B R Suhas
ಭರ್ತೃಹರಿಯ ಶತಕತ್ರಯ
ಭರ್ತೃಹರಿಯ ಶತಕತ್ರಯ
Publisher -
- Free Shipping Above ₹400
- Cash on Delivery (COD) Available*
Pages - 260
Type - Paperback
Couldn't load pickup availability
ಭರ್ತೃಹರಿಯ ಶತಕತ್ರಯ, ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನರ್ಥ್ಯ ಕೃತಿರತ್ನ, ನೀತಿಶತಕ, ಶೃಂಗಾರ ಶತಕ ಮತ್ತು ವೈರಾಗ್ಯ ಶತಕಗಳೆಂಬ ನೂರು ನೂರು ಶ್ಲೋಕಗಳ ಮೂರು ಕೃತಿಗಳ ಸಂಗಮವಿದು. ಇದನ್ನು ಸುಭಾಷಿತ ತ್ರಿಶತೀ ಎಂದೂ ಕರೆಯುತ್ತಾರೆ. ಚೆನ್ನಾಗಿ ಹೇಳಿದ ಮಾತನ್ನು ಸುಭಾಷಿತ ಎನ್ನುತ್ತಾರೆ. ಸಂಸ್ಕೃತ ಸಾಹಿತ್ಯದಲ್ಲಿ ಸುಭಾಷಿತಗಳು ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಇವು ಮಾನವನ ಗುಣ, ಸ್ವಭಾವಗಳ ಮೇಲೆ ಬೆಳಕು ಚೆಲ್ಲುತ್ತವೆ. ನೀತಿ, ಶೃಂಗಾರ, ವೈರಾಗ್ಯ, ಸಜ್ಜನ ಮತ್ತು ದುರ್ಜನ, ಬುದ್ದಿವಂತ ಮತ್ತು ಮೂರ್ಖ, ಹಣ, ಸ್ನೇಹ, ಪ್ರೀತಿ, ಪರೋಪಕಾರ, ಸ್ವಾಭಿಮಾನ, ಕಲೆ ಮೊದಲಾದ ಅನೇಕ ವಿಷಯಗಳ ಬಗ್ಗೆ ರಚಿತವಾಗಿರುವ ಸುಭಾಷಿತಗಳು ಸಾರ್ವಕಾಲಿಕ ಸತ್ಯ ವಾಕ್ಯಗಳಾಗಿದ್ದು ನಮ್ಮ ನಿತ್ಯ ಜೀವನಕ್ಕೆ ದಾರಿದೀಪಗಳಾಗಿವೆ. ನೀತಿ. ಶೃಂಗಾರ, ವೈರಾಗ್ಯಗಳು ನಮ್ಮ ಜೀವನದ ಅವಸ್ಥೆಗಳಾದ ಬಾಲ್ಯ. ಯೌವ್ವನ ಹಾಗೂ ವಾರ್ಧಕ್ಯಗಳಿಗೆ ಅನುಸಾರವಾಗಿ ನಾವು ಅವಶ್ಯವಾಗಿ ಬೆಳೆಸಿಕೊಳ್ಳಬೇಕಾದ ಮೂರು ಗುಣಗಳಾಗಿವೆ. ಈ ಮೂರು ಗುಣಗಳ ಮೇಲೆ ಬೆಳಕು ಚೆಲ್ಲುವ ಮೂರು ಸುಭಾಷಿತ ಶತಕಗಳನ್ನು ಮಹಾನ್ ಕವಿ ಭರ್ತೃಹರಿ ಸಂಸ್ಕೃತದಲ್ಲಿ ರಚಿಸಿ ಜನತೆಗೆ ಮಹದುಪಕಾರ ಮಾಡಿದ್ದಾನೆ. ಅವುಗಳ ಸರಳವಾದ ಕನ್ನಡಾನುವಾದ, ಸೂಕ್ತ ವಿವರಣೆಗಳೊಂದಿಗೆ ಇಲ್ಲಿದೆ
Share

Subscribe to our emails
Subscribe to our mailing list for insider news, product launches, and more.