Skip to product information
1 of 2

Dr. Saaswehalli Satheesh

ಏಸೂರು ಕೊಟ್ಟರೂ ಈಸೂರು ಕೊಡೆವು

ಏಸೂರು ಕೊಟ್ಟರೂ ಈಸೂರು ಕೊಡೆವು

Publisher -

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 80

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಅಂತಿಮ ಘಟ್ಟಗಳಲ್ಲೊಂದಾದ ಕ್ವಿಟ್ ಇಂಡಿಯಾ ಚಳವಳಿಯೇ ರೋಮಾಂಚನ ಉಂಟುಮಾಡುವಂತಹದ್ದು. ಈ ಅಂತಿಮ ಹೋರಾಟದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನ ಜನತೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಳವಳಿಯ ಕಾವು ತೀವ್ರವಾಗುವಂತೆ ನೋಡಿಕೊಂಡಿದ್ದರು ಎಂಬುದು ಇತಿಹಾಸ.

ಈಸೂರಿನ ಘಟನೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. 'ಏಸೂರು ಕೊಟ್ಟರೂ ಈಸೂರು ಕೊಡೆವು' ಎಂಬ ಘೋಷಣೆಯೇ ಹೋರಾಟಕ್ಕೆ ಕಿಚ್ಚು ಹಚ್ಚುವಂತಾದದ್ದು. ಪೂರ್ಣ ಭಾರತ ದೇಶದಲ್ಲಿಯೇ 'ಮೊದಲ ಸ್ವತಂತ್ರ ಗ್ರಾಮ' ಎಂದು ಘೋಷಿಸಿಕೊಂಡು, ತನ್ನೂರಿನ ಮಕ್ಕಳನ್ನೇ ಸರ್ಕಾರದ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು, ತನ್ನದೇ ಆದ ಕಾನೂನುಗಳನ್ನು, ನೀತಿ-ನಿಯಮಗಳನ್ನು ಮಾಡಿಕೊಂಡು ಆಡಳಿತ ನಡೆಸಿದ ಹೆಗ್ಗಳಿಕೆ ಈಸೂರಿನದು.

ಯಾವೊಬ್ಬ ಸರ್ಕಾರಿ ಅಧಿಕಾರಿಯೂ ಅನುಮತಿ ಇಲ್ಲದೇ ಗ್ರಾಮ ಪ್ರವೇಶ ಮಾಡುವಂತಿರಲಿಲ್ಲ. ಇದನ್ನು ಮೀರಿದ ಘಟನೆಯೊಂದರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಕೊಲ್ಲಲ್ಪಡುತ್ತಾರೆ. ಪರಿಣಾಮ ಈಸೂರಿನ ಐವರು ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲುಶಿಕ್ಷೆಯಾಗಿ ಹುತಾತ್ಮರಾಗುತ್ತಾರೆ. ಇಂತಹ ಅಪ್ರತಿಮ ದೇಶಭಕ್ತರ ಸತ್ಯಕತೆಯನ್ನು ನಾಟಕ ಉಪ್ಪೇಕ್ಷೆ ಇಲ್ಲದೆ ಹೇಳುತ್ತದೆ.
View full details

Talk about your brand

Share information about your brand with your customers. Describe a product, make announcements, or welcome customers to your store.