Dr. Lakshmana Kounte
Publisher - ವೀರಲೋಕ ಬುಕ್ಸ್
Regular price
Rs. 420.00
Regular price
Rs. 420.00
Sale price
Rs. 420.00
Unit price
per
- Free Shipping Above ₹200
- Cash on Delivery (COD) Available
Pages - 348
Type - Hardcover
"ಎಲ್ಲರೂ ಋಜುಮಾರ್ಗದಲ್ಲಿಯೇ ಕ್ರಮಿಸಲಾರರು ಮಹಾರಾಜ, ನಿಮ್ಮ ಪುತ್ರರಾದರೂ ಸಾಮಾನ್ಯ ಜನರಲ್ಲಿ ಒಬ್ಬರು. ನೀವು ವಿಶೇಷ ವ್ಯಕ್ತಿಗಳು. ಆ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡವರು. ನಿಮ್ಮೊಂದಿಗೆ ಅವರ ವರ್ತನೆಗಳನ್ನು ಹೋಲಿಸುವುದು ಹೇಗೆ? ಸ್ವಾಮಾನ್ಯರು ಸ್ವಭಾವತಃ ಚಂಚಲಚಿತ್ತರು. ಅನುಕೂಲ ಸಿಂಧು ಪ್ರವೃತ್ತಿಯವರು. ಲೌಕಿಕ ಹಿತಾಸಕ್ತರು ಲಾಭ ನಷ್ಟಗಳ ಹಿನ್ನೆಲೆಯನ್ನಿಟ್ಟುಕೊಂಡು ವ್ಯವಹರಿಸುವರು. ಅಂತೆಯೇ ಅವರು ಹಿಡಿದ ಮಾರ್ಗವನ್ನು ಮತ್ತೆ ಮತ್ತೆ ಬದಲಿಸುತ್ತಲೇ ಇರುತ್ತಾರೆ. ಅವರಿಗೆ ಲೌಕಿಕ ಸುಖ ಬೇಕು, ಕೇವಲ ಆಧ್ಯಾತ್ಮ ಬೇಡ. ವೇದಾಂತ ಅವರಿಗೆ ಹಿಡಿಸುವುದಿಲ್ಲ. ವೇದನೆಯಲ್ಲಿಯೇ ಅವರು ಸುಖವನ್ನು ಅರಸುತ್ತಾರೆ. ಅದೆ ಷ್ಟೇ ದುಃಖದಲ್ಲಿ ಮುಳುಗಿದರೂ ಅವರು ಸುಖದ ನಿರೀಕ್ಷೆಯನ್ನು ಬಿಡಲಾರರು. ಜನರು ಆಧ್ಯಾತ್ಮವನ್ನು ಅವಲಂಬಿಸಿ ನಡೆದರೆ ಆಳುವ ದೊರೆಗಳು ಬಹುಪಾಲು ನಿಶ್ಚಿಂತೆಯಿಂದ ಇರಬಹುದು. ಆದರೆ.."