Swamy Shivatmananda
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಯಾವುದೇ ಸಾಹಿತ್ಯವನ್ನು ಕಥೆಗಳ ಮೂಲಕ ಓದುವುದರಲ್ಲಿ ಒಂದು ಆನಂದವಿದೆ. ಅದರಲ್ಲೂ ಅಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವ ಕಥೆಗಳಂತೂ ಇನ್ನೂ ಆಪ್ಯಾಯಮಾನ, ಸ್ವಾಮಿ ಶಿವಾತ್ಮಾನಂದರು ಪುರಾಣಗಳ ಆಳ ಅಧ್ಯಯನ ಮಾಡಿ, ಒಂಬತ್ತು ಕಥೆಗಳ ಮೂಲಕ ಹಲವಾರು ದೇವತೆಗಳ, ದೇವಸ್ಥಾನಗಳ ಇತಿಹಾಸವನ್ನು ನಮ್ಮ ಮುಂದೆ ಕಣ್ಣು ಕಟ್ಟುವಂತೆ ತಮ್ಮ ಕಾವ್ಯಮಯ ಭಾಷೆಯಿಂದ ಬರೆದು ಮಹದುಪಕಾರ ಮಾಡಿದ್ದಾರೆ.
-ಸ್ವಾಮಿ ರಾಘವೇಶಾನಂದಜೀ ಮಹಾರಾಜ್
ಅಖಂಡ ವಿಶ್ವದ ಅಧ್ಯಾತ್ಮಿಕ ರಾಜಧಾನಿ ಎನ್ನಬಹುದಾದ ಈ ಪುಣ್ಯಭೂಮಿ ನಮ್ಮ ದೇಶ ಜಗತ್ತಿನ ಎಲ್ಲ ಅಧ್ಯಾತ್ಮಿಕರನ್ನು, ಯೋಗಸಾಧಕರನ್ನು ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತದೆ. ಈ ಮಣ್ಣಿನ ಗುಣವೇ ಹಾಗೆ, ಇಲ್ಲಿ ಎಲ್ಲವೂ ಪವಿತ್ರವಾದುದೇ. ಇಲ್ಲಿನ ನೆಲ, ಜಲ, ಅಗ್ನಿ, ವಾಯು, ಅನಲ, ಸಕಲ ಪ್ರಾಣಿ ಪಕ್ಷಿ ಸಸ್ಯವೃಕ್ಷ ಚರಾಚರಗಳೂ ಪೂಜನೀಯವೇ. ನಮ್ಮ ಈ ಭಕ್ತಿಭಾವದ ಆಚರಣೆಗೆ ಪುರಾಣಗಳ ಪುರಾವೆಯೂ ಸೇರಿದಂತೆ, ವೈಜ್ಞಾನಿಕ ತಳಹದಿಯೂ ಇರುವುದು ಇತ್ತೀಚಿನ ಸಂಶೋಧನೆಗಳಿಂದ ಸಾಬೀತಾಗುತ್ತಿದೆ. ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ವ್ಯಕ್ತಿ, ವಸ್ತು, ವಿಷಯ ಹಾಗೂ ಘಟನೆಗಳ ಹಿಂದೆ ಸಾಮಾನ್ಯ ದೃಷ್ಟಿಕೋನಕ್ಕೆ ನಿಲುಕದ ಯೋಗಸಾಧಕರ ಅಂತಃಚಕ್ಷುಗಳಿಗೆ ಮಾತ್ರ ದರ್ಶನವಾಗುವ ಹಲವಾರು ಸತ್ಯಸಂಗತಿಗಳಿವೆ. ಸ್ವಾಮಿ ಶಿವಾತ್ಮಾನಂದರ 'ಶ್ರೀತುಲಸೀ ಅಮೃತಪಾನ' ಕಥಾ ಸಂಕಲನವು ಈ ಬಗೆಯ ಹಲವಾರು ಪುರಾಣಗಳ ಹಾಗೂ ಅಧ್ಯಾತ್ಮದ ಸೂಕ್ಷ್ಮತೆಯನ್ನು ಮನೋಜ್ಞವಾಗಿ ವಿವರಿಸುತ್ತದೆ.
-ಜಗದೀಶ ಸಾಗರ್ ಬಿ.ಜಿ
-ಸ್ವಾಮಿ ರಾಘವೇಶಾನಂದಜೀ ಮಹಾರಾಜ್
ಅಖಂಡ ವಿಶ್ವದ ಅಧ್ಯಾತ್ಮಿಕ ರಾಜಧಾನಿ ಎನ್ನಬಹುದಾದ ಈ ಪುಣ್ಯಭೂಮಿ ನಮ್ಮ ದೇಶ ಜಗತ್ತಿನ ಎಲ್ಲ ಅಧ್ಯಾತ್ಮಿಕರನ್ನು, ಯೋಗಸಾಧಕರನ್ನು ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತದೆ. ಈ ಮಣ್ಣಿನ ಗುಣವೇ ಹಾಗೆ, ಇಲ್ಲಿ ಎಲ್ಲವೂ ಪವಿತ್ರವಾದುದೇ. ಇಲ್ಲಿನ ನೆಲ, ಜಲ, ಅಗ್ನಿ, ವಾಯು, ಅನಲ, ಸಕಲ ಪ್ರಾಣಿ ಪಕ್ಷಿ ಸಸ್ಯವೃಕ್ಷ ಚರಾಚರಗಳೂ ಪೂಜನೀಯವೇ. ನಮ್ಮ ಈ ಭಕ್ತಿಭಾವದ ಆಚರಣೆಗೆ ಪುರಾಣಗಳ ಪುರಾವೆಯೂ ಸೇರಿದಂತೆ, ವೈಜ್ಞಾನಿಕ ತಳಹದಿಯೂ ಇರುವುದು ಇತ್ತೀಚಿನ ಸಂಶೋಧನೆಗಳಿಂದ ಸಾಬೀತಾಗುತ್ತಿದೆ. ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ವ್ಯಕ್ತಿ, ವಸ್ತು, ವಿಷಯ ಹಾಗೂ ಘಟನೆಗಳ ಹಿಂದೆ ಸಾಮಾನ್ಯ ದೃಷ್ಟಿಕೋನಕ್ಕೆ ನಿಲುಕದ ಯೋಗಸಾಧಕರ ಅಂತಃಚಕ್ಷುಗಳಿಗೆ ಮಾತ್ರ ದರ್ಶನವಾಗುವ ಹಲವಾರು ಸತ್ಯಸಂಗತಿಗಳಿವೆ. ಸ್ವಾಮಿ ಶಿವಾತ್ಮಾನಂದರ 'ಶ್ರೀತುಲಸೀ ಅಮೃತಪಾನ' ಕಥಾ ಸಂಕಲನವು ಈ ಬಗೆಯ ಹಲವಾರು ಪುರಾಣಗಳ ಹಾಗೂ ಅಧ್ಯಾತ್ಮದ ಸೂಕ್ಷ್ಮತೆಯನ್ನು ಮನೋಜ್ಞವಾಗಿ ವಿವರಿಸುತ್ತದೆ.
-ಜಗದೀಶ ಸಾಗರ್ ಬಿ.ಜಿ
