Dr. Ramalingappa T. Begur
ಆಚಾರ ವಿಚಾರ
ಆಚಾರ ವಿಚಾರ
Publisher -
- Free Shipping Above ₹400
- Cash on Delivery (COD) Available*
Pages - 168
Type - Paperback
Couldn't load pickup availability
ರಾಮಲಿಂಗಪ್ಪ ಬೇಗೂರು ಅವರು ನಮ್ಮ ನಡುವಿನ ಮಹತ್ವದ ಲೇಖಕ - ವಿಮರ್ಶಕ - ಚಿಂತಕ. ಅವರ ವಿಭಿನ್ನ, ವಿಶಿಷ್ಟ ಒಳನೋಟಗಳಿರುವ ಲೇಖನಗಳ ಸಂಕಲನ 'ಆಚಾರ-ವಿಚಾರ'.
'ಬುಕ್ ಬ್ರಹ್ಮ'ದಲ್ಲಿ ಪ್ರಕಟವಾಗುವ 'ನೀರು ನೆರಳು' ಅಂಕಣ ಬರಹದ ಭಾಗವಾಗಿ ಪ್ರಕಟವಾದ ಲೇಖನಗಳ ಆಯ್ದ ಬರೆಹಗಳು ಈ ಸಂಕಲನದಲ್ಲಿವೆ. ಸಮಕಾಲೀನ ಸಂಗತಿ-ವಿದ್ಯಮಾನಗಳಿಗೆ ಮುಖಾಮುಖಿಯಾದ ಸಂವೇದನಾಶೀಲ ಮನಸ್ಸು ಕಟ್ಟಿದ ಕಥನ ಈ ಬರೆಹಗಳ ವಸ್ತು.
ಇಲ್ಲಿನ ವಸ್ತುವಿನ ವೈವಿಧ್ಯ ಗಮನ ಸೆಳೆಯುವ ಸಂಗತಿ. ವಸ್ತುವಿನ ಆಯ್ಕೆಯಲ್ಲಿ ತಮ್ಮದೇ 'ಸಹಿ' ಹೊಂದಿರುವ ರಾಮಲಿಂಗಪ್ಪ ಅವರು ಅದನ್ನು ಸೊಗಸಾಗಿ ಕಟ್ಟಿ ಬೆಳೆಸಿದ್ದಾರೆ ಕೂಡ. ವೈಚಾರಿಕತೆಯ ಸ್ಪರ್ಶ ಪಡೆದಿರುವ ಈ ಬರೆಹಗಳು ಅದೇ ಕಾರಣಕ್ಕಾಗಿ ಇಷ್ಟವಾಗುತ್ತವೆ. ಓದುತ್ತ ಹೋದಂತೆ ಅನಾವರಣಗೊಳ್ಳುವಂತೆ ಕಟ್ಟಿರುವ ಶೈಲಿ ಮನಮುಟ್ಟುವ ಹಾಗಿದೆ.
ಯಾವುದೇ ರೀತಿಯ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಬರೆಯುವ ಅವರ ವಿಷಯದ ಖಚಿತತೆ ಅದು ಭಾಷೆಯಲ್ಲಿ ಅಭಿವ್ಯಕ್ತವಾಗುವ ಸೊಬಗು ಓದಿನ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಇವರ ದೇಸಿ ನುಡಿಗಟ್ಟನ್ನು ಬಳಸುವ ರೀತಿ ಬೆರಗುಗೊಳಿಸುವ ಹಾಗಿದೆ.
-ದೇವು ಪತ್ತಾರ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.