Vivekananda Kamath
ಅಜ್ಞಾತ
ಅಜ್ಞಾತ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 184
Type - Paperback
Couldn't load pickup availability
ಬದುಕಿನಲ್ಲಿ ವಿಪರೀತ ನೊಂದಾಗ ವ್ಯಕ್ತಿಯ ಬಾಳಲ್ಲಿ ವೈರಾಗ್ಯ ಪ್ರವೇಶಿಸುತ್ತದೆ. ಸಮಾಜದ ಸಹವಾಸ ಸಾಕೆನ್ನಿಸಿ, ಪ್ರಕೃತಿಯ ಸನ್ನಿಧಿಯಲ್ಲಿ ನೆಮ್ಮದಿಯನ್ನು ಪಡೆಯಲು ಮನಸ್ಸು ಹಪಹಪಿಸುತ್ತದೆ. ಮನುಷ್ಯ ನಿರ್ಮಿತ ಮತ್ತು ವ್ಯವಸ್ಥೆಗಳೆಲ್ಲವೂ ಅಸಹ್ಯವನ್ನು ತರಿಸಿದರೆ, ನಿಸರ್ಗ ಸೃಷ್ಟಿ ಮಾತ್ರ ಸತ್ಯವೆನ್ನಿಸುತ್ತದೆ. ಆದರೆ ಈ ವೈರಾಗ್ಯಭಾವ ಶಾಶ್ವತವೇ? ಮನುಷ್ಯ ಯಾವತ್ತೂ ಸಂಘಜೀವಿ ಅಲ್ಲವೇ? ಕಾಡಿನಲ್ಲಿ ಹೋಗಿ ಬದುಕು ಮಾಡಿದರೂ, ಅದು ಹೇಗೋ ನಾಡು ನಮ್ಮನ್ನು ಸಡಿಲ ಮಣ್ಣಿನ ಕೆಸರಿನಂತೆ ನಮ್ಮ ಅರಿವಿಗೂ ತಿಳಿಯದಂತೆ ಒಳಕ್ಕೆ ಎಳೆದುಕೊಳ್ಳುತ್ತಾ ಹೋಗುವುದಿಲ್ಲವವೇ? ಹಾಗಿದ್ದರೆ ಮನುಷ್ಯನ ಶಾಶ್ವತ ಆಯ್ಕೆ ಯಾವುದಿರಬೇಕು ? ನಿಸರ್ಗವೇ ಅಥವಾ ಸಂಘಜೀವನವೇ? ನಮ್ಮ ನತದೃಷ್ಟ ಬದುಕಿಗೆ ಕೇವಲ ವಿಧಿ ಮಾತ್ರ ಕಾರಣವೋ ಅಥವಾ ಆಸೆಬುರುಕ ಸಮಾಜವು ಕೆಡುಕನ್ನು ತಂದೊಡ್ಡುತ್ತದೆಯೋ?
ಮೇಲಿನೆಲ್ಲಾ ಅಧ್ಯಾತ್ಮಿಕ ಪ್ರಶ್ನೆಗಳನ್ನು ತಮ್ಮೆದುರು ಇಟ್ಟು ಕೊಂಡು ವಿವೇಕಾನಂದ ಕಾಮತ್ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ. ಅತ್ಯಂತ ಸರಳ ಭಾಷೆ, ನಿತ್ಯ ಕಣ್ಣೆದುರೇ ನಡೆವ ಸಂಗತಿಗಳು, ತಡವರಿಸದ ನಡೆಯಲ್ಲಿ ಅವರು ಕತೆ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಹಲವು ಕಾದಂಬರಿಗಳನ್ನು ಈಗಾಗಲೇ ಬರೆದಿರುವುದರಿಂದ, ಶ್ರೀಸಾಮಾನ್ಯನು ಪುಸ್ತಕದ ಓದಿನಲ್ಲಿ ಬಯಸುವುದೇನು ಎನ್ನುವುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಓದಿನ ಓಘಕ್ಕೆ ತೊಂದರೆಯಾಗದಂತೆ ಸುಲಲಿತವಾಗಿ ಕತೆ ಹೇಳುವುದು ಅವರಿಗೆ ಸಿದ್ದಿಸಿದೆ. ಅಪರಿಚಿತ ದೇಶಗಳನ್ನೂ ತಮ್ಮ ಕಥನಕ್ಕೆ ಒಗ್ಗಿಸಿಕೊಳ್ಳುವ ಪ್ರಬುದ್ಧತೆ ಅವರಿಗೆ ದಕ್ಕಿದೆ.
Share

Subscribe to our emails
Subscribe to our mailing list for insider news, product launches, and more.