Skip to product information
1 of 2

Gireesh. V. S.

ಬ್ರಹ್ಮ ಋಷಿ

ಬ್ರಹ್ಮ ಋಷಿ

Publisher -

Regular price Rs. 550.00
Regular price Rs. 550.00 Sale price Rs. 550.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 415

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಭಾರತದಲ್ಲಿ ಸಹಸ್ರಾರು ವರ್ಷಗಳಿಂದಲೂ ಹಲವಾರು ಮಹರ್ಷಿಗಳು, ಸಾಧುಸಂತರು, ಯೋಗಿಗಳು ಜನಿಸಿ ಭಾರತ ಭೂಮಿಯನ್ನು ಪಾವನಗೊಳಿಸಿದ್ದಾರೆ.

ಶ್ರೀಯುತ ಕೆ.ಎಸ್ ನಿತ್ಯಾನಂದರು ಪೂರ್ವೋತ್ತರ ಮೀಮಾಂಸ ತಜ್ಞರು. ವೇದ-ವೇದಾಂಗಗಳಲ್ಲಿ ವಿದ್ವಾಂಸರು. ಯಜ್ಞ-ಯಾಗಗಳು ಅವರ ದೈನಂದಿನ ಕರ್ಮಗಳು. ಹೇಗೆ ಅಗಾಧವಾದ ಸಾಗರವನ್ನು ಇನ್ನೊಂದಕ್ಕೆ ಹೋಲಿಸಲು ಸಾಧ್ಯವಿಲ್ಲವೋ ಹಾಗೆ ಇನ್ನೊಂದಕ್ಕೆ ಅವರನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಮಹಾನ್ ತಪೋನಿಧಿ, ಮಹಾನ್ ತಾಂತ್ರಿಕರು, ಅಗಾಧ ಜ್ಞಾನ ನಿಧಿ, ಮೇರು ಸದೃಶ ವ್ಯಕ್ತಿತ್ವ, ವ್ಯಾಖ್ಯಾನ ಚಕ್ರವರ್ತಿ, ಶಿರೋಮಣಿ, ಆಧ್ಯಾತ್ಮ ಕ್ಷೇತ್ರದಲ್ಲಿ ಯಾರು ಊಹಿಸಲಾಗದ, ನಮ್ಮ ಕಲ್ಪನೆಗೂ ಮೀರಿದ ಅತ್ಯುನ್ನತ, ಮಹೋನ್ನತ ಬ್ರಹ್ಮ ಋಷಿ ಪದವಿ ಪಡೆದವರು.

ವೇದಗಳಲ್ಲಿರುವ ಭೌತಶಾಸ್ತ್ರ ಮನಃಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ತಂತ್ರ ಶಾಸ್ತ್ರ ಆಯುರ್ವೇದ, ನ್ಯಾಯಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಭಾಷಾ ಶಾಸ್ತ್ರ, ಅಲ್ಲದೆ ಮಹಾಭಾರತದಲ್ಲಿರುವ ವೇದೋಕ್ತ ರಹಸ್ಯ ವಿಚಾರಗಳು, ಭಗವದ್ಗೀತೆಯಲ್ಲಿರುವ ಯೋಗಶಾಸ್ತ್ರದ ವಿಚಾರಗಳು ಇತ್ಯಾದಿಗಳನ್ನು ಆಸಕ್ತರಿಗೆ ನಿಸ್ಪೃಹರಾಗಿ ಬೋಧಿಸುತ್ತಿದ್ದಾರೆ.

ಪರಕಾಯ ಪ್ರವೇಶ ವಿದ್ಯಾಬಲದಿಂದ, ಹಲವಾರು ದೇಹವನ್ನು ಧರಿಸಿ, ದೇಶ ಹಿತ ಮತ್ತು ಧರ್ಮರಕ್ಷಣೆಯನ್ನೇ ಪ್ರಮುಖ ಗುರಿಯನ್ನಾಗಿಸಿ ಅದರಂತೆ ನಡೆಯುತ್ತಾ ಇರುವ ಮಹಾನ್ ಚೇತನ. ಪ್ರತ್ಯಕ್ಷ ಶಿವ ಸ್ವರೂಪಿಗಳು.

ಯಾವುದೇ ವಿಚಾರವನ್ನಾಗಲಿ ಅದರ ಬಗ್ಗೆ ಎಲ್ಲವನ್ನು ತಿಳಿದು ಅದನ್ನು ಒರೆ ಹಚ್ಚಿಯೇ ನೋಡಿ ನಂತರ ಸಮಾಜಕ್ಕೆ ತಿಳಿಸುವ ಸಂಶೋಧಕರಿವರು.

ಒಬ್ಬ ನಿಜವಾದ ಸಾಧಕ ಹೇಗಿರುತ್ತಾರೆ? ಅವರ ಕಾರ್ಯವೈಖರಿ ಬಗ್ಗೆ ಮತ್ತು ಅವರೊಂದಿಗೆ ಅನುಭವಿಸಿರುವ ರೋಚಕ ಅನುಭವಗಳನ್ನು ಸೇರಿಸಿ ಒಬ್ಬ ಸಾಧಕರನ್ನು ಪರಿಚಯಿಸುವ ಗ್ರಂಥ ಈ ಬ್ರಹ್ಮ ಋಷಿ ಯೋಗಿ ಒಬ್ಬನ ಕಥೆ

View full details