Skip to product information
1 of 1

Translated by Chandrakanta Pokale

ಛತ್ರಪತಿ ಶಿವಾಜಿ

ಛತ್ರಪತಿ ಶಿವಾಜಿ

Publisher - ಐಬಿಹೆಚ್ ಪ್ರಕಾಶನ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಛತ್ರಪತಿ ಶಿವಾಜಿ ಮಹಾರಾಜರ ಸಾಧಾರ, ಸುದೀರ್ಘವಾದ ಚರಿತ್ರೆಯನ್ನು ಬರೆಯುವಾಗ ಕೃಷ್ಣರಾವ ಅರ್ಜುನ ಕೇಳೂಸ್ಕರ ಅವರು ಚಾರಿತ್ರಿಕ ಪತ್ರವನ್ನು ಆಧರಿಸಿ ವಿವೇಕತನದಿಂದ ಅಭಿವ್ಯಕ್ತಿ ಮಾಡಿದ್ದಾರೆ. ಭಾರತ ಭೂಮಿಯನ್ನು ಯವನರ ಪ್ರಭುತ್ವದಿಂದ ಮುಕ್ತಗೊಳಿಸುವ ಸತ್ ಸಂಕಲ್ಪವನ್ನು ಮಾಡಿದ ಈ ಮಹಾಪ್ರತಾಪಶಾಲಿ ವೀರನು ಎಲ್ಲ ಜಾತಿ-ಧರ್ಮಗಳ ಸಹಾಯದಿಂದ, ಮುತ್ಸದ್ದಿತನ ಮತ್ತು ಗೆರಿಲ್ಲಾ ಯುದ್ಧದ ಕೌಶಲ್ಯದಿಂದ ಹಿಂದೂ ಸ್ವರಾಜ್ಯವನ್ನು ಕಟ್ಟಿದರು. ಕಲ್ಪಕ ಆಡಳಿತದ ಆಧಾರದಿಂದ ಜನಸಾಮಾನ್ಯರಿಗೂ ಮಹತ್ವ ನೀಡುತ್ತ, ಹಾಗೂ ಗುಣವಂತರನ್ನೂ ಗೌರವಿಸುತ್ತ ಶತ್ರುಗಳನ್ನು ಸದೆ ಬಡಿದರು. ಮರಾಠರ ಹೆಸರನ್ನು ಜಾಗತಿಕ ಚರಿತ್ರೆಯಲ್ಲಿ ಅಜರಾಮರಗೊಳಿಸಿದ ಛತ್ರಪತಿ ಶಿವಾಜಿಯ ಈ ಚರಿತ್ರೆಯು ಒಂದು ಉತ್ತಮ ಉದಾಹರಣೆಯಾಗಿದೆ.

ಕೇಳೂಸ್ಕರರ ಈ ಗ್ರಂಥವೆಂದರೆ ಕೇವಲ ಶಿವಾಜಿ ಮಹಾರಾಜರ ಚಾರಿತ್ರಿಕ ಗ್ರಂಥವಾಗಿರದೇ, ಅದರಲ್ಲಿ ಇತಿಹಾಸ, ಭೂಗೋಲ, ಸಮಾಜ ವ್ಯವಸ್ಥೆ, ರಾಜ್ಯವ್ಯವಸ್ಥೆ, ಆರ್ಥಕಾರಣ, ನೇತೃತ್ವ, ಚಾರಿತ್ರ್ಯ, ಮಾನವೀಯ ಸಂಬಂಧ ಹೀಗೆ ಹಲವು ವಿಷಯಗಳ ತಪಶೀಲು ಇದೆ. ಈ ಯುಗಪುರುಷ ಮಹಾರಾಷ್ಟ್ರ ಪ್ರದೇಶದಲ್ಲಿ ಅವತರಿಸಿದ್ದೇ ಇಲ್ಲಿಯ ಪ್ರಜೆಗಳ ಭಾಗ್ಯ.

ಇಂಥ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬರೂ ಛತ್ರಪತಿಯ ವ್ಯೂಹನೀತಿಯನ್ನು ಅಳವಡಿಸಿಕೊಳ್ಳುವುದು ಕ್ರಮಪ್ರಾಪ್ತವಾಗಿದೆ.

ಕೇಳೂಸ್ಕರರು ಈ ಶತಮಾನದ ಶ್ರೇಷ್ಠ ಚರಿತ್ರೆಕಾರರು, ಶಿವಾಜಿ ಮಹಾರಾಜರ ಬಗೆಗೆ ಸವಿಸ್ತಾರ ಹಾಗೂ ಸಮಗ್ರವಾಗಿ ಬರೆದ ಮೊದಲ ಚರಿತೆಯಿದು. ಮಾಮಾ ಪರಮಾನಂದ, ನ್ಯಾ. ರಾನಡೆ, ಮಹಾರಾಜ ಸಯಾಜಿರಾವ - ಇವರು ಕೇಳೂಸ್ಕರರ ಬರವಣಿಗೆ ಹಾಗೂ ಆಲೋಚನಾ ಕ್ರಮವನ್ನು ಪ್ರಶಂಸೆ ಮಾಡಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)