Jogi
Publisher - ಅಂಕಿತ ಪುಸ್ತಕ
- Free Shipping
- Cash on Delivery (COD) Available
Couldn't load pickup availability
‘ಬೆಂಗಳೂರು’ ಕಾದಂಬರಿಯಲ್ಲಿ ನರಸಿಂಹ ಭಿಡೆ ಬೆಂಗಳೂರನ್ನು ಪ್ರತಿನಿಧಿಸುತ್ತಾನೆಯಾದರೆ, ಇಲ್ಲಿ ಸ್ವತಃ ಲೇಖಕರೇ ತಮ್ಮ ಅನುಭವಗಳನ್ನು ನಿರೂಪಿಸುತ್ತಾರೆ. ಆದರೆ ಇವು ವಿಭಿನ್ನವಾದ ಅನುಭವಗಳ ಕಥನ. ಬೆಂಗಳೂರಿನಲ್ಲಿ ಬದುಕುವ ಆಶೆಯಿಂದ ದೂರದ ಊರುಗಳಿಂದ ಬಂದವರು ಈ ಅನುಭವಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನ್ನುವ ಒತ್ತಾಯ ಇಲ್ಲಿಲ್ಲ. ಬೆಂಗಳೂರು ನಮ್ಮ ಕೆಲವಾದರೂ ಕನಸುಗಳನ್ನು ಈಡೇರಿಸುವುದು ನಿಜ. ಆದರೆ ಬೆಂಗಳೂರಿನಲ್ಲಿ ಹಗಲೆಲ್ಲ ದುಡಿದು ರಾತ್ರೆ ನಿದ್ದೆಗೆಂದು ದಿಂಬಿಗೆ ತಲೆಯಿಟ್ಟು ಮಲಗಿದಾಗ ನಮ್ಮ ಕನಸುಗಳಲ್ಲಿ ಕಾಣುವುದು ಮಾತ್ರ ನಮ್ಮ ಊರೇ. ಜೋಗಿ ಈ ಅನುಭವವನ್ನು ಆಫ್ರಿಕಾದಿಂದ ಇಂಗ್ಲೆಂಡಿಗೆ ವಲಸೆ ಬಂದ ಆಲ್ಬರ್ಟ್ ವಾಜ್ದಾನ ಉಲ್ಲೇಖ ಮಾಡುತ್ತ ದೃಢೀಕರಿಸುತ್ತಾರೆ. ಈ ಕಥನಗಳು ಬೆಂಗಳೂರಿನ ಹಲವು ಸೀಳು ಮುಖಗಳನ್ನು ಪರಿಚಯಿಸುತ್ತವೆ. ಅವುಗಳ ದೃಷ್ಟಾರ ಸ್ವತಃ ಲೇಖಕರು. ಇಡೀ ಸಂಕಲನವನ್ನು ಓದಿ ಇಡುವಾಗ ಬೆಂಗಳೂರಿನ ಶ್ರೀಮುಖದ ದರ್ಶನವಾಗದಿರುವ ವಿಷಾದವೂ ನಮ್ಮನ್ನು ಕಾಡುತ್ತದೆ.
ಪ್ರಕಾಶಕರು - ಅಂಕಿತ ಪುಸ್ತಕ
