Ravi Belagere
Publisher - ಭಾವನಾ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 224
Type - Paperback
ಅವರು ಹಿರಿಯರು. ತೀರಿಕೊಂಡಿದ್ದಾರೆ. ರಾಜಕುಮಾರ್ ಬಗ್ಗೆ ನನಗೆ ಪ್ರೀತಿಯಿದೆ. ಆರಾಧನೆ ಇಲ್ಲ. ನಾನು ವೀರಾಭಿಮಾನಿಯೂ ಅಲ್ಲ. ಅತ್ತ ದಿಲೀಪ್ ಕುಮಾರ್ ಇದ್ದರೆ, ಇಲ್ಲಿ ರಾಜಕುಮಾರ್ ಅಷ್ಟೆ.
ಲೀಲಾವತಿಯವರಲ್ಲಿ ನಾನು ನನ್ನ ತಾಯಿಯನ್ನು ಕಾಣುತ್ತೇನೆ. ಅವರಿಗೀಗ ಎಂಬತ್ತು ವರ್ಷಹೃದಯ ಸಂಬಂಧಿ ಸಮಸ್ಯೆಗಳಿವೆ. "ಅಮ್ಮಾ, ನೀನೂ ಈ ಹಂತದಲ್ಲಿ ಜನಕ್ಕೆ ಹೇಳಲಿಲ್ಲ ಅಂದ್ರೆ, ನನ್ನ ತಂದೆ ಯಾರೆಂದು ಹೇಳುತ್ತಾರೆ. ರವಿಯವರು ಮನೆಬಾಗಿಲ ತನಕ ಬಂದಿದ್ದಾರೆ. ನೀನು ಮಾತನಾಡು" ಅಂದದ್ದು ವಿನೋರಾಜ್. ಆತ ರಾಜ್ ಮತ್ತು ಲೀಲಾವತಿಯವರ ಮಗ ಅಂತ ಯಾರೂ ಹೇಳಬೇಕಿಲ್ಲ. ಸಾಲಾಗಿ ನಿಲ್ಲಿಸಿದರೆ ನಾಲ್ಕೂ ಜನ ಅಣ್ಣ ತಮ್ಮಂದಿರಂತೆ ಕಾಣುತ್ತಾರೆ. ಆದರೆ ವಿನೋದ್ಗೆ ಉಳಿದ ಮೂವರು ಸೋದರರಿಗಿರುವ ಹಣ, ಭದ್ರತೆ, ಕೀರ್ತಿ- ಯಾವುದೂ ಇಲ್ಲ. He is a karma yogi. ತುಂಬ ದುಡಿಯುತ್ತಾರೆ. ಅವರ ತೋಟದ ತರಕಾರಿ ತಿನ್ನದವನೇ ಪಾಪಿ. ಅದನ್ನು ಮಾಡುವ ಒತ್ತಾಯ ಕೇವಲ ಲೀಲಮ್ಮ ಅವರದು.
ಆಯ್ತು, ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ 'ಜೀವನ ಕಥನ' ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ- ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. belagereravi@gmail.com ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
-ರವಿ ಬೆಳಗೆರೆ