Vasumathi Udupa
Publisher - ಅಂಕಿತ ಪುಸ್ತಕ
- Free Shipping
- Cash on Delivery (COD) Available
Pages -
Type -
Couldn't load pickup availability
ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು.
ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು 'ಬಂದನಾ ಹುಲಿರಾಯ', 'ಆಗ್ನಿದಿವ್ಯ', 'ಮೃಗತೃಷ್ಣಾ', 'ಪಾತಾಳ ಗರಡಿ', 'ನಮ್ಮ ನಡುವಿನ ಕಾಂತಾಮಣಿಯರು', 'ಅಂತರಂಗದ ಪಿಸುನುಡಿ', 'ಸಂಕ್ರಮಣ', 'ಬದುಕು ಮಾಯೆಯ ಮಾಟ' ಇವರ ಪ್ರಮುಖ ಕಥಾ ಸಂಕಲನಗಳು, ಕಥೆಗಳಂತೆಯೇ 'ಪರಿವರ್ತನೆ' 'ಸಂಬಂಧಗಳು', 'ವಿಮೋಚನ' ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.
ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸಿದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ.
ಮನ ಮಿಡಿಯುವ 'ಸಂಕ್ರಮಣ' ಮತ್ತು 'ಅಂತರಂಗದ ಪಿಸುನುಡಿ' ವಸುಮತಿ ಅವರ ಇತ್ತೀಚಿನ ಕಥಾ ಸಂಕಲನಗಳು.
