Gauri Lankesh
'ಆವರಣ' ಎಂಬ ವಿ-ಕೃತಿ
'ಆವರಣ' ಎಂಬ ವಿ-ಕೃತಿ
Publisher - Lankesh Prakashana
- Free Shipping Above ₹400
- Cash on Delivery (COD) Available*
Pages - 155
Type - Paperback
Couldn't load pickup availability
ಐದು ಆರನೆಯ ಮುದ್ರಣ ಎಂದೆಲ್ಲ ಹೇಳ್ತಾರಲೀ, ಇದು ಆನ್ರೀಡಬಲ್ ಸ್ಟಫ್. ಯಾರೀ ಇದನ್ನು ಓದುವವರು ?
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಬರೆಯುವಾಗ ಹೇಗೆ ಭೈರಪ್ಪನವರು ಇಂತಹವನ್ನು ಬರೆಯುತ್ತಾರೆಂದರೆ ಪ್ರಶ್ನೆಗಳನ್ನು ಎತ್ತಬೇಕು: ಆದರೆ ಅವರ ಮನಸ್ಸಿನಲ್ಲಿ ಅವರಿಗೇ ಇಷ್ಟವಿರುವ ಉತ್ತರ ಸಿಗುವ ಹಾಗೆ ಅದಕ್ಕೊಂದು ಬೆಳವಣಿಗೆಯನ್ನು ಕಟ್ಟಬೇಕು - ಹಾಗೆ. ಡಿಬೇಟರ್ ಕಟ್ಟುವ ಹಾಗೆ. ಪ್ರಶ್ನೆಗಳನ್ನು ಎತ್ತಿದಹಾಗೆ ಕಾಣಬೇಕು; ಆದರೆ ತಮಗೆ ನೆಮ್ಮದಿಯಾಗುವ ಯಥಾಸ್ಥಿತಿಯನ್ನು ಎತ್ತಿಹಿಡಿಯುವ ಉತ್ತರ ಸಿಗಬೇಕು. ಮಾಂಸದ ರುಚಿಯೂ ಬೇಕು; ಮಡಿಯೂ ಉಳಿಯಬೇಕು ಎನ್ನುವವರು ವೆಜಿಟಬಲ್ ಬಿರಿಯಾನಿ ತಿನ್ನುವ ಹಾಗೆ.
ಡಾ. ಯು. ಆರ್. ಅನಂತಮೂರ್ತಿ
'ಆವರಣ'ವನ್ನು ಒಂದು ಕಾದಂಬರಿಯಾಗಿ ನೋಡುವುದರಲ್ಲಿ ಅನೇಕ ಸಮಸ್ಯೆಗಳಿವೆ. ಕಾರಣ ಅದು ಬದುಕಿನ ಅನುಭವ ಶೋಧಿಸುವ ವಿಧಾನದಲ್ಲಿ ಹುಟ್ಟಿದ ಕೃತಿಯಲ್ಲ. ಬದಲಿಗೆ ಒಂದು ರಾಜಕೀಯ ಸಿದ್ಧಾಂತಕ್ಕೆ ಪೂರಕವಾಗಿ, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಬೇಕಾದ್ದನ್ನು ಆರಿಸಿ ಕಟ್ಟಿ ಕಾದಂಬರಿಯ ವೇಷದಲ್ಲಿ ಮಂಡಿಸಿರುವ ಬರೆಹ.
-ರಹಮತ್ ತರೀಕೆರೆ
ಆರೆಸ್ಸೆಸ್ಗಳ ನೀಚತನವನ್ನು ತೋರುವ ಕೃತಿ ಇದು. ಕಾದಂಬರಿಯಂತೂ ಅಲ್ಲ. ಭೈರಪ್ಪನವರ ಬರಡುತನವನ್ನು ಮಾತ್ರ ನಿಚ್ಚಳವಾಗಿ ತೋರುವ ಪುಸ್ತಕ.
- ಪಿ. ಲಂಕೇಶ್Article
Share

Subscribe to our emails
Subscribe to our mailing list for insider news, product launches, and more.