Shrikrishna Aalana
Publisher -
Regular price
Rs. 350.00
Regular price
Sale price
Rs. 350.00
Unit price
per
- Free Shipping Above ₹200
- Cash on Delivery (COD) Available
Pages -
Type -
ಕನ್ನಡ ಕಾವ್ಯ, ಸಣ್ಣಕಥೆ ಮತ್ತು ಕಾದಂಬರಿ ಪ್ರಪಂಚದಲ್ಲಿ ಈಗಾಗಲೇ ಮಹತ್ವದ ಹೆಸರಾಗಿರುವ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಭುಜಂಗಯ್ಯನ ದಶಾವತಾರಗಳು, ಕಾಡು, ಕಾದಂಬರಿಗಳಂತೆ ಈ ಕೃತಿಯು ಲೇಖಕರ ಬಾಲ್ಯದ ಅನುಭವಗಳ ದಟ್ಟ ಸಂವೇದನೆ ಹಾಗೂ ಪ್ರಕೃತಿಯ ಅತೀ ಸೂಕ್ಷ್ಮ ವಿವರಗಳೊಡನೆ ಒಡಮೂಡಿದ ವಿಶಿಷ್ಟ ಕೃತಿಯಾಗಿದೆ. ಹಳ್ಳಿಗಾಡಿನ ಸಾಮಾನ್ಯನೊಬ್ಬನ ಬದುಕನ್ನು ಬಗೆಯುತ್ತಾ ಬಗೆಯುತ್ತಾ ಹೋಗುವ ರೀತಿ ಅಸಾಧಾರಣವೆನಿಸಿ, ಅಪೂರ್ವ ಅನುಭವವನ್ನುಂಟುಮಾಡುತ್ತದೆ. ಆಲನಹಳ್ಳಿಯವರ ಇದುವರೆಗಿನ ಸಾಧನೆಯಲ್ಲಿ ಈ ಕೃತಿ ಬಹುದೊಡ್ಡ ಪ್ರಯತ್ನವಷ್ಟೇ ಅಲ್ಲ, ಅವರ ಜೀವಂತ ಸೃಜನಶಕ್ತಿಗೆ ಸಾಕ್ಷಿ ಕೂಡಾ. ಕನ್ನಡದ ಹಿರಿಯ ವಿಮರ್ಶಕರೊಬ್ಬರು ಹೇಳಿದಂತೆ 'ಇದು ಸಾಮಾನ್ಯ ಮನುಷ್ಯನೊಬ್ಬನ ಮಹಾಕಾವ್ಯ'.