Sathisha Balegara
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
per
- Free Shipping Above ₹200
- Cash on Delivery (COD) Available
Pages - 168
Type - Paperback
ಶಂಕರ್ ನಾಗ್ ಅವರ ಸ್ಪಾಟ್ ಡೆತ್ ಅನೇಕ ವಿವಾದಗಳಿಗೆ ಕಾರಣ ಆಗಿತ್ತು. ಆದರೆ ಅವರು ಬದುಕಿದ್ದಿದ್ದರೆ ಏನಾಗುತ್ತಿತ್ತು...? ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇಂದಿಗೂ ಜೀವಂತ. ಚರಿತ್ರೆಯ ಪುಟಗಳಲ್ಲಿ ಅವರು ಇತಿಹಾಸವಾಗಿ ದಾಖಲಾದರೂ ಅಭಿಮಾನಿಗಳ ಮನದಲ್ಲಿ, ಆರಾಧಿಸುವ ಹೃದಯಗಳಲ್ಲಿ ಅವರು ಇನ್ನೂ ಜೀವಿಸುತ್ತಿದ್ದಾರೆ. ಒಂದಲ್ಲ ಒಂದು ಕಾರಣಗಳಿಂದ ಅಭಿಮಾನಿಗಳು, ಶಂಕರ್ ನಾಗ್ ಅವರ ಬಗ್ಗೆ ಮಾತನಾಡುತ್ತಾರೆ, ಚರ್ಚೆ ನಡೆಸುತ್ತಾರೆ. ಫೇಸ್ಬುಕ್, ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಅವರ ಬಗ್ಗೆ ಪೋಸ್ಟ್ ಕಾಣಬಹುದು. ಅವರನ್ನು ಅಭಿಮಾನಿಗಳು ಮರೆತಿಲ್ಲ. ಆದರೆ ಚಿತ್ರರಂಗ...? ಸರ್ಕಾರ...? ಚಿತ್ರರಂಗ, ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವುದಿರಲಿ, ಸ್ಟಾಚ್ಯು ಕೂಡ ನಿರ್ಮಿಸಲಿಲ್ಲ. ಅಭಿಮಾನಿಗಳು ಅಲ್ಲಲ್ಲಿ ಅವರ ಜನ್ಮದಿನದಂದು ರಕ್ತದಾನ ಶಿಬಿರ, ಪುಣ್ಯ ಸ್ಮರಣೆ ಮಾಡುವುದು ಬಿಟ್ಟರೆ ಚಿತ್ರರಂಗ ಸಂಪೂರ್ಣವಾಗಿ ಈ ವಿಷಯದಲ್ಲಿ ಮೌನವಹಿಸಿದೆ. ಶಂಕರ್ ನಾಗ್ ಅವರ ಹೆಸರನ್ನು ನೆನಪಿಸುವ ಒಂದೇ ಒಂದು ಸಂಗತಿ ಅಂದರೆ ಜೆ.ಪಿ. ನಗರದಲ್ಲಿ ಇರುವ 'ರಂಗ ಶಂಕರ'. ಅರುಂಧತಿ ನಾಗ್ ಒಬ್ಬರೇ ಏಕಾಂಗಿಯಾಗಿ, ಸಾಹಸಿಯಂತೆ 'ರಂಗ ಶಂಕರ'ವನ್ನು ಕಟ್ಟಿದರು. ಅದನ್ನು ಹೊರತು ಪಡಿಸಿದರೆ ಶಂಕರ್ ನಾಗ್ ಅವರ ಹೆಸರಲ್ಲೇನಿದೆ...? ಉಳಿದುಕೊಂಡಿರುವುದು ಕೇವಲ ಅವರ ಅಜರಾಮರ ಹೆಸರು ಮಾತ್ರ...!!