Lakshmeesha Tholpadi
ಬಾಳು
ಬಾಳು
Publisher - ಅಭಿನವ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 84
Type - Paperback
Couldn't load pickup availability
ಉಪನಿಷತ್ತು' ಎಂದರೆ ಸರಳವಾಗಿ-ಹತ್ತಿರ ಕುಳಿತಿರುವುದು ಎಂದು. ಹತ್ತಿರ ಇರುವಿಕೆ. 'ಇರುವಿಕೆ'ಯ ಹತ್ತಿರ. ಮೊಟ್ಟೆಯ ಮೇಲೆ ಹಕ್ಕಿ ಕಾವು ಕೂತಂತೆ. ಒಡಲೊಳಗಿನ ಮಗು ತಾಯಿಗೆ ಹತ್ತಿರ ಮತ್ತು ತಾಯಿ, ಮಗುವಿಗೆ ಹತ್ತಿರವಾಗಿರುವಂತೆ. ಉಪನಿಷತ್ತು ಆಧ್ಯಾತ್ಮಿಕ ವಾಹ್ಮಯವಾಗಿರುವುದರಿಂದ, ಬದುಕಿನ ಆಳವಾದ 'ಸತ್ಯ'ದ ಹತ್ತಿರ ಕೂರುವುದು – ಅದರ ಜೊತೆಗೇ ಇರುವುದು - ಎಂದು. 'ಸತ್ಯ' ಎಂದರೆ ಇರುವಿಕೆ ಎಂದೇ ಅರ್ಥ. 'ಇರುವಿಕೆ'ಗೆ ಅದರ ಹತ್ತಿರ ಇರುವುದಲ್ಲದೆ ಬೇರಿನ್ನಾವ ಕಲಾಪಗಳೂ ಪ್ರಸ್ತುತವಲ್ಲ.
ಉಪನಿಷತ್ತಿನಲ್ಲಿ ಮೇಲ್ನೋಟಕ್ಕೆ ಒಂದು ಕಥೆ ಇದೆ. ಅದೊಂದು ಸಂದರ್ಭ ಸೂಚನೆ. ಅನುಗುಣವಾಗಿ ಕೆಲವು ಮಾತುಕತೆಗಳ ವಿವರಗಳು. ಈ ಮಾತುಕತೆಗಳಾದರೂ ಸಮಗ್ರವಾಗಿ ಪ್ರತಿಯೊಂದು ಹೆಜ್ಜೆಯನ್ನೂ ಚಿತ್ರಿಸುವಂತೆ ಇಲ್ಲ. ನಡುವೆ ನಾವು ಊಹಿಸಿಕೊಳ್ಳಬೇಕಾದ ಅನೇಕ ಸಂಗತಿಗಳಿರುತ್ತವೆ. ಎರಡು ಮನಸ್ಸುಗಳು ಸೇರಿದಾಗ ಎಷ್ಟು ಮಾತು, ಎಷ್ಟು ಮಾತಿಲ್ಲದೆ ಅರ್ಥವಾಗುವಂಥವು, ಮಾತುಗಳ ಅರ್ಥಗಳಾದರೂ ಎಷ್ಟು ಬೇರೆ ಬೇರೆ ಕಡೆ ಚಾಚುವಂಥವು- ಇವೆಲ್ಲ ಸಂಭವಗಳೂ ಇರುತ್ತವೆ. ಈ ಎಲ್ಲ ಸಂಭವಗಳ ನಡುವೆ ಸವಾಲು- ಆತಂಕಗಳ ನಡುವೆ ಉಪನಿಷತ್ತುಗಳನ್ನು ಓದುವುದೇ ಒಂದು ಸಂಭ್ರಮವೂ ಅಲ್ಲವೆ ! ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆ ಲೋಕವೇ ಬೆಚ್ಚುವಂತೆ ಮಾಡಬಲ್ಲ ಪ್ರಶ್ನೆಯಾಗಿದೆ! ಈ ಪ್ರಶ್ನೆಯನ್ನೆತ್ತಿಕೊಳ್ಳದೆ ಉಪನಿಷತ್ತು ವಿರಮಿಸುವಂತಿಲ್ಲ.
ಬದುಕೆನ್ನುವುದು 'ಕ್ಷಣಿಕ' ಎನ್ನುವುದೇ ಸಾವಿನ ಕಾಣೆಯಾಗಿರುವುದರಿಂದ, ವಿಚಿತ್ರವೆನ್ನುವಂತೆ, ಕ್ಷಣಿಕತೆಯೇ ವಿರಕ್ತಿಗಿಂತ ಹೆಚ್ಚಾಗಿ ಬದುಕಿನಲ್ಲಿ ರುಚಿಯನ್ನು ಉದ್ದೀಪಿಸುವ ಭಾವವೂ ಆಗಿರುವುದರಿಂದ, ಅಂದರೆ ಮುಗಿಯುವ ಮುನ್ನ ಆದಷ್ಟು ಸವಿಯೋಣ ಎಂದು ತೀವ್ರವಾಗಿ ಅನ್ನಿಸುವುದರಿಂದ- ಬದುಕನ್ನು ಸವಿಯುವುದಿಲ್ಲವೇನು? ಎಂದು ಸಾವೇ ಕೇಳುತ್ತಿರುವಂತೆ ಉಪನಿಷತ್ತು ಚಿತ್ರಿಸುತ್ತದೆ!
-ಒಳಗಿನ ಪುಟಗಳಿಂದ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.