Skip to product information
1 of 2

H L Guruprasad

ಚಾರಣ ಸವಿ ಹೂರಣ

ಚಾರಣ ಸವಿ ಹೂರಣ

Publisher - ಸ್ನೇಹ ಬುಕ್ ಹೌಸ್

Regular price Rs. 395.00
Regular price Rs. 395.00 Sale price Rs. 395.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 328

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇದೊಂದು ಜೋಕು 1953. ಮೇ 29 ರಂದು ಯಶಸ್ವಿಯಾಗಿ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಹತ್ತಿ ಉಘೇ ಎಂದವರು ಎಡ್ ಮಂಡ್ ಹಿಲರಿ ಮತ್ತು ತೇನ್ ಸಿಂಗ್ ನಾರ್ಕೆ, ಅವರಿಗೊಂದು ಧ್ವನಿ ಕೇಳಿ ಬಂತು. 'ಗರಂ ಚಾಯ್.. ಗರಂ ಚಾಯ್ ' ಕಾಕ ಹೋಟೆಲ್ ಹುಡುಗನೊಬ್ಬ ಅಲ್ಲಿ ಟೀ ಮಾರುತ್ತಿದ್ದನಂತೆ !

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಅತಿ ಎತ್ತರದಲ್ಲಿ ಇರುವ ಅನೇಕ ದೇವಾಲಯಗಳನ್ನು ನೋಡಿದಾಗ ಈ ಘಟನೆ ನೆನಪಾಗುತ್ತದೆ ನಾವು ಬೆಟ್ಟ ಹತ್ತಿ ದೇವರನ್ನು ನೋಡುವುದೇ ಕಷ್ಟ ಇರುವಾಗ ಗುಡಿಗಳನ್ನು ಬಹು ಹಿಂದೆ ನಿರ್ಮಿಸಿದವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಹೆಚ್ .ಎಲ್. ಗುರುಪ್ರಸಾದ್ ಅವರು ಚರಣವನ್ನು ಚಾರಣಕ್ಕೆ ಬಳಸಿಕೊಂಡು ಆ ಅನುಭವಗಳ ಹೂರಣ ನಮಗೆ ನೀಡಿದ್ದಾರೆ. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಮೇಲೆ ಸಾರ್ಕುಗಳಲ್ಲಿ ವಾಕಿಂಗ್ ಮಾಡುವುದೇ ಕಷ್ಟಕರ ಗುಂಡಿ ಬಿದ್ದ ರಸ್ತೆಗಳಲ್ಲಿ ದಂಡಿಯಾಗಿ ಹಾರು ನೆಲವಿರುವಾಗ ನಡೆದಾಡುವುದೂ ಕಷ್ಟ ಆದರೆ ಗುರುಪ್ರಸಾದ್ ನಿವೃತ್ತಿಯಾದ ಮೇಲೆ ನೆಲದ ಮೇಲೆ ನಡೆಯುವುದಕ್ಕಿಂತ ಪರ್ವತ ಶ್ರೇಣಿಗಳಲ್ಲಿ ನಡೆದಿರುವುದೇ ಹೆಚ್ಚು. ಹಿಮಾಲಯ ಶ್ರೇಣಿಯಲ್ಲಿ ನಾವು ಮಾಡುವ ಧಾರ್ಮಿಕ ಚಾರಣಕ್ಕಿಂತ ಮಿಗಿಲಾದ ಚಾರಣ ಈ ಜಗತ್ತಿನಲ್ಲೇ ಬೇರಾವುದೂ ಇಲ್ಲ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.

ಚಾರಣವು ಆತ್ಮಸ್ಥೆರ್ಯ ನೀಡುತ್ತದೆ, ನಾಯಕತ್ವ ಬೆಳೆಸುತ್ತದೆ. ಪ್ರಕೃತಿಯ ಚೆಲುವನ್ನು ಹತ್ತಿರದಿಂದ ಸವಿಯಲು ಅವಕಾಶ ನೀಡುತ್ತದೆ. ಎತ್ತರದ ಪರ್ವತದ ಮೇಲಿರುವ ದೇವಾಲಯ ತಲುಪಿ ಅಪರಿಮಿತ ಆನಂದದಿಂದ ದೇವರಿಗೆ ಕೈ ಮುಗಿದಾಗ ಕಾಲಿನ ದಣಿವು ಮಾಯವಾಗುತ್ತದೆ. ಅಲ್ಲಿಗೆ ಕರೆತಂದ ಕಾಲುಗಳನ್ನೇ ಮರೆಯುತ್ತೇವೆ. ಇದು ಚಾರಣಲೋಕದ ವಿಸ್ಮಯ ಇಲ್ಲಿನ ಪ್ರತಿ ಘಟನೆಯೂ ರೋಮಾಂಚನಕಾರಿ, ಓದುಗರಿಗೆ  ಇದು ಚಾರಣ ಗೈಡ್ 

ಎಂಎಸ್ ನರಸಿಂಹಮೂರ್ತಿ

ಹಾಸ್ಯ ಸಾಹಿತಿಗಳು, ಆನಂದ ಸಂಸ್ಕೃತಿಯ ಹರಿಕಾರರು

View full details