Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 184
Type - Paperback
ನಮಸ್ಕಾರ-
ಅತ್ಯಾಚಾರದಂಥಾ ಒಂದು ಘಟನೆ ನಡೆದಾಗ ಅದನ್ನು ನಾನಾ ದೃಷ್ಟಿಕೋನಗಳಿಂದ ನೋಡುವವರಿರುತ್ತಾರೆ. ಅದಕ್ಕೆ ಸಂಬಂಧಪಟ್ಟವರು ಅನುಭವಿಸುವ ನೋವು ಸಂಕಟಗಳನ್ನು ಬೇರೆಯವರು ಕಲ್ಪಿಸಬಹುದಾದರೂ ಎಂದಿಗೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾರರು. ಅವರ ನೋವು, ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರ ಹಾಗೂ ಅತ್ಯಾಚಾರಿಗಳ ಹಿಂದಿನ ಬದುಕು ಮತ್ತು ಮನೋಭಾವಗಳ ಬಗ್ಗೆ ತಿಳಿಸುವ ಪ್ರಯತ್ನವೇ ಈ ಕೃತಿ.
ಪ್ರತಿಯೊಂದು ವಿಕೃತ ಮನಸ್ಸುಗಳ ಹಿಂದೆ ಒಂದೊಂದು ಕತೆಯೂ ಅದಕ್ಕೊಂದು ಕಾರಣವೂ, ಸಮಾಜದ ಕೊಡುಗೆಯೂ ಇರುತ್ತದೆ. ಆದರೆ ದುಷ್ಕೃತ್ಯ ಎಸಗಿದವರಿಗೆ ತಮ್ಮಿಂದ ಅನ್ಯಾಯಕ್ಕೊಳಗಾದವರ ನೋವಿನ ಕಲ್ಪನೆ ಎಳ್ಳಷ್ಟೂ ಇರುವುದಿಲ್ಲ. ಬದಲಿಗೆ ವಿಕೃತಾನಂದ ಇರುತ್ತದೆ.
ದುರದೃಷ್ಟವೆಂದರೆ ಅಂತಹಾ ದುಷ್ಟರಿಂದ ನೋವು ಅನುಭವಿಸುವವರು ಮಾತ್ರ ಮುಗ್ಧರೂ ಬಡವರೂ ಆಗಿರುತ್ತಾರೆ. ಏಕೆಂದರೆ ಬಲಿಷ್ಠರ ತಂಟೆಗೆ ದುಷ್ಟರು ಹೋಗುವುದೇ ಇಲ್ಲ!
ಇದು 'ಮನೋವೈಜ್ಞಾನಿಕ ಕಾದಂಬರಿ ಸರಣಿ'ಯ ನಾಲ್ಕನೆಯ ಕೃತಿ.
-ತಮ್ಮೆಲ್ಲರ ಸಹಕಾರಕ್ಕೆ ಕೃತಜ್ಞತೆಗಳೊಂದಿಗೆ ಗಿರಿಮನೆ ಶ್ಯಾಮರಾವ್