1
/
of
1
Prof. V. N. Bhat
ಭಾರತೀಯ ಹಬ್ಬಗಳ ವೈಶಿಷ್ಟ್ಯ
ಭಾರತೀಯ ಹಬ್ಬಗಳ ವೈಶಿಷ್ಟ್ಯ
Publisher - ಐಬಿಹೆಚ್ ಪ್ರಕಾಶನ
Regular price
Rs. 115.00
Regular price
Rs. 115.00
Sale price
Rs. 115.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 142
Type - Paperback
Couldn't load pickup availability
ನನ್ನ ಸಹೋದ್ಯೋಗಿಗಳಾದ ವಿದ್ವಾನ್ ಪ್ರೊ|| ವಿ.ಎನ್, ಭಟ್ ಅವರು ನಮ್ಮ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿಯನ್ನು ಕೇವಲ ಬೋಧನೆಗೆ ಮಾತ್ರ ಸೀಮಿತಗೊಳಿಸದೆ, ಕಲೆ, ಸಾಹಿತ್ಯ, ಸಂಸ್ಕೃತಿ ಇವುಗಳ ಪ್ರಸಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಂಸ್ಕೃತ ಸಾಹಿತ್ಯದಲ್ಲಿ ಕಬ್ಬಿಣದ ಕಡಲೆಯಂತಿರುವ ವೇದೋಪನಿಷತ್ತುಗಳು, ಸುಭಾಷಿತಗಳು, ಕಾವ್ಯ ಮೀಮಾಂಸೆ, ಅಲಂಕಾರ ಶಾಸ್ತ್ರ, ರಾಮಾಯಣ, ಮಹಾಭಾರತ, ಶ್ರುತಿ-ಸ್ಮೃತಿ ಮೊದಲಾದ ಗ್ರಂಥಗಳ ಆಣಿಮುತ್ತುಗಳನ್ನು ಆಯ್ದುಕೊಂಡು ಕನ್ನಡದ ಕನ್ನಡಿಯಲ್ಲಿ ಸೆರೆ ಹಿಡಿದಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ತಮ್ಮ ಜೀವನಾನುಭವದ ಅಂಶಗಳನ್ನು ಸೇರಿಸಿ ಅವರು ಈಗಾಗಲೇ 'ಜ್ಞಾನದೀಪ', 'ಸುಜ್ಞಾನದೀಪ', 'ಔಚಿತ್ಯ ಸಿದ್ಧಾಂತ', 'ಕಾವ್ಯಶಾಸ್ತ್ರ ವಿಮರ್ಶೆ', 'ಚೈತ್ರಶ್ರೀ', 'ವಸಂತ' ಮುಂತಾದ ಗ್ರಂಥ 'ಗಳ ಮೂಲಕ ನಾಡಿನ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಭಾರತೀಯ ಹಬ್ಬಗಳ ವೈಶಿಷ್ಟ್ಯ' ಎಂಬ ಈ ವಿನೂತನ ಗ್ರಂಥ, ಹಬ್ಬ ಹರಿದಿನಗಳು ಕೇವಲ ಕುರುಡು ಸಂಪ್ರದಾಯಗಳಾಗಿರುತ್ತವೆಂಬ ಮನೋಭಾವನೆಯನ್ನು ಮೂಲೋತ್ಪಾಟನೆ ಮಾಡುವಂತಹ ಕೃತಿಯಾಗಿದೆ. ಈ ಪುಸ್ತಕ ಬುದ್ಧಿ ಜೀವಿಗಳಲ್ಲೂ, ಶ್ರದ್ಧಾಭಕ್ತಿಯನ್ನು ಬೆಳೆಸುವಂತಿದೆ. ಹಬ್ಬ ಹರಿದಿನಗಳು ಕೇವಲ ವ್ರತಾಚರಣೆಯಾಗಿರದೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಬೀರುವಂತಹ ಸಂಕೇತಗಳಾಗಿರುತ್ತವೆಂಬ ಅಂಶವನ್ನು ಈ ಗ್ರಂಥದಲ್ಲಿ ಒಡಮೂಡಿಸಿದ್ದಾರೆ. ಪ್ರಾಚೀನ ಜ್ಞಾನ, ಮಧ್ಯಯುಗೀನ ಧಾರ್ಮಿಕ ಶ್ರದ್ಧೆ ಹಾಗೂ ಅರ್ವಾಚೀನ ಚಿಕಿತ್ಸಕ ದೃಷ್ಟಿಕೋನ ಈ ಎಲ್ಲಾ ಅಂಶಗಳನ್ನು ವಿದ್ವಾನ್ ಶ್ರೀ ವಿ.ಎನ್. ಭಟ್ ಅವರು ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಅವರಿಂದ ಇನ್ನೂ ಹೆಚ್ಚು ಹೆಚ್ಚಾಗಿ ಈ ತರಹದ ಗ್ರಂಥಗಳು ಹೊರಬರಲಿ ಹಾಗೂ ನಾಡಿನ ನಾಗರಿಕರ ಮೆಚ್ಚುಗೆ ಪಡೆಯಲಿ ಎಂದು ಹಾರೈಸುತ್ತೇನೆ.
