Skip to product information
1 of 2

BR Deepak,Translated By DN Shreenath

ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 144

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನಮ್ಮ ಇಚ್ಛೆಗಳ ಮೇಲೆ ಹಿಡಿತವನ್ನು ಸಾಧಿಸುವುದು ಮತ್ತು ಆಚರಣೆಗಳನ್ನು ಶಿಷ್ಟಾಚಾರದ ಪರಿಧಿಯೊಳಗೆ ತರುವುದೇ ಸದಾಚಾರ. ಆಚರಣೆಗಳು ಶಿಷ್ಟಾಚಾರದ ಪರಿಧಿಯೊಳಗೆ ಬಂದಾಗ, ಜಗತ್ತಿನ ಜನ ನೀವು ಸದಾಚಾರಿಗಳಾದ ಬಗ್ಗೆ ಗುಣಗಾನ ಮಾಡುತ್ತಾರೆ. ಸದಾಚಾರವನ್ನು ಕಾರ್ಯರೂಪಕ್ಕೆ ತರಲು ನೀವು ಸ್ವತಃ ಹೊಣೆಗಾರರಾಗುತ್ತೀರಿ; ಇನ್ನೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವೇ?

ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ನೋಡಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಕೇಳಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಹೇಳಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಮಾಡಬೇಡ.

ರಸ್ತೆಯಲ್ಲಿ ಹಾದುಹೋಗುವ ಮೂವರಲ್ಲಿ ಒಬ್ಬರು ನನ್ನ ಶಿಕ್ಷಕರಾಗಬಹುದು. ಒಂದು ವೇಳೆ ಅವರಲ್ಲಿ ಒಳಿತುಗಳಿದ್ದರೆ ಒಪ್ಪಿಕೋ; ಒಂದು ವೇಳೆ ಕೆಡುಕುಗಳಿದ್ದರೆ, ನಿನ್ನಲ್ಲಿ ಅಂತಹವುಗಳಿದ್ದರೆ ಸುಧಾರಣೆಯನ್ನು ಮಾಡು.

ಸಾಕಷ್ಟು ಆಹಾರ, ಸಾಕಷ್ಟು ಆಯುಧಗಳು ಮತ್ತು ಜನರ ವಿಶ್ವಾಸ — ಇವು ರಾಜ್ಯದ ಆಡಳಿತಕ್ಕೆ ಅತಿ ಅಗತ್ಯ.

ತಾಯಿ-ತಂದೆಯ ನಿಧನದ ನಂತರ ಅವರ ಸಂಸ್ಕಾರವನ್ನು ಉತ್ತಮ ರೀತಿಯಲ್ಲಿ ಮಾಡಬೇಕು. ಪೂರ್ವಜರನ್ನು ಸ್ಮರಿಸುವುದರಿಂದಲೇ ಸಮಾಜ ಮತ್ತು ಜನರಲ್ಲಿ ಪ್ರಾಮಾಣಿಕತೆ ಮತ್ತು ಉತ್ತಮ ಗುಣಗಳು ವೃದ್ಧಿಸುತ್ತವೆ.

ಜ್ಞಾನವರ್ಧನೆ ಹೇಗಿರಬೇಕೆಂದರೆ, ಅದರಿಂದ ನಿರಂತರವಾಗಿ ಅತೃಪ್ತಿಯಾಗಬೇಕು (ಇನ್ನೂ ಕಲಿಯಬೇಕೆಂಬ ಹಂಬಲವಿರಬೇಕು); ಜ್ಞಾನವನ್ನು ಪಡೆದ ನಂತರ ಅದನ್ನು ಕಳೆದುಕೊಂಡೇವು ಎಂಬ ಚಿಂತೆಯೂ ಇರಬೇಕು.

- ಇದೇ ಕೃತಿಯಿಂದ ಉದ್ಧೃತ

View full details