Gireesh. V. S.
ಬ್ರಹ್ಮ ಋಷಿ
ಬ್ರಹ್ಮ ಋಷಿ
Publisher -
- Free Shipping Above ₹400
- Cash on Delivery (COD) Available*
Pages - 415
Type - Paperback
Couldn't load pickup availability
ಭಾರತದಲ್ಲಿ ಸಹಸ್ರಾರು ವರ್ಷಗಳಿಂದಲೂ ಹಲವಾರು ಮಹರ್ಷಿಗಳು, ಸಾಧುಸಂತರು, ಯೋಗಿಗಳು ಜನಿಸಿ ಭಾರತ ಭೂಮಿಯನ್ನು ಪಾವನಗೊಳಿಸಿದ್ದಾರೆ.
ಶ್ರೀಯುತ ಕೆ.ಎಸ್ ನಿತ್ಯಾನಂದರು ಪೂರ್ವೋತ್ತರ ಮೀಮಾಂಸ ತಜ್ಞರು. ವೇದ-ವೇದಾಂಗಗಳಲ್ಲಿ ವಿದ್ವಾಂಸರು. ಯಜ್ಞ-ಯಾಗಗಳು ಅವರ ದೈನಂದಿನ ಕರ್ಮಗಳು. ಹೇಗೆ ಅಗಾಧವಾದ ಸಾಗರವನ್ನು ಇನ್ನೊಂದಕ್ಕೆ ಹೋಲಿಸಲು ಸಾಧ್ಯವಿಲ್ಲವೋ ಹಾಗೆ ಇನ್ನೊಂದಕ್ಕೆ ಅವರನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
ಮಹಾನ್ ತಪೋನಿಧಿ, ಮಹಾನ್ ತಾಂತ್ರಿಕರು, ಅಗಾಧ ಜ್ಞಾನ ನಿಧಿ, ಮೇರು ಸದೃಶ ವ್ಯಕ್ತಿತ್ವ, ವ್ಯಾಖ್ಯಾನ ಚಕ್ರವರ್ತಿ, ಶಿರೋಮಣಿ, ಆಧ್ಯಾತ್ಮ ಕ್ಷೇತ್ರದಲ್ಲಿ ಯಾರು ಊಹಿಸಲಾಗದ, ನಮ್ಮ ಕಲ್ಪನೆಗೂ ಮೀರಿದ ಅತ್ಯುನ್ನತ, ಮಹೋನ್ನತ ಬ್ರಹ್ಮ ಋಷಿ ಪದವಿ ಪಡೆದವರು.
ವೇದಗಳಲ್ಲಿರುವ ಭೌತಶಾಸ್ತ್ರ ಮನಃಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ತಂತ್ರ ಶಾಸ್ತ್ರ ಆಯುರ್ವೇದ, ನ್ಯಾಯಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಭಾಷಾ ಶಾಸ್ತ್ರ, ಅಲ್ಲದೆ ಮಹಾಭಾರತದಲ್ಲಿರುವ ವೇದೋಕ್ತ ರಹಸ್ಯ ವಿಚಾರಗಳು, ಭಗವದ್ಗೀತೆಯಲ್ಲಿರುವ ಯೋಗಶಾಸ್ತ್ರದ ವಿಚಾರಗಳು ಇತ್ಯಾದಿಗಳನ್ನು ಆಸಕ್ತರಿಗೆ ನಿಸ್ಪೃಹರಾಗಿ ಬೋಧಿಸುತ್ತಿದ್ದಾರೆ.
ಪರಕಾಯ ಪ್ರವೇಶ ವಿದ್ಯಾಬಲದಿಂದ, ಹಲವಾರು ದೇಹವನ್ನು ಧರಿಸಿ, ದೇಶ ಹಿತ ಮತ್ತು ಧರ್ಮರಕ್ಷಣೆಯನ್ನೇ ಪ್ರಮುಖ ಗುರಿಯನ್ನಾಗಿಸಿ ಅದರಂತೆ ನಡೆಯುತ್ತಾ ಇರುವ ಮಹಾನ್ ಚೇತನ. ಪ್ರತ್ಯಕ್ಷ ಶಿವ ಸ್ವರೂಪಿಗಳು.
ಯಾವುದೇ ವಿಚಾರವನ್ನಾಗಲಿ ಅದರ ಬಗ್ಗೆ ಎಲ್ಲವನ್ನು ತಿಳಿದು ಅದನ್ನು ಒರೆ ಹಚ್ಚಿಯೇ ನೋಡಿ ನಂತರ ಸಮಾಜಕ್ಕೆ ತಿಳಿಸುವ ಸಂಶೋಧಕರಿವರು.