- ಪ್ರೊ| ಡಾ. ಆರ್.ಆರ್. ಕುಲಕರ್ಣಿ
ಸಂಸ್ಕೃತ ಸಾಹಿತ್ಯದಲ್ಲಿ ಕಬ್ಬಿಣದ ಕಡಲೆಯಂತಿರುವ ವೇದೋಪನಿಷತ್ತುಗಳು, ಸುಭಾಷಿತಗಳು, ಕಾವ್ಯ ಮೀಮಾಂಸೆ, ಅಲಂಕಾರ ಶಾಸ್ತ್ರ, ರಾಮಾಯಣ, ಮಹಾಭಾರತ, ಶ್ರುತಿ-ಸ್ಮೃತಿ ಮೊದಲಾದ ಗ್ರಂಥಗಳ ಆಣಿಮುತ್ತುಗಳನ್ನು ಆಯ್ದುಕೊಂಡು ಕನ್ನಡದ ಕನ್ನಡಿಯಲ್ಲಿ ಸೆರೆ ಹಿಡಿದಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ತಮ್ಮ ಜೀವನಾನುಭವದ ಅಂಶಗಳನ್ನು ಸೇರಿಸಿ ಅವರು ಈಗಾಗಲೇ 'ಜ್ಞಾನದೀಪ', 'ಸುಜ್ಞಾನದೀಪ', 'ಔಚಿತ್ಯ ಸಿದ್ಧಾಂತ', 'ಕಾವ್ಯಶಾಸ್ತ್ರ ವಿಮರ್ಶೆ', 'ಚೈತ್ರಶ್ರೀ', 'ವಸಂತ' ಮುಂತಾದ ಗ್ರಂಥ 'ಗಳ ಮೂಲಕ ನಾಡಿನ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಭಾರತೀಯ ಹಬ್ಬಗಳ ವೈಶಿಷ್ಟ್ಯ' ಎಂಬ ಈ ವಿನೂತನ ಗ್ರಂಥ, ಹಬ್ಬ ಹರಿದಿನಗಳು ಕೇವಲ ಕುರುಡು ಸಂಪ್ರದಾಯಗಳಾಗಿರುತ್ತವೆಂಬ ಮನೋಭಾವನೆಯನ್ನು ಮೂಲೋತ್ಪಾಟನೆ ಮಾಡುವಂತಹ ಕೃತಿಯಾಗಿದೆ. ಈ ಪುಸ್ತಕ ಬುದ್ಧಿ ಜೀವಿಗಳಲ್ಲೂ, ಶ್ರದ್ಧಾಭಕ್ತಿಯನ್ನು ಬೆಳೆಸುವಂತಿದೆ. ಹಬ್ಬ ಹರಿದಿನಗಳು ಕೇವಲ ವ್ರತಾಚರಣೆಯಾಗಿರದೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಬೀರುವಂತಹ ಸಂಕೇತಗಳಾಗಿರುತ್ತವೆಂಬ ಅಂಶವನ್ನು ಈ ಗ್ರಂಥದಲ್ಲಿ ಒಡಮೂಡಿಸಿದ್ದಾರೆ. ಪ್ರಾಚೀನ ಜ್ಞಾನ, ಮಧ್ಯಯುಗೀನ ಧಾರ್ಮಿಕ ಶ್ರದ್ಧೆ ಹಾಗೂ ಅರ್ವಾಚೀನ ಚಿಕಿತ್ಸಕ ದೃಷ್ಟಿಕೋನ ಈ ಎಲ್ಲಾ ಅಂಶಗಳನ್ನು ವಿದ್ವಾನ್ ಶ್ರೀ ವಿ.ಎನ್. ಭಟ್ ಅವರು ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಅವರಿಂದ ಇನ್ನೂ ಹೆಚ್ಚು ಹೆಚ್ಚಾಗಿ ಈ ತರಹದ ಗ್ರಂಥಗಳು ಹೊರಬರಲಿ ಹಾಗೂ ನಾಡಿನ ನಾಗರಿಕರ ಮೆಚ್ಚುಗೆ ಪಡೆಯಲಿ ಎಂದು ಹಾರೈಸುತ್ತೇನೆ.
- ಪ್ರೊ| ಡಾ. ಆರ್.ಆರ್. ಕುಲಕರ್ಣಿ
Share
![ಭಾರತೀಯ ಹಬ್ಬಗಳ ವೈಶಿಷ್ಟ್ಯ](http://harivubooks.com/cdn/shop/products/1_1b957757-5d78-456b-aec9-3d70b4e0fccc.jpg?v=1658556961&width=1445)
Subscribe to our emails
Subscribe to our mailing list for insider news, product launches, and more.