Dr. Vijayashree Sabarada
ಅಕ್ಕಮಹಾದೇವಿ ಜೀವನ - ಸಾಧನೆ
ಅಕ್ಕಮಹಾದೇವಿ ಜೀವನ - ಸಾಧನೆ
Publisher - ಕನ್ನಡ ಸಾಹಿತ್ಯ ಪರಿಷತ್ತು
- Free Shipping Above ₹400
- Cash on Delivery (COD) Available*
Pages - 184
Type - Paperback
Couldn't load pickup availability
ಕನ್ನಡ ಸಾಹಿತ್ಯ ಪರಿಷತ್ತು ಕರುನಾಡಿನ ಗಾಳಿ-ಬೆಳಕು, ಕಸಾಪ ಎಂಬುದು ಕನ್ನಡಿಗರ ಪಾಲಿನ ಮೂರಕ್ಷರದ ಮಹಾಮಂತ್ರ ಶತಮಾನ ದಾಟಿದ ಪರಿಷತ್ತು ಕನ್ನಡಿಗರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಪರಿ ಅಭೂತಪೂರ್ವ.
ಪರಿಷತ್ತು ತನ್ನ ಪ್ರಕಟಣೆಗಳ ಮೂಲಕ ಕನ್ನಡಿಗರ ಬೌದ್ಧಿಕ ಹಸಿವನ್ನು ನೀಗಿಸುತ್ತಿದೆ. ಅವರ ಅರಿವಿನ ಕ್ಷಿತಿಜಗಳನ್ನು ವಿಸ್ತರಿಸುತ್ತಿದೆ. ಪರಿಷತ್ತು ಗಂಟೆಗಿಂತ ನಿಘಂಟಿಗೆ, ಅನ್ನಕ್ಕಿಂತ ಅರಿವಿಗೆ ಒತ್ತು ನೀಡಿದೆ. ಅದರದು ನಿರಂತರ ಅಕ್ಷರ ದಾಸೋಹ ! ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಕನ್ನಡಿಗರ ಮಡಿಲಿಗಿರಿಸಿದ ಕೀರ್ತಿ ಪರಿಷತ್ತಿನದು.
ಪರಿಷತ್ತಿನ ಪ್ರಕಟಣೆಗಳು ಓದುಗರಿಗೆ ಸುಲಭವಾಗಿ ಲಭಿಸುವಂತಾಗಲು ವಿತರಣಾ ಜಾಲವನ್ನು ದೃಢಗೊಳಿಸಲಾಗುವುದು. ಅವು ಆನ್ ಲೈನ್ ಮೂಲಕವೂ ಮಾರಾಟಕ್ಕೆ ಲಭ್ಯವಾಗಲಿವೆ. ಮುದ್ರಣ ವಿಧಾನದಲ್ಲಿ ಆಗಿರುವ ಎಲ್ಲ ತಾಂತ್ರಿಕ ಆವಿಷ್ಕಾರಗಳನ್ನೂ ಬಳಸಿಕೊಂಡು ಪುಸ್ತಕಗಳ ವಿನ್ಯಾಸವನ್ನು ಆಕರ್ಷಕ ಗೊಳಿಸಲಾಗುವುದು. ಇ-ಪುಸ್ತಕಗಳನ್ನೂ ಹೊರತರಲಾಗುವುದು.
ಪಂಡಿತಮಾನ್ಯವಾದ ಕೃತಿಗಳ ಪ್ರಕಟಣೆ ಮುಂದುವರೆಯಲಿದೆ. ಇದರ ಜೊತೆಗೆ ಜನಸಾಮಾನ್ಯರಿಗೆ ಉಪಯುಕ್ತವಾಗುವಂತಹ ಕೃತಿಗಳನ್ನೂ ಹೊರತರಲಾಗುವುದು. ಇದಕ್ಕಾಗಿ 'ಜನಪ್ರಿಯ ಪುಸ್ತಕಮಾಲೆ'ಯನ್ನು ಆರಂಭಿಸಲಾಗುವುದು. ತನ್ನ ಪ್ರಕಟಣೆಗಳ ಮಾರಾಟವನ್ನು ವಿಕೇಂದ್ರೀಕರಿಸುವ ಉದ್ದೇಶವೂ ಪರಿಷತ್ತಿಗಿದೆ. ಪುಸ್ತಕ ಮನಸ್ಕತೆಯನ್ನು ಹೆಚ್ಚಿಸುವಂತಹ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು.
ಇದೀಗ ಮರುಮುದ್ರಣವಾಗಿರುವ ಅಕ್ಕಮಹಾದೇವಿ ಕೃತಿಯಲ್ಲಿ ಅಕಮಹಾದೇವಿಯ ವಚನಗಳಲ್ಲಿನ ಕಾವ್ಯ ಸೌಂದರ್ಯವನ್ನು ಹಾಗೂ ಅಕ್ಕನ ಬದುಕಿನ ವಿಶಿಷ್ಟ ಘಟನೆಗಳನ್ನು ಕಟ್ಟಿಕೊಡಲಾಗಿದೆ ಈ ಕೃತಿಯನ್ನು ಕನ್ನಡ ಜನರು ಅತ್ಯಂತ ಆಧಾರದಿಂದ ಸ್ವೀಕರಿಸುವವರೆಂದು ನಂಬಿಕೆ ಇದೆ
Share

Subscribe to our emails
Subscribe to our mailing list for insider news, product launches, and more.