ಒಬ್ಬ ನಿಜವಾದ ಸಾಧಕ ಹೇಗಿರುತ್ತಾರೆ? ಅವರ ಕಾರ್ಯವೈಖರಿ ಬಗ್ಗೆ ಮತ್ತು ಅವರೊಂದಿಗೆ ಅನುಭವಿಸಿರುವ ರೋಚಕ ಅನುಭವಗಳನ್ನು ಸೇರಿಸಿ ಒಬ್ಬ ಸಾಧಕರನ್ನು ಪರಿಚಯಿಸುವ ಗ್ರಂಥ ಈ ಬ್ರಹ್ಮ ಋಷಿ ಯೋಗಿ ಒಬ್ಬನ ಕಥೆ
Share

ಯೋಗ ಸಾಧನೆಯಿಂದ ವ್ಯಕ್ತಿಯೊಬ್ಬ ಪಡೆಯಬಹುದಾದ ಅತ್ಯುಚ್ಚ ಸ್ಥಾನ ಯೋಗಿಯದ್ದು. ಅಂತಹ ಯೋಗಿಯೊಬ್ಬರ ಕಥೆಯನ್ನು ಒಳಗೊಂಡ ಈ ಪುಸ್ತಕ ಹಲವರಿಗೆ ಪ್ರೇರಣೆಯನ್ನು ಕೊಡುವಂತದ್ದು. ವ್ಯಕ್ತಿಯೊಬ್ಬ ಜೀವನದಲ್ಲಿ ಸಾಧಿಸಬಹುದಾದ ಅನಂತ ಸಂಭವನೀಯತೆಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಒಬ್ಬ ವ್ಯಕ್ತಿ ಈ ರೀತಿಯಲ್ಲೂ ಬದುಕಲು ಸಾಧ್ಯವೇ ಎಂದು ಅನ್ನಿಸದೇ ಇರದು. ಪರೋಪಕಾರವೇ ಜೀವನ ಎನ್ನುವುದನ್ನು ಮೂರ್ತಿವೆತ್ತಂತೆ ಬದುಕಿರುವ ಮಹಾನ್ ಸಾಧಕರಾದ ಬ್ರಹ್ಮ ಋಷಿ ವೇದ ಕೃಷಿಕ ಕೆ.ಎಸ್. ನಿತ್ಯಾನಂದರ ಜೀವನಗಾಥೆಯ ಪರಿಚಯ ಮಾಡಲು ಲೇಖಕರು ತುಂಬಾ ಶ್ರಮಿಸಿದ್ದಾರೆ. ಇಂತಹ ಇನ್ನಷ್ಟು ಪುಸ್ತಕಗಳನ್ನು ಅವರಿಂದ ನಿರೀಕ್ಷಿಸುತ್ತಿದ್ದೇವೆ. ಧನ್ಯವಾದಗಳು.
ಈ ಪುಸ್ತಕವು ಶ್ರೀ ಕೆ.ಎಸ್. ನಿತ್ಯಾನಂದರ ಆಧ್ಯಾತ್ಮಿಕ ಜೀವನ, ವೇದಾಧ್ಯಯನ ಮತ್ತು ಯಜ್ಞ–ಯಾಗಗಳ ಸಾಧನೆಯನ್ನು ಶಿಸ್ತಿನಿಂದ ಪರಿಚಯಿಸುತ್ತದೆ. ಸಂನ್ಯಾಸಿಯ ಜ್ಞಾನ, ತಪಸ್ಸು ಮತ್ತು ಬೋಧನೆಯ ಅಗಾಧತೆಯನ್ನು ಲೇಖಕರು ನಿಖರವಾಗಿ ಚಿತ್ರಿಸಿದ್ದು, ಓದುಗರಿಗೆ ವೇದಿಕ ಪರಂಪರೆಯ ಆಳವನ್ನು ಗ್ರಹಿಸುವ ಅವಕಾಶ ನೀಡುತ್ತದೆ. ಆಧ್ಯಾತ್ಮ ಮತ್ತು ಸಂಪ್ರದಾಯದ ನಿಜಸ್ವರೂಪ ಅರಿಯಲು ಬಯಸುವವರಿಗೆ ಇದು ಮೌಲ್ಯಯುತ ಕೃತಿ...
ನಡೆದಾಡುವ ದೇವರು ಸ್ವಾಮೀಜಿಯವರ ರೂಪದಲ್ಲಿ ನಮ್ಮಗಳ ಜೊತೆ ಇರುವುದು ನಮ್ಮೆಲ್ಲರ ಭಾಗ್ಯ ಸ್ವಾಮೀಜಿಯವರ ಕುರಿತಾಗಿ ಹೆಚ್ಚಿನದನ್ನು ತಿಳಿಯಲು ಪುಸ್ತಕವನ್ನು ಓದಲೇ ಬೇಕು ಜನ್ಮ ಪಾವನ ವಾಗಿಸಲು ಪುಸ್ತಕ ವನ್ನು ಓದಲೇ ಬೇಕು
Subscribe to our emails
Subscribe to our mailing list for insider news, product launches, and more.