B. Janardhan Bhat
Publisher - ಅಂಕಿತ ಪುಸ್ತಕ
- Free Shipping Above ₹200
- Cash on Delivery (COD) Available
Pages - 272
Type - Paperback
ಡಾ. ಬಿ. ಜನಾರ್ದನ ಭಟ್' ವಿರಚಿತ ನೂತನ ಕಾದಂಬರಿ 'ಬೂಬರಾಜ ಸಾಮ್ರಾಜ್ಯ' ಇತಿಹಾಸ ಎಂಬ ನಮ್ಮ ನಿನ್ನೆ ಮೊನ್ನೆಗಳನ್ನು ವರ್ತಮಾನ ದೊಂದಿಗೆ ತಗುಳ್ಚಿ ತಾಳೆಹಾಕಿ ನೋಡುವ ಒಂದು ಸಫಲ ಯತ್ನವಾಗಿದೆ. ಪ್ರಾಚೀನ ತುಳುನಾಡಿನ ಸಾಂಸ್ಕೃತಿಕ ಇತಿಹಾಸದ ಬೇರು ಬಿಳಲು, ಹಾಗೆಯೇ ಪ್ರಸ್ತುತ ಸಮಾಜದ ವಿದ್ಯಮಾನಗಳ ಕಥಾನಕ, ಮನುಷ್ಯನ ಸ್ವಭಾವದ ನಿರಂತರ ಸತ್ಯದ ಶೋಧಗಳೆಲ್ಲ ಈ ಕಾದಂಬರಿಯಲ್ಲಿ ಮನಂಬುಗುವಂತೆ ಮೈಪಡೆದಿರುವುದು ಗಮನೀಯ ಅಂಶ. ಕರಾವಳಿ ಪರಿಸರದ ಜೀವನಕ್ರಮ, ಸ್ಥಳೀಯ ಅಸ್ಮಿತೆಯ ಶೋಧ, ಆಧುನಿಕ ಮನುಷ್ಯನ ಆಟಾಟೋಪಗಳೆಲ್ಲ ಇಲ್ಲಿನ ಕಾದಂಬರಿಯ ನೆಯ್ಗೆಯಲ್ಲಿ ಕಲಾತ್ಮಕವಾಗಿ ದಾಖಲಾಗಿರುವುದು ಮೆಚ್ಚತಕ್ಕ ಸಂಗತಿ. ಭೂತ ವರ್ತಮಾನ ಕಾದಂಬರಿಯ ಕಥನ ಬಹು ರೋಚಕವಾಗಿದೆ. ಈ ದೃಷ್ಟಿಯಿಂದ “ಬೂಬರಾಜ ಸಾಮ್ರಾಜ್ಯ' ವಿನೂತನ ಕೃತಿಯಾಗಿ ಗಮನ ಸೆಳೆಯುತ್ತದೆ.
-ಡಾ. ಜಿ.ಎನ್. ಉಪಾಧ್ಯ