Skip to product information
1 of 1

Translated by Chandrakanta Pokale

ಛತ್ರಪತಿ ಶಿವಾಜಿ

ಛತ್ರಪತಿ ಶಿವಾಜಿ

Publisher - ಐಬಿಹೆಚ್ ಪ್ರಕಾಶನ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 346

Type -

Gift Wrap
Gift Wrap Rs. 15.00
Gift Box
Gift Box Rs. 225.00
ಛತ್ರಪತಿ ಶಿವಾಜಿ ಮಹಾರಾಜರ ಸಾಧಾರ, ಸುದೀರ್ಘವಾದ ಚರಿತ್ರೆಯನ್ನು ಬರೆಯುವಾಗ ಕೃಷ್ಣರಾವ ಅರ್ಜುನ ಕೇಳೂಸ್ಕರ ಅವರು ಚಾರಿತ್ರಿಕ ಪತ್ರವನ್ನು ಆಧರಿಸಿ ವಿವೇಕತನದಿಂದ ಅಭಿವ್ಯಕ್ತಿ ಮಾಡಿದ್ದಾರೆ. ಭಾರತ ಭೂಮಿಯನ್ನು ಯವನರ ಪ್ರಭುತ್ವದಿಂದ ಮುಕ್ತಗೊಳಿಸುವ ಸತ್ ಸಂಕಲ್ಪವನ್ನು ಮಾಡಿದ ಈ ಮಹಾಪ್ರತಾಪಶಾಲಿ ವೀರನು ಎಲ್ಲ ಜಾತಿ-ಧರ್ಮಗಳ ಸಹಾಯದಿಂದ, ಮುತ್ಸದ್ದಿತನ ಮತ್ತು ಗೆರಿಲ್ಲಾ ಯುದ್ಧದ ಕೌಶಲ್ಯದಿಂದ ಹಿಂದೂ ಸ್ವರಾಜ್ಯವನ್ನು ಕಟ್ಟಿದರು. ಕಲ್ಪಕ ಆಡಳಿತದ ಆಧಾರದಿಂದ ಜನಸಾಮಾನ್ಯರಿಗೂ ಮಹತ್ವ ನೀಡುತ್ತ, ಹಾಗೂ ಗುಣವಂತರನ್ನೂ ಗೌರವಿಸುತ್ತ ಶತ್ರುಗಳನ್ನು ಸದೆ ಬಡಿದರು. ಮರಾಠರ ಹೆಸರನ್ನು ಜಾಗತಿಕ ಚರಿತ್ರೆಯಲ್ಲಿ ಅಜರಾಮರಗೊಳಿಸಿದ ಛತ್ರಪತಿ ಶಿವಾಜಿಯ ಈ ಚರಿತ್ರೆಯು ಒಂದು ಉತ್ತಮ ಉದಾಹರಣೆಯಾಗಿದೆ.

ಕೇಳೂಸ್ಕರರ ಈ ಗ್ರಂಥವೆಂದರೆ ಕೇವಲ ಶಿವಾಜಿ ಮಹಾರಾಜರ ಚಾರಿತ್ರಿಕ ಗ್ರಂಥವಾಗಿರದೇ, ಅದರಲ್ಲಿ ಇತಿಹಾಸ, ಭೂಗೋಲ, ಸಮಾಜ ವ್ಯವಸ್ಥೆ, ರಾಜ್ಯವ್ಯವಸ್ಥೆ, ಆರ್ಥಕಾರಣ, ನೇತೃತ್ವ, ಚಾರಿತ್ರ್ಯ, ಮಾನವೀಯ ಸಂಬಂಧ ಹೀಗೆ ಹಲವು ವಿಷಯಗಳ ತಪಶೀಲು ಇದೆ. ಈ ಯುಗಪುರುಷ ಮಹಾರಾಷ್ಟ್ರ ಪ್ರದೇಶದಲ್ಲಿ ಅವತರಿಸಿದ್ದೇ ಇಲ್ಲಿಯ ಪ್ರಜೆಗಳ ಭಾಗ್ಯ.

ಇಂಥ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬರೂ ಛತ್ರಪತಿಯ ವ್ಯೂಹನೀತಿಯನ್ನು ಅಳವಡಿಸಿಕೊಳ್ಳುವುದು ಕ್ರಮಪ್ರಾಪ್ತವಾಗಿದೆ.

ಕೇಳೂಸ್ಕರರು ಈ ಶತಮಾನದ ಶ್ರೇಷ್ಠ ಚರಿತ್ರೆಕಾರರು, ಶಿವಾಜಿ ಮಹಾರಾಜರ ಬಗೆಗೆ ಸವಿಸ್ತಾರ ಹಾಗೂ ಸಮಗ್ರವಾಗಿ ಬರೆದ ಮೊದಲ ಚರಿತೆಯಿದು. ಮಾಮಾ ಪರಮಾನಂದ, ನ್ಯಾ. ರಾನಡೆ, ಮಹಾರಾಜ ಸಯಾಜಿರಾವ - ಇವರು ಕೇಳೂಸ್ಕರರ ಬರವಣಿಗೆ ಹಾಗೂ ಆಲೋಚನಾ ಕ್ರಮವನ್ನು ಪ್ರಶಂಸೆ ಮಾಡಿದ್ದಾರೆ.
View full details

Talk about your brand

Share information about your brand with your customers. Describe a product, make announcements, or welcome customers to your store.