R. Sunandamma
ಭರತಕಲ್ಪ
ಭರತಕಲ್ಪ
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 464
Type - Paperback
Couldn't load pickup availability
ಕಾದಂಬರಿಯಲ್ಲಿ ಭರತನದು ಅನನ್ಯ ವ್ಯಕ್ತಿತ್ವ, ಆತ ಏಕಕಾಲಕ್ಕೆ ಸ್ತ್ರೀ ಮತ್ತು ಪುರುಷ ಇಬ್ಬರ ಲೋಕದೊಳಗೂ ಸಲೀಸಾಗಿ ಸಂವಹನ ಮಾಡಬಲ್ಲ ಕುಶಲಿ (ಶಿವರಾಮ ಕಾರಂತರ ಸರಸಮ್ಮನ ಸಮಾಧಿ ಕಾದಂಬರಿಯ ಚಂದ್ರಪ್ಪನಂತಹ ವ್ಯಕ್ತಿತ್ವ). ಈ ಎರಡೂ ಲೋಕಗಳು ಪರಸ್ಪರ ಹತ್ತಿರದಲ್ಲೇ ಬದುಕಿದ್ದರೂ ಒಂದು ಇನ್ನೊಂದಕ್ಕೆ ಅನ್ಯವಾಗಿ ಉಳಿದಿರುವುದು ಜೀವನದ ಚೋದ್ಯ. ಹೀಗೆ ಸಮಾನಾಂತರವಾಗಿ ಆದರೆ ಸ್ವಾಯತ್ತವಾಗಿ ಉಳಿದ ಈ ಲೋಕಗಳೊಳಗೆ ಸಲೀಸಾಗಿ ಪ್ರವೇಶಿಸಲು ಯಾರಿಗೇ ಆಗಲಿ ವಿಶಿಷ್ಟವಾದ ಕೌಶಲ್ಯವು ಅಗತ್ಯ. ಅದು ಭರತನಿಗೆ ದಕ್ಕಿದ್ದು ಕೂಡ ತುಂಬಾ ಸಾಂಕೇತಿಕವಾಗಿ, ಆದರೆ ಸಹಜವಾಗಿ! ಅಜ್ಜಿಯ ಮನೆಯ ಹೆಣ್ಣಾಳಿಕೆಯನ್ನು ಎಳವೆಯಿಂದಲೇ ಕಂಡ ಭರತನು ಬೆಳೆದಂತೆ ತಂದೆ ಮನೆಯ ಗಂಡಾಳಿಕೆಯನ್ನೂ ಎದುರುಗೊಂಡ ಎರಡರ ಅನುಕೂಲ-ಅನನುಕೂಲ, ಸಾಧನೆ-ಸಾಧ್ಯತೆ, ಸಾರ್ಥಕತೆ-ನಿರರ್ಥಕತೆಗಳು ಭರತನಿಗೆ ಅಂಗೈನೆಲ್ಲಿಯಂತೆ ದೃಗ್ಗೋಚರ. ಆದುದರಿಂದಲೇ ಆತನಿಗೆ ಮಾಂಡವಿ, ಶ್ರುತಕೀರ್ತಿ, ಊರ್ಮಿಳೆ, ಕೌಸಲ್ಯ, ಸುಮಿತ್ರೆ ಮತ್ತು ತಾಯಿ ಕೈಕೆಯೊಂದಿಗೆ ಸಂವಹನ ಸಾಧ್ಯವಾದಂತೆ ವಸಿಷ್ಠ, ಜಾಬಾಲಿ ಮುಂತಾದ ಮುನಿಗಳು, ಮಂತ್ರಿಗಳು, ಸೈನಿಕರು, ಪ್ರಜೆಗಳು ಹೀಗೆ ಎಲ್ಲರೊಡನೆಯೂ ಸಂವಹನ ಸಾಧ್ಯವಾಗಿದೆ; ಅವರೆಲ್ಲರ ಕನಸು-ಚಿಂತನೆ-ಲೋಕಗ್ರಹಿಕೆಗಳ ವಿನ್ಯಾಸ ಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ. ಕೈಕೆಗೆ ಇದು ಸಾಧ್ಯವಾಗದೇ ಇದ್ದುದೆ ಅವಳೆಲ್ಲ ದುರಂತಗಳ ಮೂಲ ಎಂಬ ನಿಲುವು, ಗಂಡಾಳಿಕೆಯ ಪ್ರತಿಷ್ಠೆಯ ನಿರರ್ಥಕತೆಯ ತಥ್ಯವು ಕಾದಂಬರಿಯಲ್ಲಿ ಸೂಚಿತವಾಗಿದೆ.
Share


Subscribe to our emails
Subscribe to our mailing list for insider news, product launches, and more.