Skip to product information
1 of 1

Translated by D. V. Guruprasad

ಚಾಣಕ್ಯನ ನಾಯಕತ್ವ ತಂತ್ರದ 7 ರಹಸ್ಯಗಳು

ಚಾಣಕ್ಯನ ನಾಯಕತ್ವ ತಂತ್ರದ 7 ರಹಸ್ಯಗಳು

Publisher - ಜೈಕೋ ಪಬ್ಲಿಕೇಷನ್ಸ್

Regular price Rs. 235.00
Regular price Rs. 235.00 Sale price Rs. 235.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕ್ರಿಪೂ ನಾಲ್ಕನೆಯ ಶತಮಾನದಲ್ಲಿ ಭಾರತದಲ್ಲಿ ಜೀವಿಸುತ್ತಿದ್ದ ಚಾಣಕ್ಯ ಅತಿ ಮೇಧಾವಿಯಾಗಿದ್ದ ಒಬ್ಬ ನಾಯಕತ್ವದ ಗುರು. ಆತನ ಬೋಧನೆಗಳ ಬಂಢಾರವಾಗಿರುವ ಗ್ರಂಥವೇ ಅರ್ಥಶಾಸ್ತ್ರ, ಈ ಗ್ರಂಥವು ಆದರ್ಶ ನಾಯಕತ್ವದ ಅಡಿಪಾಯವಾಗಿರುವ ಉತ್ತಮ ಆಡಳಿತದ ಬಗ್ಗೆ ರಚಿತವಾಗಿದೆ.

ಅರ್ಥಶಾಸ್ತ್ರದಲ್ಲಿನ ಆದರ್ಶ ರಾಷ್ಟ್ರದ ಪರಿಕಲ್ಪನೆಯಲ್ಲಿ ಸಪ್ತಾಂಗ ಎಂದು ಕರೆಯಲ್ಪಡುವ ಏಳು ಸ್ಥಂಭಗಳಿವೆ. ಅವೆಂದರೆ ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ದಂಡ, ಹಾಗೂ ಮಿತ್ರ, ಶತಮಾನಗಳ ಕಾಲ ಭಾರತದ ಆಡಳಿತವನ್ನು ನಡೆಸಿರುವವರು ಯಶಸ್ವೀ ಸರ್ಕಾರದ ನಮೂನೆಯೆಂದು ಈ ಪರಿಕಲ್ಪನೆಯನ್ನು ಬಳಸಿರುತ್ತಾರೆ.

ಹೊಸ ದಾರಿದೀಪವನ್ನು ತೋರಿಸುವ ಚಾಣಕ್ಯನ ನಾಯಕತ್ವ ತಂತ್ರದ 7 ರಹಸ್ಯಗಳು ಪುಸ್ತಕದಲ್ಲಿ ಲೇಖಕ ರಾಧಾಕೃಷ್ಣನ್ ಪಿಳ್ಳೆ, ಜಾಣಕ್ಯನ ಸಪ್ತಾಂಗವನ್ನು ಮಹಾರಾಷ್ಟ್ರ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ಶಿವಾನ೦ದನ್ ಇವರ ನಿಜ ಜೀವನದ ಉದಾಹರಣೆಗಳೊಂದಿಗೆ ಅನಾವರಣಗೊಳಿಸುತ್ತಾರೆ. ಉತ್ತಮ ಆಡಳಿತಗಾರರಾದ ಶಿವಾನಂದನ್ ಯಶಸ್ವೀ ಹಾಗೂ ಪ್ರಭಾವೀ ನಾಯಕನಾಗಲು ಮಾಡಬೇಕಾದ್ದೇನು ಎನ್ನುವ ಸುಳಿವುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಚಾಣಕ್ಯನ ನಾಯಕತ್ವ ತಂತ್ರದ 7 ರಹಸ್ಯಗಳು ಕೃತಿಯಲ್ಲಿ ಸಿದ್ಧಾಂತವು ಅಭ್ಯಾಸವನ್ನೂ, ಶೈಕ್ಷಣಿಕ ಸಂಶೋಧನೆಯು ಪೊಲೀಸ್ ಮೇಲುಸ್ತುವಾರಿಯ ಅನುಭವವನ್ನೂ ಸೇರುತ್ತಾ ಪುರಾತನ ಸೂತ್ರವೊಂದು ಪ್ರಸ್ತುತ ಯಶೋಗಾಥೆಯಲ್ಲಿ ಹೊರಹೊಮ್ಮುತ್ತದೆ. ಪಿಳ್ಳೈ ಹಾಗೂ ಶಿವಾನಂದನ್ ಒಟ್ಟಾರೆಯಾಗಿ ಚಾಣಕ್ಯನ ಮಾದರಿಗೆ ಜೀವ ತುಂಬಿದ್ದಾರೆ.

ರಾಷ್ಟ್ರವೊಂದನ್ನು ಯಶಸ್ವಿಯಾಗಿ ನಡೆಸುವ ಕಾರ್ಯದಲ್ಲಿ ತೊಡಗಿರುವ ಯಾರೇ ಆಗಲೀ ನಾಯಕತ್ವದ ಏಳು ರಹಸ್ಯಗಳನ್ನು ಬಳಸಬಹುದಾಗಿದೆ. ಈ ರಹಸ್ಯಗಳನ್ನು ನಿಮ್ಮ ಜೀವನದಲ್ಲಿ ಆಳವಡಿಸಿಕೊಂಡು ಚಾಣಕ್ಯನ ಲೋಕಜ್ಞಾನವು ನಿಮ್ಮನ್ನು ಒಬ್ಬ ಆದರ್ಶ ನಾಯಕನನ್ನಾಗಿ ಹೇಗೆ ಪರಿವರ್ತಿಸುತ್ತದೆ ಎನ್ನುವುದನ್ನು ಅನುಭವಿಸಿ ನೋಡಿ,
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)