Shridhar. S
ಅಲೆಮಾರಿಯ ಅಂತರಂಗ
ಅಲೆಮಾರಿಯ ಅಂತರಂಗ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 128
Type - Paperback
Couldn't load pickup availability
ಕೃತಕೃತ್ಯರು
ಶ್ರೀಮತಿ ರತ್ನರಾಮದಾಸ್ರವರು ಸಂಪ್ರದಾಯಸ್ಥ ಮನೆತನದಿಂದ ಬಂದ ಸದ್ಗ್ರಹಿಣಿ. ಇವರು ಈಗ 75 ಸಂವತ್ಸರಗಳನ್ನು ಕಂಡು, ಜೀವನದಲ್ಲಿ ಕಷ್ಟ-ಸುಖಗಳನ್ನು ಸರಿಸಮಾನವಾಗಿ ಅನುಭವಿಸಿ ಸಾರ್ಥಕ ಬದುಕನ್ನು ಕಂಡು ಕೊಂಡವರು.
ಪತಿಗೆ ತಕ್ಕ ಸದ್ಗ್ರಹಸ್ತ ಪತ್ನಿಯಾಗಿ, ಮಕ್ಕಳಿಗೆ ವಾತ್ಸಲ್ಯಮಯಿ ತಾಯಿಯಾಗಿ, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾದ ಸಂಸ್ಕಾರಗಳನ್ನು ನೀಡಿ, ಅವರನ್ನು ತಿದ್ದಿ-ತೀಡಿ, ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಸುಸಂಸ್ಕೃತರನ್ನಾಗಿ ಮಾಡಿದ ಮೊದಲ ಗುರುವಾಗಿದ್ದಾರೆ.
ಎಷ್ಟೋ ವರ್ಷಗಳಿಂದ ಪರಿತಪಿಸುತ್ತಿದ್ದ ಸಾಹಿತ್ಯಾಭಿರುಚಿಯು ತಮ್ಮ 70ನೇ ವಯಸ್ಸಿನಲ್ಲಿ ಭುಗಿಲೆಬ್ಬಿದುದು ಕಾಕತಾಳೀಯ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿ ತಮ್ಮ ಅನುಭವ – ಸಂಗ್ರಹಗಳಿಂದ ಕ್ರೋಡೀಕರಿಸಿ ನಿತ್ಯ ಅಡುಗೆಗೆ ಸಂಬಂದಿತ "ಪಾಕಶಾಸ್ತ್ರ" ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಿ ಅದರಲ್ಲಿ ಸಫಲರಾಗಿ-ಯಶಸ್ವಿಯಾಗಿದ್ದಾರೆ.
ಯಾವುದೇ ಕ್ಲಿಷ್ಟ ಪದಗಳನ್ನು-ಶಬ್ದಗಳನ್ನು ಎಲ್ಲಿಯೂ ಬಳಸದೇ ಅತ್ಯಂತ ಸರಳವಾಗಿ ನೇರವಾಗಿ ಎಲ್ಲರ ಮನಸ್ಸಿಗೆ ತಲುಪುವಂತೆ ಕೃತಿಯನ್ನು ರಚಿಸಿರುವ ಶ್ರೀಮತಿಯವರು ತಮ್ಮ ಮೊದಲನೇ ಪ್ರಯತ್ನದಲ್ಲಿಯೇ ಓದುಗರ ಮೆಚ್ಚುಗೆಗೆ ಪಾತ್ರರಾಗುವುದರಲ್ಲಿ ಸಂಶಯವೇ ಇಲ್ಲ.
"ಪಾಕಶಾಸ್ತ್ರ"- ಪಾರಂಪರಿಕ ಸವಿರುಚಿಯ ಸಸ್ಯಹಾರಿ ಸಾಂಪ್ರದಾಯಿಕ ಸರಳ ಅಡುಗೆಗಳಿಂದ ಕೂಡಿರುವ ಈ ಕೃತಿಯಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಸಾಯಂಕಾಲದ ತಿಂಡಿ, ಪಾನೀಯಗಳು, ವಿಶೇಷ ಭಕ್ಷಗಳು ಹಾಗೂ ರಾತ್ರಿಯ ಭೋಜನಗಳಿಗನುಸಾರವಾಗಿ ವಿವಿಧ ರೀತಿಯ ಹತ್ತು-ಹಲವು ಬಗೆಗಳ ಅಡುಗೆಗಳ ವಿಧಾನಗಳನ್ನು ಪರಿಚಯಿಸಿ ಪಾಕಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ.
ಗೃಹಿಣಿಯಿಂದಾದಿಯಾಗಿ ಎಲ್ಲ ವಯೋಮಾನದವರಿಗೂ ಪಾಕ ಪ್ರವೀಣರಿಗೂ ಉಪಯುಕ್ತವಾಗಿರುವ ಈ ಪುಸ್ತಕವನ್ನು ಆಸಕ್ತರು ಕೊಂಡು ಅಕ್ಕರೆಯಿಂದ ಸ್ವೀಕರಿಸಿ ಪ್ರಯೋಜವನ್ನು ಪಡೆದಾಗ ಕೃತಿಕಾರರ ಶ್ರಮವು ಸಾರ್ಥಕಗೊಳ್ಳುತ್ತದೆ.
ಅತ್ಯಂತ ಅಚ್ಚುಕಟ್ಟಾಗಿ ಈ ಬೃಹತ್ ಕೃತಿಯನ್ನು ರಚಿಸಿ-ಪ್ರಕಾಶಿಸಿ ಲೋಕಾರ್ಪಣೆ ಮಾಡುತ್ತಿರುವ ಶ್ರೀಮತಿ ರತ್ನರಾಮದಾಸ್ರವರು ಅಭಿನಂದನಾರ್ಹರು.
-ಕೆ.ಸಿ. ಪ್ರಭಾಕರ್
Share

Subscribe to our emails
Subscribe to our mailing list for insider news, product launches, and more.