Dr.archana Athani
ಅರಾವಳಿ ನರ್ಮದೆಯರ ನಾಡಿನಲ್ಲಿ
ಅರಾವಳಿ ನರ್ಮದೆಯರ ನಾಡಿನಲ್ಲಿ
Publisher -
- Free Shipping Above ₹350
- Cash on Delivery (COD) Available*
Pages - 200
Type - Paperback
Couldn't load pickup availability
ಡಾ. ಅರ್ಚನಾ ಅಥಣಿ ಸಂಶೋಧಕರು, ವಿಮರ್ಶಕರು, ಗಡಿನಾಡಿನ ಆಥಣಿಯ ಹೆಮ್ಮೆಯ ಮಹಿಳಾ ಸಾಹಿತಿಗಳು, ಹಲವು ಸಂಘ-ಸಂಸ್ಥೆಗಳೊಡನೆ ಸೇರಿ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ತಮ್ಮ ಸುತ್ತಲಿನ ಸಮಾಜದ ಘಟನೆಗಳನ್ನು ನೈಜವಾಗಿ ಸಾಹಿತ್ಯದಲ್ಲಿ ಸೆರೆಹಿಡಿಯುವ ನಿಷ್ಣಾತರು.
ಅಧ್ಯಯನ ಅಧ್ಯಾಪನ ಕಾರ್ಯಗಳಲ್ಲಿ ಮೂರು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಶೈಕ್ಷಣಿಕ ಕಾರ್ಯಕ್ರಮ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನ, ಅನುಭವಗಳನ್ನು ಹೆಚ್ಚಿಸಿಕೊಳ್ಳಲು ಸದಾ ಹಂಬಲಿಸುವವರು ತಾವು ನೋಡಿದ ಪ್ರವಾಸಿ ಸ್ಥಳಗಳ ಪರಿಚಯವನ್ನು ಸ್ವಾರಸ್ಯಕರವಾಗಿ ತಮ್ಮ ಬರವಣಿಗೆಯಲ್ಲಿ ಮೂಡಿಸುವ ಭರವಸೆಯ ಬರಹಗಾರರು, ಶೈಕ್ಷಣಿಕ ತರಬೇತಿ ನಿಮಿತ್ತ 'ಸರೋವರಗಳ ನಗರ' ಉದಯಪುರಕ್ಕೆ ಪಯಣಿಸಿದಾಗ, ಆ ದಾರಿಯುದ್ದಕ್ಕೂ ಅವರು ಕಂಡಂತಹ ದೃಶ್ಯಗಳು, ಅನುಭವಗಳನ್ನು ಆಪ್ತವಾದ ಶೈಲಿಯಲ್ಲಿ ಬರೆದು 'ಅರಾವಳಿ ನರ್ಮದೆಯರ ನಾಡಿನಲ್ಲಿ' ಪ್ರವಾಸ ಕಥನವನ್ನಾಗಿಸಿ ಕನ್ನಡಿಗರ ಕೈಗಿಡುತ್ತಿರುವರು.
ರಾಜಸ್ಥಾನ ಹಾಗೂ ಗುಜರಾತ ರಾಜ್ಯಗಳ ಹಲವಾರು ಸ್ಥಳಗಳನ್ನು ಸಂದರ್ಶಿಸಿ, ಅಲ್ಲಿನ ಭೌಗೋಳಿಕ ಸಾಂಸ್ಕೃತಿಕ ಐತಿಹಾಸಿಕ ಸಂಗತಿಗಳನ್ನು ಸವಿವರವಾಗಿ ನಿರೂಪಿಸಿದ ಅನುಪಮ ಕೃತಿಯಿದು. 'ಅರಾವಳಿ ನರ್ಮದೆಯರ ನಾಡಿನಲ್ಲಿ' ಪ್ರವಾಸ ಕಥನ ಕನ್ನಡ ದೇಶೀಯ ಪ್ರವಾಸ ಕಥನಗಳ ಸಾಲಿಗೆ ಸೇರುತ್ತಿರುವ ವಿಶಿಷ್ಟ ಕೃತಿ, ಇದು ಡಾ. ಅರ್ಚನಾ ಅಥಣಿ ಅವರ ಮೊದಲ ಪ್ರವಾಸ ಕಥನವಾಗಿದ್ದರೂ ಪ್ರೌಢ ಬರವಣಿಗೆ, ಆಪ್ತ
Share

Subscribe to our emails
Subscribe to our mailing list for insider news, product launches, and more.