Dr. K. Balagopal, To Kannada : Dr. Banjagere Jayakprakasha
ಅಭಿವೃದ್ಧಿ ಎಂಬ ವಿನಾಶ
ಅಭಿವೃದ್ಧಿ ಎಂಬ ವಿನಾಶ
Publisher -
- Free Shipping Above ₹400
- Cash on Delivery (COD) Available*
Pages - 209
Type - Paperback
Couldn't load pickup availability
ಈಗ ನ್ಯಾಯಾಲಯಗಳು ತುಂಬಾ ದೂರ ಹೋಗಿ ಸಂವಿಧಾನದ ನಿರ್ದೇಶನ ಸೂತ್ರಗಳಲ್ಲಿ ಒಳಗೊಂಡಿರುವ ಒಂದೊಂದು ವಿಷಯವನ್ನೂ ಮೂಲಭೂತ ಹಕ್ಕುಗಳ ಪಟ್ಟಿಗೆ ತರುತ್ತಿವೆ. ಬದುಕುವ ಹಕ್ಕನ್ನು ಮೊದಲೇ ನಾನು ಹೇಳಿದ್ದೆ. ಕಾನೂನಿನ ಪ್ರಕಾರ ಹೊರತುಪಡಿಸಿ ಯಾರ ಪ್ರಾಣವನ್ನೂ ತೆಗೆಯಲಾಗುವುದಿಲ್ಲ: ಜೀವಿಸುವುದೆಂದರೆ ಬದುಕಿ ಉಳಿದಿರುವುದು ಎನ್ನುವ ಅರ್ಥದಲ್ಲಿ ವ್ಯಾಖ್ಯಾನಿಸುತ್ತಾ ಬಂದ ನ್ಯಾಯಾಲಯವು ಉನ್ನಿಕೃಷ್ಣನ್ ಪ್ರಕರಣದಲ್ಲಿ ಶಿಕ್ಷಣವು ಕೂಡ ಜೀವನದ ಒಂದು ಭಾಗವಾಗಿರುವುದರಿಂದ ಶಿಕ್ಷಣವೂ ಒಂದು ಮೂಲಭೂತ ಹಕ್ಕು ಎಂದಿತು. ಶಿಕ್ಷಣ ಮೂಲಭೂತ ಹಕ್ಕಾಗಿದ್ದು ಹೇಗೆ? ಜೀವನ ಮತ್ತು ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕುಗಳು ಏನಿವೆಯೋ ಅವುಗಳಲ್ಲಿ ಶಿಕ್ಷಣ, ಆರೋಗ್ಯ, ಸ್ವಚ್ಛ ಪರಿಸರ ಮತ್ತು ವಸತಿಗಳು ಕೂಡಾ ಸೇರಿವೆ. ನ್ಯಾಯಾಲಯಗಳು ಕ್ರಮೇಣ ಈ ಬಗೆಯಲ್ಲಿ ವ್ಯಾಖ್ಯಾನ ಮಾಡುತ್ತಾ ಬರುತ್ತಿವೆ. ಉನ್ನಿಕೃಷ್ಣನ್ ಪ್ರಕರಣದಲ್ಲಿ ಶಿಕ್ಷಣವೂ ಅದರ ಭಾಗವೇ ಎಂದ ಮೇಲೆ ನಂತರದ ಮೋಹಿನಿ ಜೈನ್ ಪ್ರಕರಣದಲ್ಲಿ ಎಂದು ಕಾಣುತ್ತದೆ. ಪ್ರಾಥಮಿಕ ಶಿಕ್ಷಣ ಮಾತ್ರ ಬದುಕುವ ಹಕ್ಕಿನ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಪೂರ್ಣಪೀಠ ಹೇಳಿತು. ಅಂದರೆ, ಪ್ರಾಥಮಿಕ ಶಿಕ್ಷಣ ಎನ್ನುವುದು ಎಲ್ಲರಿಗೂ ಇರಲೇಬೇಕೆಂಬ ಸಂಕ್ಷೇಮದ ಗುರಿ ಏನಿದೆಯೋ, ಈಗ ಅದು ಮೂಲಭೂತ ಹಕ್ಕುಗಳ ಭಾಗ ಎಂದು ನಮ್ಮ ನ್ಯಾಯಾಲಯಗಳು ಅರ್ಥೈಸುತ್ತಿವೆ.
('ಸರ್ಕಾರ-ಸಂಕ್ಷೇಮ' ಪ್ರಬಂಧದಿಂದ)
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.