಳಲ್ಲಿ ಹೊರಬಂದು ಸಾಹಿತ್ಯ ಲೋಕದಲ್ಲಿ ಹೆಮ್ಮರವಾಗಿ ಬೆಳೆಯಲೆಂದು ಶುಭ ಹಾರೈಸುತ್ತೇನೆ.
— ಶ್ರೀ ಸಿ.ವಾಯ್. ಮೆಣಸಿನಕಾಯಿ ಹಿರಿಯ ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಬೈಲಹೊಂಗಲ ತಾಲೂಕು.
Share

Subscribe to our emails
Subscribe to our mailing list for insider news, product launches, and more.